
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಿರಿಯ ಕಲಾವಿದ, ಸಾಹಿತಿ, ಸರಳ ನಡೆ, ನುಡಿ ವ್ಯಕ್ತಿತ್ವದ ಹಿರಿಯ ಜೀವಿ ಈಶ್ವರಚಂದ್ರ ಬೆಟಗೇರಿ ಅವರು ಬೆಳಗಾವಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.
ಸ್ಥಳೀಯ ಹಿರಿಯ ಕಲಾವಿದ ಸಾಹಿತಿ ಈಶ್ವರಚಂದ್ರ ಬೆಟಗೇರಿ ಅವರ ಸಾಧನೆಗೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಕನ್ನಡಪರ ಹೋರಾಟಗಾರರು, ಗಣ್ಯರು, ಕನ್ನಡಾಭಿಮಾನಿಗಳು, ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿ, ರಂಗಭೂಮಿ, ಸಾಹಿತ್ಯಕ್ಷೇತ್ರ ಸೇರಿದಂತೆ ವಿವಿಧ ವಲಯದಲ್ಲಿ ಸಲ್ಲಿಸಿದ ಅನುಪಮ ಸೇವೆ ಮತ್ತು ಅವರ ಸರಳ ನಡೆ, ನುಡಿ ವ್ಯಕ್ತಿತ್ವವನ್ನು ಶ್ಲಾಘಿಸಿದ್ದಾರೆ.
IN MUDALGI Latest Kannada News