Breaking News
Home / inmudalgi (page 171)

inmudalgi

ಸತತ ಪ್ರಯತ್ನ, ಶ್ರದ್ಧೆ, ಶ್ರಮ, ನಿರಂತರ ಅಧ್ಯಯನದಿಂದಾಗಿ ಯಶಸ್ಸು ಸಾಧ್ಯ- ಸಂಜಯ ಯಾದಗುಡೆ

  ಮೂಡಲಗಿ: ಸತತ ಪ್ರಯತ್ನ, ಶ್ರದ್ಧೆ, ಶ್ರಮ, ನಿರಂತರ ಅಧ್ಯಯನದಿಂದಾಗಿ ಯಶಸ್ಸು ಸಾಧ್ಯವಾಗುವದು. ಕಲಿಕೆಯ ಜೊತೆಯಲ್ಲಿ ಪಠ್ಯೇತರ  ಚಟುವಟಿಕೆಗಳಿಗೆ  ಆದ್ಯತೆ ನೀಡುವ ಮೂಲಕ ಆರೋಗ್ಯಯುತ ಶರೀರ ಕಾಯ್ದುಕೊಂಡು ಪರೀಕ್ಷೆಗಳನ್ನು ಎದುರಿಸಿ ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಚಿಕ್ಕೋಡಿ ಡೈಟ್‍ನ ಹಿರಿಯ ಉಪನ್ಯಾಸಕ ಸಂಜಯ ಯಾದಗುಡೆ ಹೇಳಿದರು. ಅವರು ಬುಧವಾರ ಪಟ್ಟಣದ ಕೆ.ಎಚ್ ಸೋನವಾಲಕರ ಸರಕಾರಿ ಪ್ರೌಢ ಶಾಲೆಯಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬಿಳ್ಕೋಡುವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಪರೀಕ್ಷೆಯ …

Read More »

ಮಾ.17ರಂದು ನೇತ್ರದಾನ ಹಾಗೂ ಅಂಗಾಂಗದಾನ ಶಿಬಿರ ಕಾರ್ಯಕ್ರಮ

ನೇತ್ರದಾನ ಹಾಗೂ ಅಂಗಾಂಗದಾನ ಶಿಬಿರ ಕಾರ್ಯಕ್ರಮ ಮೂಡಲಗಿ : ಡಾ|| ಪುನೀತ ರಾಜಕುಮಾರ ಅವರ ಹುಟ್ಟು ಹಬ್ಬದ ಪ್ರಯುಕ್ತ ಅಪ್ಪು ಅಭಿಮಾನಿ ಬಳಗ ಹಾಗೂ ಶ್ರೀ ಬಾಲಚಂದ್ರಣ್ಣಾ ಜಾರಕಿಹೋಳಿ ಅವರು ಅಭಿಮಾನಿ ಬಳಗದ ಸಂಯುಕ್ತ ಆಶ್ರಯದಲ್ಲಿ ಮಾ.17ರಂದು ನೇತ್ರದಾನ ಹಾಗೂ ಅಂಗಾಂಗದಾನ ಶಿಬಿರದ ನೋಂದಣಿ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಲಿದೆ. ಸಿದ್ದ ಸಂಸ್ಥಾನ ಮಠ ಮೂಡಲಗಿಯ ಪೀಠಾಧಿಪತಿಗಳಾದ ಶ್ರೀ ದತಾತ್ರೇಯಬೋಧ ಸ್ವಾಮೀಜಿ, ಶ್ರೀ ಶ್ರೀಧರಬೋಧ ಸ್ವಾಮೀಜಿಯವರು …

Read More »

ಅಮೃತ್ ಯೋಜನೆಯಡಿ 39,010 ಕೋಟಿ ರೂ.ಗಳನ್ನು ನೀರು ಸರಬರಾಜು ಕ್ಷೇತ್ರಕ್ಕೆ ಮೀಸಲಿಡಲಾಗಿದೆ

ಮೂಡಲಗಿ: ದೇಶದ ನಗರಗಳ ಪ್ರತಿ ಮನೆ ಮನೆಗೂ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸುವದು ಉದ್ದೇಶದಿಂದ 500 ನಗರ ಮತ್ತು ಪಟ್ಟಣಗಳಲ್ಲಿ ಅಮೃತ್ ಯೋಜನೆಯಡಿ 39,010 ಕೋಟಿ ರೂ.ಗಳನ್ನು ನೀರು ಸರಬರಾಜು ಕ್ಷೇತ್ರಕ್ಕೆ ಮೀಸಲಿಡಲಾಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಹೇಳಿದರು. ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರಿನ ಪೂರೈಕೆಗಾಗಿ …

Read More »

ಬೆಟಗೇರಿ ಪ್ರೌಢ ಶಾಲೆ ಮುಖ್ಯೋಪಾಧ್ಯಯ ರಮೇಶ ಅಳಗುಂಡಿಗೆ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ

ಬೆಟಗೇರಿ ಪ್ರೌಢ ಶಾಲೆ ಮುಖ್ಯೋಪಾಧ್ಯಯ ರಮೇಶ ಅಳಗುಂಡಿಗೆ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ ಬೆಟಗೇರಿ:ಬೆಳಗಾವಿ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಸಭಾಭವನದಲ್ಲಿ ಮಾ.13ರಂದು ನಡೆದ ಡಾ.ಪಂಡಿತ ಪುಟ್ಟರಾಜ ಗವಾಯಿರವರ ಮತ್ತು ಕರ್ನಾಟಕ ರತ್ನ ಪುನೀತ ರಾಜಕುಮಾರರವರ ಜಯಂತಿ ಪ್ರಯುಕ್ತ ರಾಜ್ಯಮಟ್ಟದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಬೆಳಗಾವಿ ರಾಷ್ಟ್ರೀಯ ಸಮಾಜ ಕಲ್ಯಾಣ ಸೇವಾ ಸಂಸ್ಥೆಯವರು ನೀಡುವ ಪ್ರಸಕ್ತ ವರ್ಷದ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿಯನ್ನು ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ …

Read More »

ದಿ.ಚೇತನ ಕೊಣ್ಣೂರ ಅವರ 33ನೇ ಜನ್ಮ ದಿನದ ಪ್ರಯುಕ್ತ ವಿವಿಧ ಕಾರ್ಯಕ್ರಮ

ಬೆಟಗೇರಿ:ಸಮೀಪದ ಮಮದಾಪೂರ ಗ್ರಾಮದ ಶ್ರೀ ಚೇತನ ಈರಪ್ಪ ಕೊಣ್ಣೂರ ಮೆಮೊರೀಯಲ್ ಚಾರಿಟೇಬಲ್ ಟ್ರಸ್ಟ್‍ನ ದ್ವಿತೀಯ ವಾರ್ಷಿಕೋತ್ಸವ, ದಿ.ಚೇತನ ಕೊಣ್ಣೂರ ಅವರ 33ನೇ ಜನ್ಮ ದಿನದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ಮಾ.12ರಂದು ಜರುಗಿದವು. ಮಮದಾಪೂರ ಚರಮೂರ್ತೇಶ್ವರ ಮಹಾಸ್ವಾಮಿಜಿ, ಶಾಂತಾರೂಢ ಸ್ವಾಮಿಜಿ ಸಾನಿಧ್ಯ, ಸ್ಥಳೀಯ ಪಿಕೆಪಿಎಸ್ ಅಧ್ಯಕ್ಷ ಚಂದ್ರಶೇಖರ ಕೊಣ್ಣೂರ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಸಾ.ಶಿ.ಇಲಾಖೆ ಸಹ ನಿರ್ದೇಶಕ ಗಜಾನನ ಮನ್ನಿಕೇರಿ ಜ್ಯೋತಿ ಬೆಳಗಿಸಿದರು. ಶ್ರೀಚೇಈಕೊಮೆಚಾ ಟ್ರಸ್ಟ್ ಅಧ್ಯಕ್ಷ ಈರಪ್ಪ ಕೊಣ್ಣೂರ ಮಾತನಾಡಿದರು. …

Read More »

ಮಹಿಳೆಯರು ತಮಗಾಗುವ ಅನ್ಯಾಯಗಳನ್ನು ಹಿಮ್ಮೆಟ್ಟಿಸಿ ನಿಂತಾಗ ಮಾತ್ರ ಸಮಾಜದಲ್ಲಿ ತಲೆ ಎತ್ತಿ ಬದಕಲು ಸಾಧ್ಯ – ಶೋಭಾ ಗಸ್ತಿ

ಮೂಡಲಗಿ: ಮಹಿಳೆಯರು ತಮಗಾಗುವ ಅನ್ಯಾಯಗಳನ್ನು ಹಿಮ್ಮೆಟ್ಟಿಸಿ ನಿಂತಾಗ ಮಾತ್ರ ಸಮಾಜದಲ್ಲಿ ತಲೆ ಎತ್ತಿ ಬದಕಲು ಸಾಧ್ಯ ಎಂದು ರಾಷ್ಟ್ರೀಯ ನಾರಿ ಪ್ರಶಸ್ತಿ ಪುರಸ್ಕøತೆ ಶೋಭಾ ಗಸ್ತಿ ಹೇಳಿದರು. ಅವರು ಪಟ್ಟಣದಲ್ಲಿ ಬಿಇಒ ಕಾರ್ಯಾಲಯ, ಸರಕಾರಿ ಹೆಣ್ಣು ಮಕ್ಕಳ ಶಾಲೆ ಹಾಗೂ ಲಯನ್ಸ್ ಪರಿವಾರದಿಂದ ನಾರಿಶಕ್ತಿ ಪ್ರಶಸ್ತಿ ವಿಜೇತೆಯರಿಗೆ ಸನ್ಮಾನ ಹಾಗೂ ಜಿಲ್ಲಾ ಮಟ್ಟದಲ್ಲಿ ಇನ್ಸ್ರೈರ್ಡ್ ಅವಾರ್ಡ್ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮಾಜದಲ್ಲಿರುವ ಶೋಷಿತ …

Read More »

ವಿದ್ಯಾರ್ಥಿಗಳು ಭವಿಷ್ಯದ ಪಾತ್ರವನ್ನು ಅರಿತು ಅಧ್ಯಯನಕ್ಕೆ ಆಧ್ಯತೆ ನೀಡಬೇಕು ಬಿ. ಇ. ಓ. ಅಜೀತ್ ಮನ್ನಿಕೇರಿ.

ವಿದ್ಯಾರ್ಥಿಗಳು ಭವಿಷ್ಯದ ಪಾತ್ರವನ್ನು ಅರಿತು ಅಧ್ಯಯನಕ್ಕೆ ಆಧ್ಯತೆ ನೀಡಬೇಕು ಬಿ. ಇ. ಓ. ಅಜೀತ್ ಮನ್ನಿಕೇರಿ. ಮೂಡಲಗಿ : ವಿದ್ಯಾರ್ಥಿಗಳು ಭವಿಷ್ಯದ ಪಾತ್ರವನ್ನು ಅರಿತು ಅಧ್ಯಯನಕ್ಕೆ ಆಧ್ಯತೆ ನೀಡಬೇಕು. ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ಉತ್ತಮ ಭವಿಷ್ಯದಡೆಗೆ ಹೆಚ್ಚು ಗಮನ ನೀಡಿ ಉತ್ತಮ ಫಲಿತಾಂಶ ಪಡೆಯಲು ಉಪನ್ಯಾಸಕರ ಶ್ರಮದೊಂದಿಗೆ ವಿದ್ಯಾರ್ಥಿಗಳು ಶ್ರದ್ದೆ ಮತ್ತು ಪ್ರಾಮಾಣಿಕ ಅದ್ಯಯನಕ್ಕೆ ತೊಡಗುವ ಕಾಳಜಿ ವಹಿಸಬೇಕು ಅಲ್ಲದೇ ತಮ್ಮ ತಂದೆ ತಾಯಿ ಕನಸಿನೊಂದಿಗೆ ತಮ್ಮ ಭವಿಷ್ಯದ ಕನಸ್ಸನ್ನು …

Read More »

ದಾಖಲೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಸರ್ಕಾರ ಮಾಡಿದೆ – ಬಸವರಾಜ ಪಣದಿ

ಬೆಟಗೇರಿ:ಪಹಣಿ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಪಿಂಚಣಿ ಸೇರಿದಂತೆ ಕಂದಾಯ ಇಲಾಖೆ ದಾಖಲೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ ಎಂದು ಬೆಟಗೇರಿ ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕ ಬಸವರಾಜ ಪಣದಿ ಹೇಳಿದರು. ಗೋಕಾಕ ಕಂದಾಯ ಇಲಾಖೆ ಹಾಗೂ ಬೆಟಗೇರಿ ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿ ಸಹಯೋಗದಲ್ಲಿ ಬೆಟಗೇರಿ ಗ್ರಾಮದಲ್ಲಿ ಮಾ.12ರಂದು ನಡೆದ ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿ, ಕಂದಾಯ ಇಲಾಖೆಯ …

Read More »

ವಿದ್ಯಾರ್ಥಿಗಳಲ್ಲಿ ಛಲವಿದ್ದರೆ ಸಾಧನೆ ಸಾಧ್ಯ: ಅರಿಹಂತ ಬಿರಾದಾರ ಪಾಟೀಲ

ವಿದ್ಯಾರ್ಥಿಗಳಲ್ಲಿ ಛಲವಿದ್ದರೆ ಸಾಧನೆ ಸಾಧ್ಯ: ಅರಿಹಂತ ಬಿರಾದಾರ ಪಾಟೀಲ *ಬೆಟಗೇರಿ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ * ಶಾಲೆಯ ಸಮಗ್ರ ಪ್ರಗತಿಗೆ ಮೆಚ್ಚುಗೆ ಬೆಟಗೇರಿ:ಪ್ರತಿಯೊಬ್ಬ ವಿದ್ಯಾರ್ಥಿಯೂ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ಪ್ರಯತ್ನಿಸಬೇಕು. ಶಾಲಾ ವಿದ್ಯಾರ್ಥಿಗಳಲ್ಲಿ ಛಲವಿದ್ದರೆ ಸಾಧನೆ ಸಾಧ್ಯವಾಗುತ್ತದೆ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನೋಡಲ್ ಅಧಿಕಾರಿ ಅರಿಹಂತ ಬಿರಾದಾರ ಪಾಟೀಲ ಹೇಳಿದರು. ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಗೆ ಮಾ.11ರಂದು ಭೇಟಿ …

Read More »

ಪಿಯುಸಿ ದ್ವಿತೀಯ ವಿದ್ಯಾರ್ಥಿಗಳ ಬೀಳ್ಕೋಡಿಗೆ ಸಮಾರಂಭ

ಮೂಡಲಗಿ : ವ್ಯಾಸಂಗದ ಅವಧಿಯಲ್ಲಿ ವಿದ್ಯಾರ್ಥಿಗಳು ಶಿಸ್ತು, ಸಂಯಮ ಮತ್ತು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಗುರಿ ಸಾಧನೆ ಮಾಡಬೇಕು ಎಂದು ಉಪನ್ಯಾಸಕ ಬಸಪ್ಪ ಹೆಬ್ಬಾಳ ಹೇಳಿದರು. ಅವರು ಪಟ್ಟಣದ ಮೂಡಲಗಿ   ಶಿಕ್ಷಣ ಸಂಸ್ಥೆಯ ಶ್ರೀ ಶಿವಬೋಧರಂಗ ಪದವಿ ಪೂರ್ವ ಮಹಾವಿದ್ಯಾಲಯದ ಪಿಯುಸಿ ದ್ವಿತೀಯ ವಿದ್ಯಾರ್ಥಿಗಳ ಬೀಳ್ಕೋಡಿಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದದ್ದು, ವೈಯಕ್ತಿಕ ಬೆಳವಣಿಗೆ ಮಾತ್ರವಲ್ಲದೆ ಸಮಾಜ ಮತ್ತು ದೇಶದ ಪ್ರಗತಿ ಬಗ್ಗೆಯೂ ವಿದ್ಯಾರ್ಥಿ, …

Read More »