ಮೂಡಲಗಿ: ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಜೀವಕ್ಕಿರುವ ಹೆಚ್ಚಿನ ಮಹತ್ವ ಯಾವುದಕ್ಕೂ ಇರುವದಿಲ್ಲ ಎಂದು ಮೂಡಲಗಿ ಮತ್ತು ಗೋಕಾಕ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಹೇಳಿದರು. ಅವರು ನಗರದಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ, ತಹಶೀಲ್ದಾರ, ಸಿಡಿಪಿಯು, ಪುರಸಭೆ ಕಾರ್ಯಾಲಯಗಳಿಗೆ ಭೇಟಿ ನೀಡಿ ಸಿಬ್ಬಂದಿಗಳಿಗೆ ಕೊರೋನಾ ಕುರಿತು ಜಾಗೃತಿ ಹಾಗೂ ನಗರದಲ್ಲಿಯ ಲಾಕ್ ಡೌನ್ ಕುರಿತು ವಿಕ್ಷೀಸಿದರು. ಮೂಡಲಗಿ ತಾಲೂಕಿನಲ್ಲಿ ಕೊರೋನಾ ಪಾಸಿಟಿವ್ ಯಾವುದೇ ಪ್ರಕರಣಗಳು …
Read More »Daily Archives: ಏಪ್ರಿಲ್ 21, 2020
ಪತ್ರಕರ್ತರಿಗೆ ಸರಕಾರ ಯಾವುದೇ ತರನಾದ ಸೌಲಭ್ಯಗಳನ್ನು ನೀಡಿಲ್ಲಾ
ಮೂಡಲಗಿ: ಕೊರೋನಾ ವೈರಸ್ ಹಿನ್ನೆಲೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ವೈರಸ್ ಹರಡದಂತೆ ತಟೆಗಟ್ಟಲು ವೈದ್ಯಾಧಿಕಾರಿಗಳು ಹಾಗೂ ಪೋಲಿಸ್ ಇಲಾಖೆ ಹಾಗೂ ಇನ್ನೂ ಕೆಲವು ಅಧಿಕಾರಿಗಳು ಸತತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಸರಕಾರದಿಂದ ಸೌಲಭ್ಯಗಳನ್ನು ನೀಡಿದೆ. ಆದರೆ ಪತ್ರಕರ್ತರಿಗೆ ಯಾಕೆ ಯಾವುದೇ ಸೌಲಭ್ಯ ನೀಡಿಲ್ಲಾ ಎಂದು ಸರಕಾರ ವಿರುದ್ದ ಡಿಕೆ ಶಿವಕುಮಾರ ಫೌಂಡೇಷನ್ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಾಥ ಕರಿಹೊಳಿ ಕಿಡಿಕಾರಿದರು. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು …
Read More »ಬೆಳಗಾವಿ ಹಾಲು ಒಕ್ಕೂಟದಿಂದ 25 ಲಕ್ಷ ರೂ. ಮೊತ್ತದ ಚೆಕ್ಕನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಸ್ತಾಂತರ.
ಬೆಂಗಳೂರು : ಲಾಕ್ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಅಧಿಸೂಚಿತ ಕೊಳಗೇರಿಗಳು, ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ಹಾಗೂ ಪುನರ್ವಸತಿ ಶಿಭಿರಗಳ ನಿವಾಸಿಗಳಿಗೆ ಉಚಿತವಾಗಿ ವಿತರಿಸುತ್ತಿರುವ ನಂದಿನಿ ಹಾಲು ನಾಳೆಯಿಂದ ಏಪ್ರಿಲ್ 30 ರವರೆಗೆ ಅವಧಿಯನ್ನು ಮುಖ್ಯಮಂತ್ರಿಗಳು ವಿಸ್ತರಿಸಿದ್ದಾರೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿದಿನ 7.75 ಲಕ್ಷ ಲೀ. …
Read More »ಎರಡು ದಿನಗಳ ನಂತರ ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಕೋವಿಡ್-೧೯ ಪಾಸಿಟಿವ್ ಪ್ರಕರಣ
ಬೆಳಗಾವಿ- ಸಂತಸದ ಮದ್ಯೆ ಬೆಳಗಾವಿ ಜಿಲ್ಲೆಯಲ್ಲಿ ಮತ್ತೋರ್ವ ಸೊಂಕಿತ ಪತ್ತೆಯಾಗಿದ್ದಾನೆ ಬೆಳಗಾವಿ ಜಿಲ್ಲೆಯಲ್ಲಿ ಮೂವರು ಗುಣಮುಖರಾಗಿ ಡಿಶ್ಚಾರ್ಜ ಆದ ಬೆನ್ನಲ್ಲಿಯೇ ಮತ್ತೋರ್ವ ಸೊಂಕಿತ ಪತ್ತೆಯಾಗಿದ್ದಾನೆ ಮಂಗಳವಾರ ಸಂಜೆ ಬಿಡುಗಡೆಯಾದ ಹೆಲ್ತ ಬುಲಿಟೀನ್ ಬಿಡುಗಡೆಯಾಗಿದ್ದು ಸಂಕೇಶ್ವರದಲ್ಲಿ ಈ ಹಿಂದೆ ಪತ್ತೆಯಾಗಿದ್ದ ಸೊಂಕಿತನ ಸಂಪರ್ಕಕ್ಕೆ ಬಂದಿದ್ದ ಶಂಕಿತನಿಗೆ ಸೊಂಕು ತಗಲಿದ್ದು ದೃಡವಾಗಿದೆ. ಸಂಕೇಶ್ವರದ 20 ವರ್ಷದ ಯುವತಿಯಲ್ಲಿ ಸೊಂಕು ಪತ್ತೆಯಾಗಿದೆ
Read More »ಕೊರೊನಾ ಭೀತಿಗೆ ಮನೆ ಸೇರಿದ ಜನ, ನಗರಕ್ಕೆ ಬಂದ ಕಾಡು ಎಮ್ಮೆಗಳು..!
ಕೊರೊನಾ ಭೀತಿಗೆ ಮನೆ ಸೇರಿದ ಜನ, ಸಂಕೇಶ್ವರ ನಗರಕ್ಕೆ ಬಂದ ಕಾಡು ಎಮ್ಮೆಗಳು..! ಸಂಕೇಶ್ವರ : ಕೊರೊನಾ ಭೀತಿ ಹಿನ್ನೆಲೆ ಇಡೀ ದೇಶವೇ ಲಾಕ್ಡೌನ್ ಆಗಿದೆ. ಸರ್ಕಾರದ ಆದೇಶದ ಮೇರೆಗೆ ಜನ ಮನೆಯಿಂದ ಹೊರಬರುತ್ತಿಲ್ಲ. ಆದರ್ರೇ ಕಾಡು ಎಮ್ಮೆಗಳು ನಿರಾತಂಕವಾಗಿ ನಗರದ ರಸ್ತೆಯಲ್ಲಿ ಓಡಾಡುತ್ತಿವೆ. ಸಂಕೇಶ್ವರ ನಗರದ ಪ್ರದೇಶದಲ್ಲಿನ ರಸ್ತೆಯಲ್ಲಿ ಕಾಡು ಎಮ್ಮೆಗಳು ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿದೆ. ನಿನ್ನೆ ನಗರದ ಸಮೀಪದ ಅಂಕಲಿ ಗ್ರಾಮದಲ್ಲಿ ಕಾಣಿಸಿಕೊಂಡ ಕಾಡು ಎಮ್ಮೆಗಳು …
Read More »ಇಂದು ಒಟ್ಟು ಏಳು ಪ್ರಕರಣಗಳು ಪತ್ತೆ
ಮಂಗಳವಾರ ಮಧ್ಯಾಹ್ನದ ಕರ್ನಾಟಕ ಆರೋಗ್ಯ ಇಲಾಖೆ ಕೊರೋನಾ ಬುಲೆಟಿನ್ ಬಿಡುಗಡೆಯಾಗಿದ್ದು, ಇಂದು ಒಟ್ಟು ಏಳು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ೪೧೫ಕ್ಕೆ ಸೋಂಕಿತರ ಸಂಖ್ಯೆ ಏರಿದೆ. ಬೆಳಗಾವಿ ಮಟ್ಟಿಗೆ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ವಿಜಯಪುರ-೩, ಕಲಬುರ್ಗಿ-೩, ದಕ್ಷಿಣ ಕನ್ನಡ ಒಂದು ಪ್ರಕರಣ ದಾಖಲಾಗಿದೆ. ಬೆಳಗಾವಿ ಜಿಲ್ಲೆಯ ಯಾರಿಗೂ ಸೋಂಕು ತಗುಲಿಲ್ಲ ಈ ಮೂಲಕ ಹಾಟ್ ಸ್ಪಾಟ್ ಬೆಳಗಾವಿ ನಿಟ್ಟುಸಿರು ಬಿಟ್ಟಿದೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 42 ಕೊರೋನಾ ಸೋಂಕು ತಗುಲಿದವರಿದ್ದು, ಇವರೆಲ್ಲರೂ …
Read More »