Breaking News
Home / ಬೆಳಗಾವಿ (page 23)

ಬೆಳಗಾವಿ

ಇಸ್ರೋದ ಮಾಜಿ ಅಧ್ಯಕ್ಷ, ವಿಜ್ಞಾನಿ ಪ್ರೊ.ಕೆ. ಕಸ್ತೂರಿ ರಂಗನ ನಿಧನ

ಇಸ್ರೋದ ಮಾಜಿ ಅಧ್ಯಕ್ಷ, ವಿಜ್ಞಾನಿ ಪ್ರೊ.ಕೆ. ಕಸ್ತೂರಿ ರಂಗನ್‌ ಅವರು ನಿಧನ ಸುದ್ದಿ ಕೇಳಿ ಆಘಾತವಾಗಿದೆ. ರಂಗನ್‌ ಅವರು ಕೇವಲ ಬಾಹ್ಯಾಕಾಶ ಮಾತ್ರವಲ್ಲ, ಪರಿಸರ, ಶಿಕ್ಷಣ, ರಾಜಕೀಯ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಜತೆಗೆ ಕ್ರಿಯಾಶೀಲರಾಗಿ ಹಲವಾರು ಕೊಡುಗೆಗಳನ್ನು ಅವರು ನೀಡಿದ್ದಾರೆ. ಅವರನ್ನು ಕಳೆದುಕೊಂಡ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ. *-ಬಾಲಚಂದ್ರ …

Read More »

ಪಹಲ್ಗಾಮನಲ್ಲಿ ನಡೆದ ಹಿಂದುಗಳ ಹತ್ಯೆಯನ್ನು ಖಂಡಿಸಿ ಮೌನ ಪ್ರತಿಭಟನೆ

ಮೂಡಲಗಿ: ಕಾಶ್ಮೀರದ ಪಹಲ್ಗಾಮನಲ್ಲಿ ನಡೆದ ಹಿಂದುಗಳ ಹತ್ಯೆಯನ್ನು ಖಂಡಿಸಿ ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿ ಅರಭಾಂವಿ ಮಂಡಲ ವತಿಯಿಂದ ಪ್ರತಿಭಟಿಸಿ ಘಟನೆಯಲ್ಲಿ ಹತರಾದವರಿಗೆ ಮೇಣದಬತ್ತಿ ಹಿಡಿದು ಮೌನ ಪ್ರತಿಭಟನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಪಾಂಡುರಂಗ ಮಹೇಂದ್ರಕರ. ಕುಮಾರ ಗಿರಡ್ಡಿ, ಬಸವರಾಜ್ ಪಾಟೀಲ್, ಡಾ. ಬಸವರಾಜ ಪಾಲಭಾಂವಿ. ಪರಪ್ಪ ಹಡಪದ, ಮಲ್ಲು ಯಾದವಾಡ ಜಗದೀಶ್ ತೇಲಿ, ಸೋಮಯ್ಯ ಹಿರೇಮಠ್, ಮಲ್ಲಪ್ಪ ಢವಳೇಶ್ವರ, ಶೀತಲ್ …

Read More »

ಚಿದಾನಂದ್ ಪವಾರಿಗೆ ರಾಷ್ಟ್ರೀಯ“ಆಸ್ಪೀ ಎಲ್.ಎಂ.ಪಟೇಲ್”ಪ್ರಶಸ್ತಿ ಪ್ರಧಾನ

ಮೂಡಲಗಿ: ಮುಂಬೈನ ಆಸ್ಪೀ ಫೌಂಡೇಶನದಿಂದ ಪ್ರಗತಿ ಪರ ರೈತರಿಗೆ ಕೊಡಮಾಡು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ “ಆಸ್ಪೀ ಎಲ್.ಎಂ.ಪಟೇಲ್” 2022 ಪ್ರಶಸ್ತಿಗೆ ತೋಟಗಾರಿಕೆ ವಿಭಾಗದ ಅಡಿಯಲ್ಲಿ ಮೂಡಲಗಿ ತಾಲೂಕಿನ ರಾಜಾಪೂರ ಗ್ರಾಮದ ಪ್ರಗತಿ ಪರ ರೈತ ಚಿದಾನಂದ್ ಪರಸಪ್ಪ ಪವಾರ್ ಆಯ್ಕೆಗೊಂಡು ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ “ಆಸ್ಪೀ ಎಲ್.ಎಂ.ಪಟೇಲ್” 2022 ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕಳೆದ ಶುಕ್ರವಾರದಂದು ಮುಂಬೈನ ಪ್ರತಿಷ್ಠಿತ ಹೊಟೇಲನಲ್ಲಿ ಜರುಗಿದ ಪ್ರಶಸ್ತಿ ಸಮಾರಂಭದಲ್ಲಿ ಉತ್ತರ ಪ್ರದೇಶದ ಸಂಸತ ಸದಸ್ಯ ಶಶಾಂಕ್‍ಮಣಿ …

Read More »

ಪ್ರತಿಯೊಬ್ಬರೂ ಓದುವ ಹವ್ಯಾಸ ಬೆಳಸಿಕೊಳ್ಳಬೇಕು: ಎಂ.ಎಲ್.ಯಂಡ್ರಾವಿ

ಪ್ರತಿಯೊಬ್ಬರೂ ಓದುವ ಹವ್ಯಾಸ ಬೆಳಸಿಕೊಳ್ಳಬೇಕು: ಎಂ.ಎಲ್.ಯಂಡ್ರಾವಿ ಬೆಟಗೇರಿ:ಗ್ರಾಮೀಣ ವಲಯದಲ್ಲಿ ಗ್ರಾಮ ಪಂಚಾಯತಿಯ ಗ್ರಂಥಾಲಯ ಮತ್ತು ಅರಿವು ಕೇಂದ್ರಗಳು ಮಕ್ಕಳ ಕಲಿಕೆಗೆ ಆಶಾಕಿರಣವಿದ್ದಂತೆ, ಪ್ರತಿಯೊಬ್ಬರೂ ಓದುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯತಿ ಪಿಡಿಒ ಎಂ.ಎಲ್.ಯಂಡ್ರಾವಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ಗ್ರಂಥಾಲಯದ ಸಹಯೋಗದಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಅರಿವು ಕೇಂದ್ರದಲ್ಲಿ ಏ.24ರಂದು ನಡೆದ ಓದುವ ಬೆಳಕು …

Read More »

ಪ್ರತಿಯೊಬ್ಬರೂ ಕನ್ನಡ ನಾಡು, ನುಡಿ ಬೆಳಿಸೋಣ : ಬಸವರಾಜ ಖಾನಪ್ಪನವರ

ಪ್ರತಿಯೊಬ್ಬರೂ ಕನ್ನಡ ನಾಡು, ನುಡಿ ಬೆಳಿಸೋಣ : ಬಸವರಾಜ ಖಾನಪ್ಪನವರ ಬೆಟಗೇರಿ:ಇಂದು ನಾಡಿನ ಕಲೆ, ಸಂಸ್ಕøತಿ, ಸಂಪ್ರದಾಯ ಉಳಿಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಕನ್ನಡ ನಾಡು ಕಟ್ಟೋಣ, ಕನ್ನಡ ಭಾಷೆ ಬೆಳೆಸೋಣ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು. ಟಿ.ಎ.ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಸಹಯೋಗದಲ್ಲಿ ನಾನು ಕರವೇ ಕಾರ್ಯಕರ್ತ ಸದಸ್ಯತ್ವ ಅಭಿಯಾನ ಪ್ರಯುಕ್ತ ಗೋಕಾಕ ತಾಲೂಕಿನ …

Read More »

*ಗೋಕಾಕದ ಶ್ರೀ ಸತ್ಯಸಾಯಿ ಬಾಬಾರವರ ೧೪ ನೇ ಆರಾಧನಾ ಮಹೋತ್ಸವ*

*ಗೋಕಾಕದ ಶ್ರೀ ಸತ್ಯಸಾಯಿ ಬಾಬಾರವರ ೧೪ ನೇ ಆರಾಧನಾ ಮಹೋತ್ಸವ* ಗೋಕಾಕ:ನಗರದ ಶಿರಡಿ ಬಾಬಾ ಮಂದಿರದಲ್ಲಿ ನಿಂಗಾಪೂರ ಶ್ರೀ ಸಾಯಿನಿತ್ಯೋತ್ಸವ ಟ್ರಸ್ಟ ವತಿಯಿಂದ ಗುರುವಾರ ಏ-24 ರಂದು ಭಗವಾನ್ ಶ್ರೀ ಸತ್ಯಸಾಯಿಬಾಬಾರವರ ೧೪ ನೇ ಆರಾಧನಾ ಮಹೋತ್ಸವದ ಅಂಗವಾಗಿ ಅನ್ನ ಪ್ರಸಾದ ವಿತರಿಸುವ ಮೂಲಕ ನಾರಾಯಣ ಸೇವೆ ನಡೆಯಿತು. ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟಿನ ಅಧ್ಯಕ್ಷರಾದ ಬಸವರಾಜ ಉಣ್ಣಿ ಅಧ್ಯಕ್ಷತೆ ವಹಿಸಿದ್ದರು, ಸಾಯಿನಿತ್ಯೋತ್ಸವ ಲೋಕಸೇವಾ ಟ್ರಸ್ಟಿನ ಅಧ್ಯಕ್ಷ ಆರ್ ಆರ್ …

Read More »

ಆಮಂತ್ರಣ ಪತ್ರಿಕೆಗಳನ್ನು ಬಿಡುಗಡೆ ಮಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಗೋಕಾಕ ಗ್ರಾಮ ದೇವತಾ ಯಾತ್ರಾ ಮಹೋತ್ಸವಕ್ಕಿಂತ ಮುಂಚೆ ನಡೆಯುವ ಮಹಾಲಕ್ಷ್ಮೀ, ಗಣಪತಿ, ಆಂಜನೇಯ, ನಾಗದೇವ, ನವ ಗ್ರಹ ದೇವರ ಮೂರ್ತಿ ಪ್ರತಿಷ್ಠಾಪನೆ, ಬ್ರಹ್ಮ ಕಲಶೋತ್ಸವ ಮತ್ತು ಮಹಾ ರಥೋತ್ಸವವು ಬರುವ ೩೦ ರಿಂದ ಮೇ ೮ ರ ವರೆಗೆ ಜರುಗಲಿದ್ದು, ನಗರದಲ್ಲಿರುವ ಪ್ರತಿಯೊಂದು ಮನೆ – ಮನೆಗೂ ಆಮಂತ್ರಣ ಪತ್ರಿಕೆಗಳನ್ನು ತಲುಪಿಸುವ ಮೂಲಕ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶಾಸಕ ಮತ್ತು ಬೇಮೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು …

Read More »

ಯಾದವಾಡ-ಮಾನೋಮ್ಮಿ ಹಳ್ಳಕ್ಕೆ ಸೇತುವೆ ನಿರ್ಮಾಣಕ್ಕೆ ಚಾಲನೆ

ಯಾದವಾಡ-ಮಾನೋಮ್ಮಿ ಹಳ್ಳಕ್ಕೆ ಸೇತುವೆ ನಿರ್ಮಾಣಕ್ಕೆ ಚಾಲನೆ ಮೂಡಲಗಿ: ಬಹಳ ದಿನಗಳ ಬೇಡಿಯಾಗಿದ ತಾಲೂಕಿನ ಯಾದವಾಡ ಗ್ರಾಮ ಪಂಚಾಯತ ವ್ಯಾಪ್ತಿಯ ಮಾನೋಮಿ-ಯಾದವಾಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಯಾದವಾಡ ಬಳಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ ಅನುದಾನ ಯೋಜನೆ ಅಡಿಯಲ್ಲಿ ಶಾಸಕ ಹಾಗೂ ಬೆಮ್ಯೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ವಿಷೇಶ ಪ್ರಯತ್ನದಿಂದ 50 ಲಕ್ಷ ರೂ ವೆಚ್ಚದಲ್ಲಿ ಸೇತು ನಿರ್ಮಾಣ ಕಾಮಗಾರಿಗೆ ಭೂಮಿ ಪೂಜಾ ಕಾರ್ಯಕ್ರಮ ರವಿವಾರ ಜರುಗಿತು. ಈ …

Read More »

ವಿದ್ಯಾಪೋಷಕ ವಿದ್ಯಾರ್ಥಿಗಳಿಂದ ಪಿಯುಸಿ ಅತ್ಯುತ್ತಮ ಸಾಧನೆ

ಕುಮಾರಿ. ಅರ್ಚನ ಮಠಪತಿ   ಕುಮಾರಿ. ಸ್ನೇಹಾ ಲಕ್ಕೋಟ್ಟೆ ಕುಮಾರಿ. ರಶ್ಮಿತಾ ಯರಗಟ್ಟಿ ಕುಮಾರಿ. ಸಾಕ್ಷಿ ಸನದಿ ಕುಮಾರಿ. ಸಂeನಾ ಬಿಜಾಪುರ ಕುಮಾರ. ಸಿದ್ರಾಮ ಬಂಡಿ ಕುಮಾರಿ. ಸ್ವಪ್ನಾ ಜೀವನಿ ಕುಮಾರಿ. ಕುಸಮಾ ಗೀರಜಣ್ಣವರ ಕುಮಾರ. ಬಸವರಾಜ ವಾಲಿ ಕುಮಾರಿ. ಪ್ರಿಯಂಕಾ ಕವಿತಕೊಪ್ಪ ವಿದ್ಯಾಪೋಷಕ ವಿದ್ಯಾರ್ಥಿಗಳಿಂದ ಪಿಯುಸಿ ಅತ್ಯುತ್ತಮ ಸಾಧನೆ ಮೂಡಲಗಿ: ಧಾರವಾಡದ ವಿದ್ಯಾಪೋಷಕ ಸಂಸ್ಥೆಯಿಂದ ಆರ್ಥಿಕ ಸಹಾಯ ಪಡೆದು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 10 ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು …

Read More »

ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕ್ ಈ ಒಂದು ವರ್ಷದಲ್ಲಿ 33.11 ಕೋಟಿ ರೂ. ನಿವ್ವಳ ಲಾಭ

ಬೆಳಗಾವಿ: ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕ್ ಈ ಒಂದು ವರ್ಷದಲ್ಲಿ 33.11 ಕೋಟಿ ರೂ. ನಿವ್ವಳ ಲಾಭ ಹಾಗೂ 303 ಕೋಟಿ ರೂ. ಶೇರು ಹೊಂದಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ತಿಳಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬ್ಯಾಂಕು ವರ್ಷದಿಂದ ವರ್ಷಕ್ಕೆ ಪ್ರಗತಿಯಲ್ಲಿ ಮುನ್ನಡೆಯುತ್ತಿದೆ. ಅತಿ ಹೆಚ್ಚಿನ ಲಾಭ ಗಳಿಸುವ ಮೂಲಕ ರೈತರು ಹಾಗೂ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ನಾನು ಅಧ್ಯಕ್ಷನಾಗಿ ಅಧಿಕಾರ …

Read More »