ಯೋಧನಿಗೆ ಸನ್ಮಾನ ಮೂಡಲಗಿ: ಸಮೀಪದ ಪಟಗುಂದಿ ಗ್ರಾಮದ ನಿವಾಸಿ ಯೋಧ ವಿರೂಪಾಕ್ಷ ಅಂಗಡಿ ಭಾರತೀಯ ಸೇನೆ ವತಿಯಿಂದ ದಕ್ಷಿಣ ಸ್ವೀಡಾನ್ ದೇಶದಲ್ಲಿ ೭ ತಿಂಗಳು ಶಾಂತಿದೂತನಾಗಿ ಸೇವೆ ಸಲ್ಲಿಸಿ ತಾಯ್ನಾಡಿಗೆ ಮರಳಿ ಬಂದಿದ್ದರಿದ ಗ್ರಾಮದಲ್ಲಿ ಸನ್ಮಾನಿಸಿ ಸ್ವಾಗತಿಸಲಾಯಿತು. ದೆಹಲಿ, ಬೆಂಗಳೂರು ಸೇರಿದಂತೆ ನಾನಾ ಕಡೆ ಸೇವೆ ಸಲ್ಲಿಸಿ ಅಲ್ಲಿಂದ ದಕ್ಷಿಣ ಸ್ವೀಡಾನ್ ಗೆ ತೆರಳಿ ೭ ತಿಂಗಳ ನಂತರ ಮರಳಿದ್ದಾರೆ. ನಂತರ ಪಂಜಾಬ್ ಗೆ ತೆರಳಿ ಮತ್ತೆ ಸೇವೆ ಮುಂದುವರಿಸಲಿದ್ದಾರೆ. …
Read More »*ಹಿಡಕಲ್ ಜಲಾಶಯದಿಂದ ಜಿಆರ್ಬಿಸಿ, ಜಿಎಲ್ಬಿಸಿ ಹಾಗೂ ಸಿಬಿಸಿ ಕಾಲುವೆಗಳಿಗೆ ನಾಳೆಯಿಂದ 7 ದಿನಗಳವರೆಗೆ ನೀರು ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ*
*ಹಿಡಕಲ್ ಜಲಾಶಯದಿಂದ ಜಿಆರ್ಬಿಸಿ, ಜಿಎಲ್ಬಿಸಿ ಹಾಗೂ ಸಿಬಿಸಿ ಕಾಲುವೆಗಳಿಗೆ ನಾಳೆಯಿಂದ 7 ದಿನಗಳವರೆಗೆ ನೀರು ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ* *ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಮಾತ್ರ ನೀರನ್ನು ಬಳಕೆ ಮಾಡಲು ಮನವಿ ಮಾಡಿಕೊಂಡ ಬಾಲಚಂದ್ರ ಜಾರಕಿಹೊಳಿ* ಗೋಕಾಕ: ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಹಾಗೂ ಸಿಬಿಸಿ ಕಾಲುವೆಗಳಿಗೆ ನಾಳೆ ದಿ. 22 ರಿಂದ 7 ದಿನಗಳವರೆಗೆ ಕುಡಿಯುವ ನೀರಿನ ಉದ್ಧೇಶಕ್ಕಾಗಿ 2.963 ಟಿಎಂಸಿ ನೀರನ್ನು …
Read More »ಏ.23 ರಂದು ಬೆಟಗೇರಿಯಲ್ಲಿ ಬಸವ ಜಯಂತಿ ಆಚರಣೆ
ಏ.23 ರಂದು ಬೆಟಗೇರಿಯಲ್ಲಿ ಬಸವ ಜಯಂತಿ ಆಚರಣೆ * ಜೋಡೇತ್ತುಗಳ ಭವ್ಯ ಮೆರವಣಿಗೆ * ಕಿರು ಕಾಣಿಕೆ * ಸನ್ಮಾನ ಕಾರ್ಯಕ್ರಮ ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಸವ ಅಭಿಮಾನಿ ಬಳಗದ ಸಹಯೋಗದಲ್ಲಿ ಬಸವ ಜಯಂತಿಯ ಆಚರಣೆ ಕಾರ್ಯಕ್ರಮ ಇದೇ ಏ.23ರಂದು ಅದ್ಧೂರಿಯಾಗಿ ನಡೆಯಲಿದೆ. ಗ್ರಾಮದ ಅಶ್ವಾರೊಢ ಬಸವೇಶ್ವರ ವೃತ್ತದಲ್ಲಿ ಮುಂಜಾನೆ 8 ಗಂಟೆಗೆ ಬಸವಣ್ಣನವರ ಅಶ್ವಾರೊಢ ಮೂರ್ತಿಗೆ ಮಹಾಪೂಜೆ, ಪುಷ್ರ್ಪಾಪನೆ, ಷಟಸ್ಥಲ್ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು, ಸುಣಧೋಳಿ …
Read More »ಆರ್.ಡಿ.ಎಸ್. ಪಿ.ಯು ಕಾಲೇಜು ಶೇ 76 ರಷ್ಟು ಫಲಿತಾಂಶ
:: ಆರ್.ಡಿ.ಎಸ್. ಪಿ.ಯು ಕಾಲೇಜು ಶೇ 76 ರಷ್ಟು ಫಲಿತಾಂಶ :: ಮೂಡಲಗಿ : ಇಲ್ಲಿಯ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯವು ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಶೇ76ರಷ್ಟು ಫಲಿತಾಂಶವನ್ನು ಪಡೆದುಕೊಂಡಿದೆ ಎಂದು ಕಾಲೇಜು ಪ್ರಾಚಾರ್ಯರು ತಿಳಿಸಿರುತ್ತಾರೆ. ಕಲಾ ವಿಭಾಗದಲ್ಲಿ ಸಾನಿಯಾ ಅಮೀನಸಾಬ ನದಾಫ 573 ( ಶೇ 96) ಅಂಕ ಪಡೆದು ಕಾಲೇಜಿಗೆ ಪ್ರಥಮ. ರೇಷ್ಮಾ ವಿಜಯ ಮಾದರ 572 (ಶೇ 95.50) ಅಂಕ ಪಡೆದು ದ್ವೀತಿಯ. ಲಕ್ಷ್ಮೀ …
Read More »ಭಾರತೀಯ ಮೂಲ ಸಂಸ್ಕøತಿ ಉಳಿಸುವಲ್ಲಿ ತಾಯಂದಿರ ಜವಾಬ್ದಾರಿ ಅಧಿಕ- ಪ್ರೊ. ಬಿ.ಆರ್. ಪೊಲೀಸ್ಪಾಟೀಲ
ಭಾರತೀಯ ಮೂಲ ಸಂಸ್ಕøತಿ ಉಳಿಸುವಲ್ಲಿ ತಾಯಂದಿರ ಜವಾಬ್ದಾರಿ ಅಧಿಕ ಗೋಕಾಕ: ‘ಭಾರತೀಯ ಮೂಲ ಸಂಸ್ಕøತಿ, ಆಚರಣೆ ಮತ್ತು ಪರಂಪರೆಗಳು ಉಳಿಸುವಲ್ಲಿ ತಾಯಂದಿರ ಜವಾಬ್ದಾರಿ ಅಧಿಕವಿದೆ’ ಎಂದು ನಾಟಕಕಾರ ಪ್ರೊ. ಬಿ.ಆರ್. ಪೊಲೀಸ್ಪಾಟೀಲ ಅಭಿಪ್ರಾಯಪಟ್ಟರು. ಹಿಂದು ಮುಸ್ಲಿಂ ಸೌಹಾರ್ದತೆಯ ಸುಕ್ಷೇತ್ರ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಸಿದ್ಧ ಸಂಸ್ಥಾನ ಪೀಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಾಹಿತ್ಯ, ಸಂಸ್ಕøತಿ ಸೌರಭ ಕಾರ್ಯಕ್ರಮದಲ್ಲಿ ‘ಎಂಥಾ ಚೆಂದಿತ್ತ ಹಿಂದೂಸ್ತಾನ’ ವಿಷಯ ಕುರಿತು ಉಪನ್ಯಾಸ ನೀಡಿದ …
Read More »ಶ್ರೀ ಶಿವಬೋಧರಂಗ ಸೊಸಾಯಿಟಿಗೆ ರೂ.5.10 ಕೋಟಿ ನಿವ್ವಳ ಲಾಭ
ಶ್ರೀ ಶಿವಬೋಧರಂಗ ಸೊಸಾಯಿಟಿಗೆ ರೂ.5.10 ಕೋಟಿ ನಿವ್ವಳ ಲಾಭ ಮೂಡಲಗಿ: ಪಟ್ಟಣದ ಶ್ರೀ ಶಿವಬೋಧರಂಗ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ 2022-23ನೇ ಸಾಲಿನ ಅಂತ್ಯಕ್ಕೆ ರೂ. 5.10 ಕೋಟಿ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸೊಸಾಯಿಟಿಯ ಅಧ್ಯಕ್ಷ ರೇವಪ್ಪ ಕುರಬಗಟ್ಟಿ ಅವರು ತಿಳಿಸಿದರು. ಸೊಸಾಯಿಟಿಯ ಸಭಾಭನದಲ್ಲಿ ಸಂಘದ ಪ್ರಗತಿಯ ಬಗ್ಗೆ ತಿಳಿಸಲು ಮಂಗಳವಾರ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಸೊಸಾಯಿಟಿಯ ನಿರ್ದೇಶಕ ರವೀಂದ್ರ ಸೋನವಾಲ್ಕರ ಮಾತನಾಡಿ, ಸದ್ಯ ಸೊಸಾಯಿಟಿಯು …
Read More »ಏ.23ರಂದು ಮುನ್ಯಾಳ-ರಂಗಾಪುರ ಸದಾಶಿವಯೋಗೀಶ್ವರ ಜಾತ್ರೆ
ಏ.23ರಂದು ಮುನ್ಯಾಳ-ರಂಗಾಪುರ ಸದಾಶಿವಯೋಗೀಶ್ವರ ಜಾತ್ರೆ ಮೂಡಲಗಿ: ತಾಲ್ಲೂಕಿನ ಮುನ್ಯಾಳ-ರಂಗಾಪೂರದ ಶ್ರೀ ಸದಾಶಿವಯೋಗೀಶ್ವರ ಜಾತ್ರಾ ಮಹೋತ್ಸವದ ರಥೋತ್ಸವವು ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಏ. 23ರಂದು ಸಂಜೆ 5.30ಕ್ಕೆ ಜರುಗಲಿದೆ. ಬುಧವಾರ ರಥದ ಗಾಲಿಗಳ ಪೂಜೆ ಜರುಗಿತು. ಏ. 21ರಂದು ಸಂಜೆ 6.30ಕ್ಕೆ ಜರುಗಲಿರುವ ಸದ್ವಿಚಾರ ಚಿಂತನ ಕಾರ್ಯಕ್ರಮದಲ್ಲಿ ಹರ್ಲಾಪುರ-ಬಿಜಗುಪ್ಪಿ ಢವಳೇಶ್ವರಮಠದ ರೇಣುಕ ಶಿವಯೋಗಿ ಸ್ವಾಮೀಜಿಗಳಿಂದ ಚಿಂತನ ಇರುವುದು. ಶರೀಪ ಶಿವಯೋಗಿಗಳು, ಈಶ್ವರ ಬಡಿಗೇರ, ಲಕ್ಷ್ಮಣ ದೇವರು, …
Read More »ಅರಭಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ನಾಮಪತ್ರ ಸಲ್ಲಿಕೆ
ಅರಭಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ಮೂಡಲಗಿ : ಅರಭಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇಂದು ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ಬುಧವಾರದಂದು ಇಲ್ಲಿನ ತಹಶೀಲ್ದಾರ ಕಛೇರಿಗೆ ತೆರಳಿದ ಬಾಲಚಂದ್ರ ಜಾರಕಿಹೊಳಿ ಅವರು ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಅವರಿಗೆ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು. ಮುಂಜಾನೆ 11 ಗಂಟೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅತ್ಯಂತ …
Read More »ಸಂಭ್ರಮದಲ್ಲಿ ಜರುಗಿದ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಪಲ್ಲಕ್ಕಿ ಉತ್ಸವ
ಸಂಭ್ರಮದಲ್ಲಿ ಜರುಗಿದ ಸಾವಳಗಿಯ ಜಗದ್ಗುರು ಶಿವಲಿಗೇಶ್ವರ ಪಲ್ಲಕ್ಕಿ ಉತ್ಸವ ಗೋಕಾಕ: ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರಾಗಿರುವ ತಾಲ್ಲೂಕಿನ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರರ ಜಾತ್ರೆಯ ಪಲ್ಲಕ್ಕಿ ಮಹೋತ್ಸವವು ಸಹಸ್ರಾರು ಭಕ್ತರ ಸಂಗಮದಲ್ಲಿ ಸಂಭ್ರಮ, ಸಡಗರದಿಂದ ಜರುಗಿತು. ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಹಸಿರು ರಾಜಪೋಷಾಕಿನೊಡನೆ ಸಕಲ ರಾಜಮರ್ಯಾದೆ, ಬಿರುದಾವಳಿಗಳಿಂದ ಅಲಂಕೃತರಾಗಿ, ಮಂಗಳವಾದ್ಯ, ಭಜನೆ, ಡೊಳ್ಳು, ಮುತ್ಯೈದಿಯರ ಆರತಿ, ಕಳಶ, ಕನ್ನಡಿಗಳೊಂದಿಗೆ ಸಾವಳಗಿ, ಮುತ್ನಾಳ, ನಂದಗಾಂವ, ಖಾನಾಪುರ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ …
Read More »ವಿಜ್ಞಾನವಿಲ್ಲದ ಆಧುನಿಕ ಪ್ರಪಂಚವನ್ನು ಊಹಿಸಲು ಅಸಾಧ್ಯ – ಡಾ.ಸುರೇಶ ಉಕ್ಕಲಿ
ಮೂಡಲಗಿ: ವಿಜ್ಞಾನವಿಲ್ಲದ ಆಧುನಿಕ ಪ್ರಪಂಚವನ್ನು ಊಹಿಸಲು ಅಸಾಧ್ಯ, ವಿಜ್ಞಾನ ಪ್ರಗತಿಯ ಸಂಕೇತವಾಗಿದೆ, ನಾವು ಬಳಸುವ ಪ್ರತಿ ವಸ್ತುವು ವಿಜ್ಞಾನದ ಕೊಡುಗೆಯಾಗಿದ್ದು, ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಯಿಂದ ದೇಶದ ಪ್ರಗತಿ ದರ ಅಳೆಯಲಾಗುವುದು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮೀತಿಯ ಶೈ.ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ.ಸುರೇಶ ಉಕ್ಕಲಿ ಅಭಿಪ್ರಾಯ ಪಟ್ಟರು. ತಾಲೂಕಿನ ಧರ್ಮಟ್ಟಿ ಗ್ರಾಮದ ಬಡ್ಡಿ ಸೆಂಟ್ರಲ್ ಶಾಲೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮೀತಿ ಮೂಡಲಗಿ ತಾಲೂಕಾ ಘಟಕ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ …
Read More »
IN MUDALGI Latest Kannada News