Breaking News
Home / Recent Posts / ಬನವಾಸಿಯಲ್ಲಿ ಸುರಿದ ಅಕಾಲಿಕ ಮಳೆ ರೈತರಿಗೆ ಹಾನಿ

ಬನವಾಸಿಯಲ್ಲಿ ಸುರಿದ ಅಕಾಲಿಕ ಮಳೆ ರೈತರಿಗೆ ಹಾನಿ

Spread the love

ಬನವಾಸಿಯಲ್ಲಿ ಸುರಿದ ಅಕಾಲಿಕ ಮಳೆ ರೈತರಿಗೆ ಹಾನಿ

ಬನವಾಸಿ: ಬನವಾಸಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಗುರುವಾರ ಮುಂಜಾನೆ ಅಕಾಲಿಕ ಮಳೆಯಾಗಿದ್ದು ರೈತರ ಹುಲ್ಲಿನ ಬಣವೆ, ಅಡಿಕೆ, ಶುಂಠಿ ಮಳೆ ನೀರಿಗೆ ಸಿಲುಕಿ ಅಪಾರ ಹಾನಿ ಸಂಭವಿಸಿದೆ. ಬನವಾಸಿ ಹಾಗೂ ಸುತ್ತಲಿನ ಭಾಶಿ, ಮೊಗವಳ್ಳಿ, ಅಜ್ಜರಣಿ, ಗುಡ್ನಾಪೂರ, ಕಂತ್ರಾಜಿ, ಮುತಾಳಕೊಪ್ಪ, ದಾಸನಕೊಪ್ಪ ಸೇರಿದಂತೆ ಇನ್ನೂ ಕೆಲ ಭಾಗಗಳಲ್ಲಿ ಮುಂಜಾನೆ ಎರಡು ಗಂಟೆಗಳ ಕಾಲ ಮಳೆಯಾಗಿರುವುದು ಕಂಡುಬಂದಿದೆ. ಅಕಾಲಿಕ ಮಳೆಯಿಂದಾಗಿ ರೈತರ ಹುಲ್ಲಿನ ಬಣವೆ, ಕಣದಲ್ಲಿ ಹಾಕಿದ ಶುಂಠಿ, ಅಡಿಕೆ ಅಲ್ಲದೇ ಮನೆಯ ಮಹಡಿಯಲ್ಲಿ ಒಣಗಿಸಲು ಹಾಕಿದ್ದ ಅಡಿಕೆ ಮಳೆಗೆ ಸಿಲುಕಿ ಅಪಾರ ಹಾನಿ ಉಂಟಾಗಿದೆ.
ಏಕಾಏಕಿ ಸುರಿದ ಅಕಾಲಿಕ ಮಳೆಯಿಂದಾಗಿ ಬೇಸಿಗೆಯ ಬೆಳೆಗಳ ಮೇಲೆ ದುಷ್ಪರಿಣಾಮ ಬೀರಿದ್ದು ಮಾವಿನ ಹೂವು ಉದುರಿ ಬೆಳೆ ನಾಶವಾಗಲಿದೆ. ಅಸಹಜ ವಾತಾವರಣ ಹಾಗೂ ಅಕಾಲಿಕ ಮಳೆಯಿಂದ ಬೆಳೆಗಳು ಹಾಳಾಗುತ್ತಿರುವುದು ರೈತ ವಲಯದಲ್ಲಿ ಆತಂಕ ಮೂಡಿಸಿದೆ.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ