ಅರಳಿಮಟ್ಟಿಯಲ್ಲಿ ಭಜನಾ ಕಾರ್ಯಕ್ರಮ
ಮೂಡಲಗಿ: ತಾಲೂಕಿನ ಅರಳಿಮಟ್ಟಿ ಗ್ರಾಮದಲ್ಲಿ ಚಕ್ರವರ್ತಿ ಶ್ರೀ ಸದಾಶಿವ ಮುತ್ಯಾನ ಮಠದಲ್ಲಿ ಭಜನಾ ಕಾರ್ಯಕ್ರಮ ದಿ.15 ಮತ್ತು 16 ರಂದು ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ರವಿವಾರ ದಿ.15 ರಂದು ರಾತ್ರಿ 8 ಗಂಟೆಗೆ ಭಜನಾ ಕಾರ್ಯಕ್ರಮ ಆರಂಭವಾಗುವುದು, ಸೋಮವಾರ ದಿ.16 ರಂದು ಬೆಳಿಗೆ ಶ್ರೀ ಸದಾಶಿವ ಮುತ್ಯಾನ ಕರ್ತೃ ಗದ್ದುಗೆಗೆ ಮತ್ತು ಚಂದ್ರಗಿರಿದೇವಿಗೆ ಅಭಿಷೇಕ ಜರುಗುವುದು. ನಂತರ ಗ್ರಾಮದ ಎಲ್ಲ ದೇವರಿಗೆ ಉಡಿ ತುಂಬುವುದು ಮಧ್ಯಾಹ್ನ 12 ಅನ್ನ ಸಂತಪರ್ಣೆ ಜರುಗುವುದು.
ಈ ಕಾರ್ಯಕ್ರಮದಲ್ಲಿ ಕೋಲೂರು ಬಬಲಾದಿ ಮಠದ ಶ್ರೀ ವೇದಮೂರ್ತಿ ಚಿಕ್ಕಯ್ಯ ಮಹಾಸ್ವಾಮಿಗಳು ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತ್ತಿತರರು ಭಾಗವಹಿಸುವರು ಎಂದು ಸಂಘಟಕರು ತಿಳಿಸಿದ್ದಾರೆ.