Breaking News
Home / Recent Posts / ಒಳ್ಳೆಯ ಕಾರ್ಯಕ್ಕೆ ದಾನ, ಧರ್ಮ ಮಾಡಬೇಕು:ಡಾ.ಶಿವಾನಂದ ಭಾರತಿ ಶ್ರೀಗಳು

ಒಳ್ಳೆಯ ಕಾರ್ಯಕ್ಕೆ ದಾನ, ಧರ್ಮ ಮಾಡಬೇಕು:ಡಾ.ಶಿವಾನಂದ ಭಾರತಿ ಶ್ರೀಗಳು

Spread the love

ಒಳ್ಳೆಯ ಕಾರ್ಯಕ್ಕೆ ದಾನ, ಧರ್ಮ ಮಾಡಬೇಕು:ಡಾ.ಶಿವಾನಂದ ಭಾರತಿ ಶ್ರೀಗಳು

ಬೆಟಗೇರಿ:ಮನುಷ್ಯನು ಸಾರ್ಥಕ ಜೀವನ ಮಾಡುವಂತೆ ಪರಮಾತ್ಮ ಸಿದ್ಧಾರೂಢರ ರೂಪದಲ್ಲಿ ಭೂಮಿಗೆ ಬಂದು ನಮ್ಮೆಲ್ಲರನ್ನು ಜೀವನ ಮುಕ್ತರನ್ನಾಗಿ ಮಾಡಿದ್ದಾರೆ ಎಂದು ಇಂಚಲ ಸಾಧು ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗಜಾನನ ವೇದಿಕೆಯಲ್ಲಿ ಸೆ.೧೦ರಂದು ನಡೆದ ೪೦ನೇ ಸತ್ಸಂಗ ಸಮ್ಮೇಳನ ಸಮಾರೂಪ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದ ಬೆಳಕು ನೀಡುವ ಶಕ್ತಿ ಸದ್ಗುರುವಿಗೆ ಇದೆ. ಒಳ್ಳೆಯ ಕಾರ್ಯಕ್ಕೆ ದಾನ, ಧರ್ಮ ಮಾಡಬೇಕು. ದಾನ, ಧರ್ಮ ಮಾಡಿದವರಿಗೆ ಪುಣ್ಯ ಬರುತ್ತದೆ ಎಂದರು.
ಗದಗದ ಶಿವಶರಣೆ ಡಾ.ನೀಲಮ್ಮತಾಯಿ ಅಸುಂಡಿ, ಮಲ್ಲಾಪೂರÀ(ಕೆ.ಎನ್)ದ ಚಿದಾನಂದ ಸ್ವಾಮಿಜಿ, ಸುಣಧೋಳಿ ಅಭಿನವ ಶಿವಾನಂದ ಸ್ವಾಮಿಜಿ, ತೊಂಡಿಕಟ್ಟಿ ಅಭಿನವ ವೆಂಕಟೇಶ್ವರ ಮಹಾರಾಜರು, ಹಡಗಿನಾಳದ ಮಲ್ಲೇಶ ಶರಣರು, ಗದಗದ ಶರಣೆ ಮೈತ್ರಾ ತಾಯಿಯವರಿಂದ ಸಾಧರದಿ ಜೀವರಿಗೆ ಬೋಧವನು ಮಾಡುವದಕೆ ಸಾಧುರೂಪದಿಂದ ಮೇದಿನಿಗೆ ತಾ ಬಂದ ಆರೂಢ ಎಂಬ ವಿಷಯದ ಕುರಿತು ಪ್ರವಚನ ನೀಡಿದರು.
ಮದರಖಂಡಿ ಶಂಕರಯ್ಯ ಮಠಪತಿ ತಬಲಾ ಸಾಥ್‌ದೊಂದಿಗೆ ಶೇಗುಣ್ಸಿಯ ಮಲ್ಲನಗೌಡ ಶಿವಲಿಂಗಪ್ಪಗೋಳ ಅವರಿಂದ ಸಂಗೀತ ಸೇವೆ ಜರುಗಿತು. ವಿವಿಧ ಕ್ಷೇತ್ರದÀ ಸಾಧಕರಿಗೆ, ಶಾಲಾ ಮಕ್ಕಳು, ಗಣ್ಯರು, ದಾನಿಗಳಿಗೆ ಶ್ರೀಗಳಿಂದ ನೆನಪಿನ ಕಾಣಿಕೆ ನೀಡಿ ಶಾಲು ಹೊದಿಸಿ ಸತ್ಕರಿಸಿಲಾಯಿತು, ಶರಣೆ ಮಲ್ಲವ್ವ ಪಡಶೆಟ್ಟಿ ಹಾಗೂ ಮಕ್ಕಳಿಂದ ಮಹಾಪ್ರಸಾದ ಸೇವೆ ನಡೆಯಿತು.
ಭಕ್ತಿಯಿಂದ ನಡೆದ ವಿವಿಧ ಕಾರ್ಯಕ್ರಮ: ಬೆಟಗೇರಿ ಗ್ರಾಮದ ಈಶ್ವರ ದೇವರ ದೇವಸ್ಥಾನದ ಈಶ್ವರ ದೇವರ ಗದ್ದುಗೆ ೫ದಿನಗಳ ಕಾಲ ಮುಂಜಾನೆ ೬ ಗಂಟೆಗೆ ಮಹಾಪೂಜೆ, ನೈವೇದ್ಯ ಸಮರ್ಪನೆ ಜರುಗಿತು. ಸೆ.೯ಪ್ರಾತ: ಕಾಲ ಬ್ರಾಹ್ಮಿ ಮೂಹೂರ್ತದಲ್ಲಿ ಶಿವನಾಮ ಸ್ಮರಣೆ, ಸ್ಥಳೀಯ ಭಕ್ತರಿಂದ ಇಂಚಲದ ಡಾ.ಶಿವಾನಂದ ಭಾರತಿ ಶ್ರೀಗಳಿಗೆ ಭಕ್ತಿಯ ತುಲಾಭಾರ ಸೇವೆ, ಕೀರಿಟ ಮಹಾ ಪೂಜೆ, ದಾನಿಗಳಿಗೆ ಆಶೀರ್ವಾದ, ಶ್ರೀಗಳಿಂದ ಆಶೀರ್ವಚನ ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸದ್ಭಕ್ತರಿಂದ, ಶಿವ ಭಜನೆ, ಶಿವ ಜಾಗರಣೆ ನಡೆಯಿತು. ಸೆ.೬ರಿಂದ ಐದು ದಿನಳ ಕಾಲ ಪ್ರತಿ ದಿನ ಸಂಜೆ ೭:೩೦ಕ್ಕೆ ನಾಡಿನ ಹೆಸರಾಂತ ಮಹಾತ್ಮರು, ಶರಣರಿಂದ ವಿವಿಧ ವಿಷಯಗಳ ಮೇಲೆ ಪ್ರವಚನ ನಡೆಯಿತು. ಸೆ.೧೦ರಂದು ಸ್ಥಳೀಯ ಈಶ್ವರ ಭಜನಾ ಮಂಡಳಿ ವತಿಯಿಂದ ಸಕಲ ಶ್ರೀಗಳಿಗೆ ಸತ್ಕಾರ, ಮಹಾಮಂಗಲ, ಮಹಾಪ್ರಸಾದ ನಡೆದು ಈ ವರ್ಷದ ಸತ್ಸಂಗ ಸಮ್ಮೇಳನ ಸಮಾರೂಪಗೊಂಡಿತು.
ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸಂತ-ಶರಣರು, ಹರ, ಗುರು, ಚರಮೂರ್ತಿಗಳು, ಗಣ್ಯರು, ಆಧ್ಯಾತ್ಮ ಪ್ರವಚನ ಶ್ರವಣಾಸಕ್ತರು, ಸ್ಥಳೀಯ ಈಶ್ವರ ಭಜನಾ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು, ಮತ್ತೀತರರು ಇದ್ದರು.


Spread the love

About inmudalgi

Check Also

*ಚೊಚ್ಚಲ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದ ರಾಯಲ್ ಚಾಲೆಂಜರ್ಸ್.*

Spread the love ಬೆಳಗಾವಿ – ೧೮ ವರ್ಷಗಳ ಕಾಯುವಿಕೆ, ಕೋಟ್ಯಾಂತರ ಅಭಿಮಾನಿಗಳ ಹರಕೆ, ಆಶೀರ್ವಾದ.. ಕೊನೆಗೂ ನನಸಾಗಿದೆ. ರಾಯಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ