Breaking News
Home / 2025 / ಫೆಬ್ರವರಿ

Monthly Archives: ಫೆಬ್ರವರಿ 2025

ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸಮುದಾಯದ ಪಾತ್ರ ಅವಶ್ಯ:ಮನೋಜ ಬಂಡ್ರೊಳಿ

ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸಮುದಾಯದ ಪಾತ್ರ ಅವಶ್ಯ:ಮನೋಜ ಬಂಡ್ರೊಳಿ ಮೂಡಲಗಿ 28: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಶೈಕ್ಷಣಿಕವಾಗಿ ಹಾಗೂ ಭೌತಿಕವಾಗಿ ಅಭಿವೃದ್ಧಿ ಆಗಬೇಕಾದರೆ ಸಮುದಾಯದ ಹಾಗೂ ಜನಪ್ರತಿನಿಧಿಗಳ ಪಾತ್ರ ಬಹಳ ಅವಶÀ್ಯ ಎಂದು ಬೆಳಗಾವ ಜಿಲ್ಲಾ ಪಂಚಾಯತ ಸಾಮಾಜಿಕ ಲೆಕ್ಕ ಪರಿಶೋಧನೆಯ ಜಿಲ್ಲಾ ವ್ಯವಸ್ಥಾಪಕ ಮನೋಜ ಬಂಡ್ರೊಳಿ ಹೇಳಿದರು. ಅವರು ತುಕ್ಕಾನಟ್ಟಿಯ ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಾಮಾಜಿಕ ಲೆಕ್ಕ ಪರಿಶೋದನಾ ಕಾರ್ಯಕ್ರಮದ ಕೊನೆಯ …

Read More »

ಎಮ್.ಎಸ್,ಸ್ಸಿ ನರ್ಸಿಂಗ್‍ದಲ್ಲಿ ಅಶ್ವಿನಿಗೆ ಚಿನ್ನದ ಪದಕ

ಎಮ್.ಎಸ್,ಸ್ಸಿ ನರ್ಸಿಂಗ್‍ದಲ್ಲಿ ಅಶ್ವಿನಿಗೆ ಚಿನ್ನದ ಪದಕ ಮೂಡಲಗಿ: ಪಟ್ಟಣದ ಅಶ್ವಿನಿ ಮಾರುತಿ ಬಿರಡಿ ಇತಳು ರಾಜೀವಗಾಂಧಿ ವಿಶ್ವವಿದ್ಯಾಲಯದ ಬಾಗಲಕೋಟೆಯ ಸಜ್ಜಲಶ್ರೀ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಎಮ್.ಎಸ್,ಸ್ಸಿ ನರ್ಸಿಂಗ್ ಓಬಿಜಿ ವಿಭಾಗದ ಪರೀಕ್ಷೆಯಲ್ಲಿ 83.74% ರಷ್ಟು ಅಂಕ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾಳೆ ಎಂದು ಪ್ರಾಚಾರ್ಯ ಡಾ. ದೀಲಿಪ ಎಸ್.ನಾಟೇಕರ ತಿಳಿಸಿದ್ದಾರೆ.

Read More »

ರಾಜ್ಯಸಭಾ ಸಂಸದರ ಅನುದಾನದಲ್ಲಿ ಬಸ್ ತಂಗುದಾನ,ಬಯಲು ರಂಗ ಮಂದಿರ ಉದ್ಘಾಟನೆ

ರಾಜ್ಯಸಭಾ ಸಂಸದರ ಅನುದಾನದಲ್ಲಿ ಬಸ್ ತಂಗುದಾನ,ಬಯಲು ರಂಗ ಮಂದಿರ ಉದ್ಘಾಟನೆ ಕೌಜಲಗಿ: ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ನಾಳೆ ಶನಿವಾರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನದಲ್ಲಿ ಗೋಕಾಕ ತಾಲೂಕಿನ ಕೌಜಲಗಿ, ರಡೇರಟ್ಟಿ, ಮನ್ನಿಕೇರಿ, ಮೆಳವಂಕಿ ಗ್ರಾಮಗಳಲ್ಲಿ ನಿರ್ಮಾಣವಾದ ಬಸ್ ತಂಗುದಾನ ಮತ್ತು ಬಯಲು ರಂಗ ಮಂದಿರದ ಕಟ್ಟಡ ಉದ್ಘಾಟನೆ ನೇರವೇರಿಸಲಿದ್ದಾರೆ. ಮೆಳವಂಕಿ-ಬೆಳಿಗ್ಗೆ 11-00, ಕೌಜಲಗಿ-ಮಧ್ಯಾಹ್ನ 3-00,ರಡ್ಡೇರಟ್ಡಿ-ಸಂಜೆ 4-00,ಮನ್ನಿಕೇರಿ- 5-00 ಗಂಟೆಗೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆಯಲ್ಲಿ …

Read More »

ಗೋಕಾಕ್- ಮೂಡಲಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ- ಬೇಸಿಗೆಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಈಗೀನಿಂದಲೇ ಅಗತ್ಯ ಕ್ರಮಗಳನ್ನು ಕೈಕೊಳ್ಳುವಂತೆ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಲ್ಲಿಯ ಎನ್‌ಎಸ್‌ಎಫ್ ಕಚೇರಿಯಲ್ಲಿ ಶುಕ್ರವಾರದಂದು ಜರುಗಿದ ಮೂಡಲಗಿ ಮತ್ತು ಗೋಕಾಕ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಳೆಯ ಮಾರ್ಚ ತಿಂಗಳಿನಿ೦ದ ಬೇಸಿಗೆಯು ಆರಂಭವಾಗಲಿದ್ದು, ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ …

Read More »

‘ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ನೀಡಬೇಕು’- ಸಾಹಿತಿ ಬಾಲಶೇಖರ ಬಂದಿ.

ಮೂಡಲಗಿ ತಾಲ್ಲೂಕಿನ ಅರಭಾವಿಯ ಆಂಜನೇಯ ಗ್ರಾಮೀಣ ಶಿಕ್ಷಣ ಸಂಸ್ಥೆಯ ಆಂಜನೇಯ ಅನುದಾನಿತ ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 33ನೇ ವಾರ್ಷಿಕೋತ್ಸವ ಹಾಗೂ ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ಶಿವಯ್ಯ ಸ್ವಾಮೀಜಿ ಉದ್ಘಾಟಿಸಿದರು. ‘ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ನೀಡಬೇಕು’ ಮೂಡಲಗಿ: ‘ಶಾಲಾ ಮಕ್ಕಳಿಗೆ ಕೇವಲ ಅಕ್ಷರ ಕಲಿಸಿದರೆ ಸಾಲದು ಅದರೊಂದಿಗೆ ಸಂಸ್ಕಾರವು ಅವಶ್ಯವಿದೆ’ ಎಂದು ಸಾಹಿತಿ ಹಾಗೂ ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು. ತಾಲ್ಲೂಕಿನ ಅರಭಾವಿಯ ಆಂಜನೇಯ …

Read More »

ಶಿವನಾಮಸ್ಮರಣೆಯಿಂದ ಮನುಷ್ಯನ ಬದುಕಿಗೆ ನೆಮ್ಮದಿ: ಬಸವರಾಜ ಪಣದಿ

ಶಿವನಾಮಸ್ಮರಣೆಯಿಂದ ಮನುಷ್ಯನ ಬದುಕಿಗೆ ನೆಮ್ಮದಿ: ಬಸವರಾಜ ಪಣದಿ ಬೆಟಗೇರಿ:ಮಹಾಶಿವರಾತ್ರಿ ದಿನದಂದು ಪ್ರತಿಯೊಬ್ಬರೂ ಶಿವನ ಧ್ಯಾನ ಮಾಡಿ, ಶಿವನ ಚೈತನ್ಯ ಶಕ್ತಿಯಿಂದ ವಿಶ್ವ ಸಮೃದ್ಧವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶಿವಶರಣ, ಆಧ್ಯಾತ್ಮ ಕಾರ್ಯಕ್ರಮಗಳ ಆಯೋಜಕ ಬಸವರಾಜ ಪಣದಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಬುಧವಾರದಂದು ಹಮ್ಮಿಕೊಂಡಿದ್ದ ಶಿವ ಜಾಗರಣೆ ಮತ್ತು ಮಹಾಪೂಜಾ ಕಾರ್ಯಕ್ರಕ್ಕೆ ಚಾಲನೆ ನೀಡಿ ಮಾತನಾಡಿ, ಶಿವನಾಮಸ್ಮರಣೆ ಮಾಡುವ ಮನುಷ್ಯನ …

Read More »

ದಶಮಾನೋತ್ಸವ ಸಂಭ್ರಮ ಕಂಡ ದುರದುಂಡೀಶ್ವರ ಕ್ರೆಡಿಟ್ ಸಹಕಾರಿ ಸಂಘದ ನೂತನ ಕಚೇರಿಗೆ ಅರಭಾವಿ ಶಾಸಕರೂ ಆಗಿರುವ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಭೇಟಿ

ಗೋಕಾಕ- ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರು ಪರಸ್ಪರ ಸಹಕಾರ ಮನೋಭಾವನೆಯಿಂದ ಕೈ ಜೋಡಿಸಿದರೆ ಮಾತ್ರ ಸಂಘ- ಸಂಸ್ಥೆಗಳು ಬೆಳೆಯಲು ಸಾಧ್ಯವಾಗುತ್ತವೆ. ಜೊತೆಗೆ ಗ್ರಾಹಕರ ಹಿತಕ್ಕೆ ಅನುಗುಣವಾಗಿ ಕೆಲಸವನ್ನು ನಿರ್ವಹಿಸಿದರೆ ಸಂಘಗಳು ಬೆಳವಣಿಗೆ ಹೊಂದುತ್ತವೆ. ಇದಕ್ಕೆ ದುರದುಂಡೀಶ್ವರ ಸಹಕಾರಿ ಸಂಘವೇ ನೈಜ ಉದಾಹರಣೆಯಾಗಿದೆ ಎಂದು ಅರಭಾವಿ ಶಾಸಕರೂ ಆಗಿರುವ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಇತ್ತಿಚೆಗೆ ದಶಮಾನೋತ್ಸವ ಸಂಭ್ರಮ ಕಂಡ ತಾಲ್ಲೂಕಿನ ದುರದುಂಡಿ ಗ್ರಾಮದ ದುರದುಂಡೀಶ್ವರ ಕ್ರೆಡಿಟ್ ಸಹಕಾರಿ …

Read More »

ವಿವಿಧೆಡೆ ಗ್ರಾಮಗಳಲ್ಲಿ ಕಾಮಗಾರಿಗಳಿಗೆ ಜಗದೀಶ ಶೆಟ್ಟರ ಚಾಲನೆ

ವಿವಿಧೆಡೆ ಗ್ರಾಮಗಳಲ್ಲಿ ಕಾಮಗಾರಿಗಳಿಗೆ ಜಗದೀಶ ಶೆಟ್ಟರ ಚಾಲನೆ ಮೂಡಲಗಿ: ತಾಲೂಕಿನಲ್ಲಿ ಬರುವಂತಹ 5 ಗ್ರಾಮಗಳಲ್ಲಿ ತಲಾ ರೂ.5 ಲಕ್ಷ ಅನುದಾನದಡಿಯಂತೆ ಒಟ್ಟು 25 ಲಕ್ಷ ರೂ. ಮೊತ್ತದ ಬೆಳಗಾವಿ ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ದಿ ಯೋಜನೆಯ ಕಾಮಗಾರಿಗಳಿಗೆ ಬೆಳಗಾವಿ ಲೋಕಸಾ ಸದಸ್ಯರು ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಚಾಲನೆ ನೀಡಿದರು. ತಾಲೂಕಿನಲ್ಲಿಯ ಹೊನಕುಪ್ಪಿಯ ಶ್ರೀ ಉದ್ದಮ್ಮ ದೇವಿ ದೇವಸ್ಥಾನ, ಬಳೋಬಾಳದ ಶ್ರೀ ಬಸವಯೋಗ ಮಂಟಪ, ಬಿಸನಕೊಪ್ಪದ ಶ್ರೀ ಬಸವೇಶ್ವರ …

Read More »

 ಫೆ. 27ರಿಂದ ಮಾ. 4ರ ವರೆಗೆ  ಹೊನಕುಪ್ಪಿ ಚಂದ್ರಮ್ಮಾದೇವಿ ಜಾತ್ರೆ

ಮಾ. 3ರಂದು ಭಗೀರಥ ಪೀಠದ ಪುರಷೋತ್ತಾಮಾನಂದ ಸ್ವಾಮೀಜಿ ಆಗಮನ ಮೂಡಲಗಿ: ತಾಲ್ಲೂಕಿನ ಹೊನಕುಪ್ಪಿಯ ಚಂದ್ರಮ್ಮದೇವಿ ಜಾತ್ರೆಯು ಶರಣ ಬಸಪ್ಪ ಅಜ್ಜನವರ ಸಾನ್ನಿಧ್ಯದಲ್ಲಿ ಫೆ. 27ರಿಂದ ಮಾ. 4ರ ವರೆಗೆ ಜರುಗಲಿದೆ. ಫೆ. 27ರಂದು ಬೆಳಿಗ್ಗೆ 3ಕ್ಕೆ ಘಟಸ್ಥಾಪನೆ, ಸಂಜೆ 7ಕ್ಕೆ ಪ್ರವಚನ ಪ್ರಾರಂಭವಾಗುವುದು. ರಾತ್ರಿ 10ಕ್ಕೆ ಶ್ರೀಕೃಷ್ಣ ಪಾರಿಜಾತ ಇರುವುದು. ಫೆ. 28ರಂದು ಸಂಜೆ 7ಕ್ಕೆ ಪ್ರವಚನ, ರಾತ್ರಿ 10ಕ್ಕೆ ನವಲಗುಂದದ ಇಮಾಮ್ ಸಾಬ ವಲ್ಲೆಪ್ಪನವರ ಅವರಿಂದ ತತ್ವ ಪದಗಳು …

Read More »

೭೫ ರ ವಜ್ರ ಮಹೋತ್ಸವಕ್ಕೇ ಸಾಕ್ಷಿಕರಿಸಿದ ಗಣೇಶವಾಡಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ- ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ

೭೫ ರ ವಜ್ರ ಮಹೋತ್ಸವಕ್ಕೇ ಸಾಕ್ಷಿಕರಿಸಿದ ಗಣೇಶವಾಡಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ- ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ಘಟಪ್ರಭಾ – ೧೯೪೯ ರಲ್ಲಿ ಆರಂಭಗೊಂಡ ಗಣೇಶವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಈ ಭಾಗದಲ್ಲಿ ಶಿಕ್ಷಣದ ಅರಿವು ಮೂಡಿಸಿ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ರೂಪಿಸಿದ್ದಲ್ಲದೇ ಸಮಾಜದಲ್ಲಿ ಬದಲಾವಣೆಗೆ ಸಾಕ್ಷಿಯಾಗಿದ್ದು, ಈ ಶಾಲೆಗೆ ಈಗ ೭೫ ರ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸುತ್ತಿರುವುದು ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದೆ ಎಂದು …

Read More »