Breaking News
Home / ಬೆಳಗಾವಿ / ಬೆಟಗೇರಿಯಲ್ಲಿ ವಿಭಿನ್ನ ವೈಭವದ ದೀಪಾವಳಿ ಹಬ್ಬ ಆಚರಣೆ

ಬೆಟಗೇರಿಯಲ್ಲಿ ವಿಭಿನ್ನ ವೈಭವದ ದೀಪಾವಳಿ ಹಬ್ಬ ಆಚರಣೆ

Spread the love

ವರದಿ *ಅಡಿವೇಶ ಮುಧೋಳ. ಬೆಟಗೇರಿ

ಬೆಳಗಾವಿ ಜಿಲ್ಲೆಯ ಕರದಂಟೂರು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಮನೆ-ಮನೆಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಗ್ರಾಮದಲ್ಲಿ ರವಿವಾರ ಅ.19ರಂದು ಭರಮ ಹಬ್ಬ (ನೀರು ತುಂಬುವ ಹಬ್ಬ) ಸೇರಿದಂತೆ ಬುಧವಾರ ಅ.22 ದೀಪಾವಳಿ ಪಾಡ್ಯ ದಿನದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಭಿನ್ನ ವೈಭವ, ಸಡಗರದಿಂದ ಅದ್ಧೂರಿಯಾಗಿ ದೀಪಾವಳಿ ಹಬ್ಬ ಆಚರಿಸಲಾಗುತ್ತಿದೆ.
ಗ್ರಾಮದಲ್ಲಿ ಮಂಗಳವಾರ ಅ.21 ಅಮವಾಸ್ಯೆ ಮತ್ತು ಬುಧವಾರ ಅ.22 ದೀಪಾವಳಿ ಪಾಡ್ಯ ದಿನ ಸಂಭ್ರಮಿಸುವ ಸುದಿನ. ಗ್ರಾಮದಲ್ಲಿ ದೀಪಾವಳಿ ಹಬ್ಬ ಬಂದರೆ ನಾಲ್ಕೈದು ದಿನ ಮನೆ ಮುಂದೆ ಹಣತೆಗಳ ಸಾಲು, ಬೆಳಕಿನಿಂದ ಬೆಳಗುವ ದೀಪ ಕಣ್ಣಿದುರು ಬಂದು ನಿಲ್ಲುತ್ತದೆ. ಅಲ್ಲದೇ ಊರಿನ ಪ್ರಮುಖ ಬೀದಿ ದೀಪ, ಹಾಗೂ ಎಲ್ಲಡೆ ವಿದ್ಯುತ್ ದೀಪ ಝಗಮಗಿಸುತ್ತವೆ.
ದೀಪಾವಳಿ ಪಾಡ್ಯ ದಿನದಂದು ತಮ್ಮ ಮನೆಗಳಲ್ಲಿ ಮಹಿಳೆಯರು ರುಚಿಕಟ್ಟಾದ ಅಡುಗೆ ತಯಾರಿಸಿ, ಮನೆಯಲ್ಲಿ ಲಕ್ಷ್ಮೀ ಪೂಜೆ, ಉಡಿ ತುಂಬುವ, ಆರತಿ, ಆರಾಧನೆ ಮುಗಿದ ತಕ್ಷಣ ಸುಮಂಗಲೆಯರ ಊಟದ ಬಳಿಕ ಅಕ್ಕ-ಪಕ್ಕದ ಮನೆಯವರು, ಬಂಧು-ಬಾಂದವರನ್ನು ಕರೆದು ಭೋೀಜನ ಬಡಿಸುವ ಸಂಭ್ರಮ. ಮಕ್ಕಳು, ಹೆಣ್ಣುಮಕ್ಕಳು, ಪುರುಷರು ಸೇರಿದಂತೆ ಮನೆ ಮಂದಿಯಲ್ಲಾ ಹೊಸ ಬಟ್ಟೆ ತೊಟ್ಟು ಸಂಭ್ರಮಿಸುತ್ತಾರೆ. ಹಬ್ಬದ ಪ್ರಯುಕ್ತ ತವರು ಮನೆಗೆ ಬಂದ ನವ ವಧುಗಳಾದ ಹೆಣ್ಣು ಮಕ್ಕಳಿಗೆ ಹಳ್ಳಿಯ ಮನೆಗಳಲ್ಲಿ ಅತಿಥಿ ಗೌರವ. ಹೀಗಾಗಿ ಮನೆ ಮಂದಿಯಲ್ಲಾ ಸೇರಿ ಸಂಭ್ರಮಿಸುವ ಸುದಿನವಾಗಿದೆ.
ಗ್ರಾಮದಲ್ಲಿ ಅಮವಾಸ್ಯೆ ಮತ್ತು ಪಾಡ್ಯ ದಿನದಂದು ಬೆಳಗ್ಗೆಯಿಂದ ರಾತ್ರಿ 10ಗಂಟೆ ತನಕ ಎಲ್ಲರ ಮನೆಗಳಲ್ಲಿ, ಜೀಪ್, ಟ್ಯಾಕ್ಟರ್ ಸೇರಿದಂತೆ ನಾಲ್ಕು ಚಕ್ರದ ವಾಹನಗಳಿಗೆ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಲಕ್ಷ್ಮೀ ದೇವಿಯ ಆರಾಧನೆ, ಪೂಜೆ, ಪುರದೇವರ ದೇವಾಲಯಗಳಲ್ಲಿ ಪುರಜನರಿಂದ ಪೂಜಾ, ನೈವೇದ್ಯ ಸಮರ್ಪನೆ, ಊರಿನ ಎಲ್ಲ ದೇವಾಲಯಗಳಲ್ಲಿ ದೀಪೋತ್ಸವ, ಎಲ್ಲರ ಮನೆಗಳ ಮೇಲೆ ರಂಗು ರಂಗಿನ ಆಕಾಶ ಬುಟ್ಟಿಗಳು ವರ್ಣರಂಜಿತ ಜಗಮಗಿಸುವ ವಿದ್ಯುತ್ ದೀಪಗಳಿಂದ ನೋಡುಗರ ಕಣ್ಮನ ಸೆಳೆಯುತ್ತವೆ.
ಕುರಿಗಳ ಬೆದರಿಸುವ ವೈಭವ:ದೀಪಾವಳಿ ಪಾಡ್ಯಯ ದಿನ ಸಾಯಂಕಾಲ 6 ಗಂಟೆ ಹೊತ್ತಿಗೆ ಊರಿನಲ್ಲಿರುವÀ ಪ್ರಮುಖ ರಸ್ತೆ ಇಲ್ಲವೇ ಸ್ಥಳವೊಂದರಲ್ಲಿ ಕಬ್ಬು, ಜೋಳದ ದಂಟು, ಅವರೆಹೂ ಮತ್ತು ಇನ್ನೀತರ ಹೂ ಗಳಿಂದ ಹಂಪ್ ನಿರ್ಮಿಸಿ, ಪೂಜೆ, ನೈವೇದ್ಯ ಸಮರ್ಪಿಸಿ, ಊರಿನಲ್ಲಿರುವ ಎಲ್ಲ ಕುರಿಹಿಂಡುಗಳನ್ನು ಒಂದಡೆ ಸೇರಿಸಿ ಒಟ್ಟಿಗೆ ಕುರಿಗಳನ್ನು ಬೆದರಿಸಲಾಗುವದು. ಈ ವೈಭವಪೂರಿತ ಕಾರ್ಯಕ್ರಮದಲ್ಲಿ ಮಕ್ಕಳು, ವೃದ್ಧರು, ಮಹಿಳೆಯರು ಸೇರಿದಂತೆ ಊರಿನ ಸಮಸ್ತ ಜನರು ಪಾಲ್ಗೊಂಡು ಸಂಭ್ರಮಿಸುತ್ತಾರೆ.
ಮಹಾಭಾರತ ನೆನಪಿಸುವ ಹಬ್ಬ: ಇಲ್ಲಿಯ ಎಲ್ಲರ ಮನೆಗಳಲ್ಲಿ ತರತರಹದ ಹೂಗಳಿಂದ ಹಲವು ದಿನಗಳಿಂದ ಅಲಂಕಾರಗೊಂಡು 5 ಮತ್ತು 7 ಇಲ್ಲವೇ 9 ದಿನಗಳಿಂದ ಪೂಜಿಸಲ್ಪಟ್ಟ ಸಗಣಿಯಿಂದ ತಟ್ಟಿದ ಪಾಂಡವ(ಪಾಂಡ್ರವ)ರನ್ನು ಮನೆಯ ಮಾಳಗಿ ಮೇಲೆ ಇಡುವ ಸಂಪ್ರದಾಯ ಇದೆ. ಪಾಂಡ್ರವ ಕಳುಹಿಸುವ ಕಾರ್ಯಕ್ರಮ ಮಹಾಭಾರತ ನೆನಪಿಸುವ ಹಬ್ಬವಾಗಿದೆ.

“ಇಲ್ಲಿಯ ಜನರಿಗೆ ದೀಪಾವಳಿ ಹಬ್ಬ ಲಕ್ಷ್ಮೀ ದೇವರ ಮೇಲೆ ಭಯ, ಭಕ್ತಿಯ ಜೋತೆಗೆ ಸಡಗರದಿಂದ ಎಲ್ಲರೂ ಸಂಭ್ರಮಿಸುವ, ರುಚಿಕಟ್ಟಾದ ಭೋಜನ ಸವೆಯುವ ಹಾಗೂ ಮಕ್ಕಳು, ಹೆಣ್ಣುಮಕ್ಕಳು ಹೊಸ ಬಟ್ಟೆ ತೊಟ್ಟು ಖುಷಿಯಿಂದ ಓಡಾಡುವ ಸಂಭ್ರಮದ ಹಬ್ಬವಾಗಿದೆ.

* ಶೋಭಾ ಅಡಿವೇಶ ಮುಧೋಳ. ಗೃಹಿಣಿ,

ಬೆಟಗೇರಿ, ತಾ.ಗೋಕಾಕ


Spread the love

About inmudalgi

Check Also

*ಶಾಸಕ ಭರಮಗೌಡ (ರಾಜು) ಕಾಗೆಗೆ ಒಲಿದು ಬಂದ ಅದೃಷ್ಟ*

Spread the loveಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ಕಾಗವಾಡ ಕ್ಷೇತ್ರಕ್ಕೆ ಬಿಡಿಸಿಸಿ ಬ್ಯಾಂಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ