ಬೈರನಟ್ಟಿ ಜಡಿಸಿದ್ದೇಶ್ವರ ರಥೋತ್ಸವ ಮುಂದುಡಿಕೆ
ಮೂಡಲಗಿ: ತಾಲೂಕಿನ ಬೈರನಟ್ಟಿ ಗ್ರಾಮದ ಶ್ರೀ ಪವಾಡ ಪುರುಷ ಶ್ರೀ ಜಡಿಸಿದೇಶ್ವರರ ಹಗ್ಗವಿಲ್ಲದ ಎಳೆಯುವ ರಥೋತ್ಸವ ಮಾರ್ಚ 29 ರ ವರೆಗೆ 5 ದಿನಗಳ ಕಾಲ ಸಂಪ್ರದಾಯದಂತೆ ಜರುಗಬೇಕಿತ್ತು ಆದ್ದರೆ ಜಗತ್ತಿನಲ್ಲಿ ಹರಡಿರುವ ಕರೋನಾ ವೈರಸ್ ಸಾಂಕ್ರಾಮಿಕ ರೋಗದ ಸಲುವಾಗಿ ಹಾಗೂ ಕೇಂದ್ರ ಸರಕಾರದ ಆದೇಶ ಪಾಲನೆಗಾಗಿ ಜನರ ಹಿತರಕ್ಷಣೆಗಾಗಿ ಬರುವ 29 ರಂದು ನಡೆಯುವ ರಥೋತ್ಸವವನ್ನು ಮುಂದೂಡಲಾಗಿದೆ ಎಂದು ಜಾತ್ರಾ ಕಮೀಟಿ ಅಧ್ಯಕ್ಷರು ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.