Breaking News
Home / ತಾಲ್ಲೂಕು / ಬಡ ಕೂಲಿ ಕಾರ್ಮಿಕರ ನೇರವಿಗೆ ದಾಲ್ಮೀಯಾ ಸಿಮೆಂಟ ಕಾರ್ಖಾನೆ

ಬಡ ಕೂಲಿ ಕಾರ್ಮಿಕರ ನೇರವಿಗೆ ದಾಲ್ಮೀಯಾ ಸಿಮೆಂಟ ಕಾರ್ಖಾನೆ

Spread the love

ಬಡ ಕೂಲಿ ಕಾರ್ಮಿಕರ ನೇರವಿಗೆ ದಾಲ್ಮೀಯಾ ಸಿಮೆಂಟ ಕಾರ್ಖಾನೆ

ಮೂಡಲಗಿ: ಲಾಕ್ ಡೌನ್‍ದಂತಹ ಸಂಕಷ್ಟದ ಕಾಲದಲ್ಲಿ ದಿನಗೂಲಿ ಕಾರ್ಮಿಕರುಕೂಲಿ ಕೆಲಸ ಇರದೆ ಸಂಕಷ್ಟದಲ್ಲಿರುವ ಅತೀ ಬಡ ಕೂಲಿ ಕಾರ್ಮಿಕರನ್ನು ಗುರುತಿಸಿ ಯಾದವಾಡ ದಾಲ್ಮೀಯಾ ಸಿಮೆಂಟ ಕಾರ್ಖಾನೆಯಿಂದ ದಿನ ನಿತ್ಯದ ಆಹಾರ ಧಾನ್ಯಗಳನ್ನು ಕಿಟ್‍ಗಳನ್ನು ಯಾದವಾಡದಲ್ಲಿ ವಿತರಿಸಿಲ್ಲಾಯಿತು.

ದಾಲ್ಮೀಯಾ ಕಾರ್ಖಾನೆಯ ಕಾರ್ಯಕ್ರಮ ಸಂಯೋಜಕ ಚೇತನ ವಾಘಮೋರೆ ಮಾತನಾಡಿ, ಲಾಕ್ ಡೌನ್ ವೇಳೆಯಲ್ಲಿ ಸರಕಾರದ ನಿಯಮಗಳನ್ನು ಚಾಚುತಪ್ಪದೇ ಪಾಲಿಸಬೇಕು. ಮನೆಯಿಂದ ಯಾರು ಅನಾವಶ್ಯಕವಾಗಿ ಹೊರಗೆ ಬರಬೇಡಿ. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮಾರಕ ಕೊರೋನಾ ಸೊಂಕು ಸೋಲಿಸಲು ಎಲ್ಲರೂ ಒಂದಾಗಿ ಹೋರಾಡುವಂತೆ ವಿನಂತಿಸಿಕೊಂಡರು.
ಈ ವೇಳೆಯಲ್ಲಿ ದಾಲ್ಮಿಯಾ ಕಾರ್ಖಾನೆಯ ಡಾ: ನೀಲಕಂಠಗೌಡ, ಆಡಳಿತಾಧಿಕಾರಿ ಸುರೇಶ ಪಿಳ್ಳೆ, ಸಿ.ಎಸ್.ಆರ್ ಅಧಿಕಾರಿ ಚೇತನ ವಾಘಮೋರೆ, ಶ್ರೀಶೈಲ್ ಡೋಣಿ, ಯಾದವಾಡ ಗ್ರಾ.ಪಂ ಪಿಡಿಒ ಹುಡೇದ, ಸಿಬ್ಬಂದಿ ಬರ್ಗದವರು ಭಾಗವಹಿಸಿದ್ದರು.


Spread the love

About inmudalgi

Check Also

ಬಸವಣ್ಣನವರು ಸಕಲ ಜೀವಿಗಳಿಗೆ ಶ್ರೇಯಸ್ಸು ಬಯಸಿದ್ದರು: ಬಸವಂತ ಕೋಣಿ

Spread the loveವರದಿ: ಅಡಿವೇಶ ಮುಧೋಳ. ಬೆಟಗೇರಿ:ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಬಸವಣ್ಣನವರು ವಿಶ್ವದ ಬಹುದೊಡ್ಡ ಸಮಾಜ ಸುಧಾರಕರಾಗಿದ್ದಾರೆ. ಬಸವಣ್ಣನವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ