ಬೆಟಗೇರಿ:ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಬಸವಣ್ಣನವರು ವಿಶ್ವದ ಬಹುದೊಡ್ಡ ಸಮಾಜ ಸುಧಾರಕರಾಗಿದ್ದಾರೆ. ಬಸವಣ್ಣನವರು ವಚನಗಳ ಮೂಲಕ ಜೀವನಾದರ್ಶಗಳನ್ನು ಬೋಧಿಸಿದ ವiಹಾನ್ ಚಿಂತಕರಾಗಿದ್ದಾರೆ ಎಂದು ಸುಣಧೋಳಿ ಜಡಿಸಿದ್ದೇಶ್ವರ ಮಠದ ಪೀಠಾಧಿಪತಿ ಅಭಿನವ ಶಿವಾನಂದ ಸ್ವಾಮೀಜಿ ಹೇಳಿದರು.
ಬೆಟಗೇರಿ ಗ್ರಾಮದಲ್ಲಿ ಇಲ್ಲಿಯ ಬಸವ ಅಭಿಮಾನಿ ಬಳಗದ ಸಹಯೋಗದಲ್ಲಿ ಮೇ.3ರಂದು ನಡೆದ ಬಸವ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಷಟಸ್ಥಲ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಬಸವಣ್ಣನವರು ವಚನಗಳನ್ನು ರಚಿಸಿ ಜಗತ್ತಿಗೆ ಅದ್ಭುತವಾದ ಕೊಡುಗೆ ನೀಡಿದ್ದಾರೆ. ಇಂದು ಪ್ರತಿಯೊಬ್ಬರು ಬಸವಣ್ಣನವರ ತತ್ವಾದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ ಕಾರ್ಯಕ್ರಮದ ನೇತೃತ್ವ ವಹಿಸಿ, ಅಶ್ವಾರೊಢ ಬಸವೇಶ್ವರ ವೃತ್ತದಲ್ಲಿರುವ ಬಸವಣ್ಣನವರ ಮೂರ್ತಿಗೆ ಮಹಾಪೂಜೆ, ಪುಷ್ರ್ಪಾಪನೆ ನೆರವೇರಿಸಿದರು. ಸ್ಥಳೀಯ ಬಸವ ಅಭಿಮಾನಿ ಬಳಗದ ಪ್ರಧಾನ ಸಂಚಾಲಕ ಈಶ್ವರ ಬಳಿಗಾರ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮದ ಅಶ್ವಾರೊಢ ಬಸವೇಶ್ವರ ವೃತ್ತದಿಂದ ಸಂಗೊಳ್ಳಿ ರಾಯಣ್ಣನ ವೃತ್ತದವರೆಗೆ ಸಕಲ ವಾದ್ಯಮೇಳಗಳೊಂದಿಗೆ ಬಸವೇಶ್ವರರ ಭಾವ ಚಿತ್ರದ, ಶೃಂಗರಿಸಿದ ಜೋಡು ಎತ್ತುಗಳ ಭವ್ಯ ಮೆರವಣಿಗೆ ಅದ್ದೂರಿಯಾಗಿ ನಡೆದ ಬಳಿಕ ಮಹಾಪ್ರಸಾದ ಜರುಗಿತು.
ಮಲ್ಲಪ್ಪ ಪಣದಿ, ಈರಪ್ಪ ದೇಯಣ್ಣವರ, ಎಂ.ಐ.ನೀಲಣ್ಣವರ, ಬಸಪ್ಪ ದೇಯಣ್ಣವರ, ಈರಣ್ಣ ಸಿದ್ನಾಳ, ರಾಮಣ್ಣ ಮುಧೋಳ, ಶ್ರೀಧರ ದೇಯಣ್ಣವರ, ರಾಮಣ್ಣ ನೀಲಣ್ಣವರ, ಬಸವರಾಜ ಪಣದಿ, ಚಂದ್ರಶೇಖರ ನೀಲಣ್ಣವರ, ಅಡಿವೆಪ್ಪ ಕತ್ತಿ, ಶಿವು ದೇಯಣ್ಣವರ, ರವಿ ಮಾಳೇದ, ಬಾಳಪ್ಪ ಕನೋಜಿ, ರಾಮಣ್ಣ ಮಾಳೇದ, ಬಸಪ್ಪ ತೋಟಗಿ, ಮಲ್ಲಪ್ಪ ಕಂಬಿ, ಮಂಜು ಉದ್ದಣ್ಣವರ, ಗಣ್ಯರು, ಬಸವಣ್ಣನ ಅಭಿಮಾನಿಗಳು, ಬಸವ ಅಭಿಮಾನಿ ಬಳಗದ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯರು ಇದ್ದರು.
