Breaking News
Home / Recent Posts (page 177)

Recent Posts

ಪ್ರತಿಯೊಬ್ಬ ರೈತರು ಎರೆಹುಳು ತೊಟ್ಟಿ ನಿರ್ಮಿಸಿಕೊಂಡು ಸಾವಯವ ಕೃಷಿ ಮಾಡಬೇಕು

ಬೆಟಗೇರಿ:ಗ್ರಾಮದ ಪ್ರತಿಯೊಬ್ಬ ರೈತರು ಎರೆಹುಳು ತೊಟ್ಟಿ ನಿರ್ಮಿಸಿಕೊಂಡು ಸಾವಯವ ಕೃಷಿ ಮಾಡಬೇಕು. ಎರೆಹುಳು ರೈತನಿಗೆ ಮಿತ್ರವಾಗಿದೆ. ರೈತರು ತಮ್ಮ ಜಮೀನಿನ ಒಂದಿಷ್ಟು ಜಾಗೆಯಲ್ಲಿ ಪೌಷ್ಟಿಕ ತೋಟ ನಿರ್ಮಾಣ ಮಾಡಬೇಕು ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯತಿ ಪಿಡಿಒ ಎಚ್.ಎನ್.ಭಾವಿಕಟ್ಟಿ ಹೇಳಿದರು. ಬೆಟಗೇರಿ ಗ್ರಾಮ ಪಂಚಾಯತಿಯಲ್ಲಿ ರವಿವಾರದಂದು ನಡೆದ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಜರುಗಿದÀ ಬಳಿಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಬೆಳಗಾವಿ ಜಿಪಂ, …

Read More »

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಪಡೆದ ವಿದ್ಯಾರ್ಥಿಗಳಿಗೆ ಸತ್ಕರಿಸಿ ಗೌರವ

ಮೂಡಲಗಿ: ಇಲ್ಲಿನ ಕೆ ಎಚ್ ಸೋನವಾಲ್ಕರ ಸರರ್ಕಾರಿ ಫ್ರೌಡ ಶಾಲೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಲಾ ಮುಖ್ಯೋಪಾಧ್ಯಯ ಎಸ್ ಬಿ ನ್ಯಾಮಗೌಡರ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಪಡೆದ ವಿದ್ಯಾರ್ಥಿಗಳಾದ ಶಿವಕಾಂತ ಪರಸಪ್ಪ ಗೋಟೂರ (ನಾಗನೂರ) ,ಸಾನೀಯಾ ಅ. ನದಾಫ್, ವಿಜಯಕುಮಾರ ಮ ಅಂಗಡಿ, ಅಭಿಷೇಕ್ ಮ.ಮಗದುಮ್ ಇವರನ್ನು ಸತ್ಕರಿಸಿ ಗೌರವಿಸಿದರು, ಭೂದಾನಿ, ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ, ಅಧ್ಯಕ್ಷ …

Read More »

ಭಾರತ ಮಾತೆ ವೇಷದಲ್ಲಿ ಆರೋಹಿ ನಾಡಗೌಡರ ಹಾಗೂ ಆರೋಹಿ

ಭಾರತ ಮಾತೆ ವೇಷದಲ್ಲಿ ಆರೋಹಿ ನಾಡಗೌಡರ ಭಾರತ ಮಾತೆ ವೇಷದಲ್ಲಿ ಗಮನಸೆಳೆದ ಆರೋಹಿ ಮೂಡಲಗಿ: ಮೂಡಲಗಿಯ ಆರೋಹಿ ಕೃಷ್ಣಾ ನಾಡಗೌಡರ ಪುಟಾಣಿಯು ಭಾನುವಾರ ಆಚರಿಸಿದ 75ನೇ ಸ್ವಾತಂತ್ರ್ಯೋತ್ಸ ದಿನಾಚರಣೆ ಸಂದರ್ಭದಲ್ಲಿ ಭಾರತ ಮಾತೆ ವೇಷದಲ್ಲಿ ಗಮನಸಳೆದಳು. ಆರೋಹಿ ಇಲ್ಲಿಯ ಪುರಸಭೆ ಮಾಜಿ ಉಪಾಧ್ಯಕ್ಷ ಆರ್.ಪಿ. ಸೋನವಾಲಕರ ಹಾಗೂ ವಿದ್ಯಾ ಅವರ ಮೊಮ್ಮಗಳು. ತಾಯಿ ಶೃತಿ ಮಗುವಿನ ವೇಷವನ್ನು ಸಿದ್ದಗೊಳಿಸಿದ್ದರು. ಹರ್ಷವರ್ಧನ ಮತ್ತು ಹರ್ಷಿತಾ … ಪುಟಾಣಿಗಳ ದೇಶಾಭಿಮಾನದ ಸಂಭ್ರಮ ಮೂಡಲಗಿ: …

Read More »

ಸುಣಧೋಳಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿದ ರಾಹುಲ್ ಜಾರಕಿಹೊಳಿ

ಸುಣಧೋಳಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿದ ರಾಹುಲ್ ಜಾರಕಿಹೊಳಿ ಮೂಡಲಗಿ: ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮ ದಿನಾಚರಣೆ ಅಂಗವಾಗಿ ಸಂಗೊಳ್ಳಿ ರಾಯಣ್ಣನ ನೂತನ ಪ್ರತಿಮೆಯನ್ನು ಕಾಂಗ್ರೆಸ ಯುವ ಮುಖಂಡ ರಾಹುಲ ಜಾರಕಿಹೊಳಿ ಅನಾವರಣಗೊಳಿಸಿದರು. ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ಕೇವಲ ವ್ಯಕ್ತಿಯಲ್ಲ ಒಂದು ಶಕ್ತಿಯಾಗಿದ್ದಾರೆ.ಅವರು ಹುಟ್ಟಿದ ದಿನ ಸ್ವಾತಂತ್ರ್ಯ ದಿನವಾಗಿದ್ದರೆ ಅವರು ನೇಣುಗಂಬಕ್ಕೇರಿದ ದಿನ …

Read More »

ಅಂಜುಮನ ಹಾಗೂ ಖಿದ್ಮತ್ ವೆಲ್ಫೇರ ಕಮಿಟಿಯ ಕಾರ್ಯಕರ್ತರಿಗೆ ತಾಲೂಕಾಡಳಿತದಿಂದ ಗೌರವ

ಮೂಡಲಗಿ: ಇಲ್ಲಿನ ಗಾಂಧಿ ಚೌಕದಲ್ಲಿ 75ನೇ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಸರಳ ಸಮಾರಂಭದಲ್ಲಿ ಕೊರೋನಾದಿಂದ ಮೃತಪಟ್ಟ 130 ಶವಗಳಿಗೆ ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದ ಅಂಜುಮನ ಹಾಗೂ ಖಿದ್ಮತ್ ವೆಲ್ಫೇರ ಕಮಿಟಿಯ ಕಾರ್ಯಕರ್ತರಿಗೆ ತಾಲೂಕಾಡಳಿತ ಹಾಗೂ ಪುರಸಭೆ ಮತ್ತು ಗಾರ್ಡನ್ ಅಭಿವೃದ್ಧಿ ಸಂಸ್ಥೆಯಿಂದ ಸತ್ಕರಿಸಿ ಅಭಿನಂದನಾಪತ್ರ ನೀಡಿ ಗೌರವಿಸಿದರು.

Read More »

ಸ್ವಾತಂತ್ಯ ದಿನಾಚರಣೆಯ ನಿಮಿತ್ಯ ಮೇಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಕುಲಗೋಡ ಆವರಣದಲ್ಲಿ ಸಸಿ ನೆಡುವ ಮೂಲಕ ಆಚರಣೆ

ಸ್ವಾತಂತ್ಯ ದಿನಾಚರಣೆಯ ನಿಮಿತ್ಯ ಮೇಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಕುಲಗೋಡ ಆವರಣದಲ್ಲಿ ಸಸಿ ನೆಡುವ ಮೂಲಕ ಆಚರಣೆ ಮೂಡಲಗಿ: ತಾಲೂಕಿನ ಕುಲಗೋಡ ಗ್ರಾಮದ ಮೇಟ್ರಿಕ್ ಪೂರ್ವ ಬಲಕರ ವಸತಿ ನಿಲಯ ಕುಲಗೋಡ ಆವರಣದಲ್ಲಿ ಗ್ರಾಮ ಪಂಚಾಯತ ಕುಲಗೋಡ ಹಾಗೂ ತೋಟಗಾರಿಕೆ ಇಲಾಖೆವತಿಯಿಂದ 75 ನೇ ಸ್ವಾತಂತ್ಯ ದಿನಾಚರಣೆಯ ಸವಿ ನೆನಪಿಗಾಗಿ ಕೈತೋಟಕ್ಕೆ ಸಸಿ ನೆಡುವ ಮೂಲಕ ಆಚರಿಸಿ ಅಭಿಯಾನಕ್ಕೆ ಚಾಲನೆ ನೀಡಿದರು. ಸಹಾಯಕ ನೀರ್ದೇಶಕರು ತೋಟಗಾರಿಕೆ ಇಲಾಖೆ ಅಧಿಕಾರಿ …

Read More »

ಹಿಂದಿನ ಸಿಹಿ-ಕಹಿ, ಸರಿ-ತಪ್ಪುಗಳನ್ನು ಮೆಲಕು ಹಾಕುತ್ತಾ, ಆಗಬೇಕಿರುವ ಪ್ರಸ್ತುತ ನವ ಭಾರತ ನಿರ್ಮಾಣದ ಕನಸು ಹೊತ್ತ ಕಂಗಳಿಗೆ ಸ್ಪೂರ್ತಿಯ ಜೊತೆಗೆ ಒಂದು ಆಶಾವಾದವೂ ಮೂಡಿದೆ – ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

ಮೂಡಲಗಿ: ಇತಿಹಾಸವನ್ನು ಮತ್ತೆ ಮತ್ತೆ ನನಪಿಸಿಕೊಳ್ಳುತ್ತಾ, ಸ್ವಾತಂತ್ರದ ಅಮೃತ ಮಹೋತ್ಸವದ ಅಮೃತಗಳಿಗೆಯ ಹೊಸ್ತಿಲಲ್ಲಿ ನಿಂತಿರುವ ದೇಶವಾಸಿಗಳು ಮಾಡಬೇಕಾದ ಯೋಚನೆ, ಯೋಜನೆಯ ಜೊತೆಗೆ ಅನ್ಯ ದೇಶಗಳು ಭಾರತವನ್ನು ನೋಡುತ್ತಿರುವ ಸ್ವರೂಪದ ಬಗ್ಗೆಯೂ ನಾವು ಹೇಳಬೇಕಿದೆ. ಹಿಂದಿನ ಸಿಹಿ-ಕಹಿ, ಸರಿ-ತಪ್ಪುಗಳನ್ನು ಮೆಲಕು ಹಾಕುತ್ತಾ, ಮುಂದೆ ಆಗಬೇಕಿರುವ ಪ್ರಸ್ತುತ ನವ ಭಾರತ ನಿರ್ಮಾಣದ ಕನಸು ಹೊತ್ತ ಕಂಗಳಿಗೆ ಸ್ಪೂರ್ತಿಯ ಜೊತೆಗೆ ಒಂದು ಆಶಾವಾದವೂ ಮೂಡಿದೆ ಎಂದು ಸಹಕಾರಿಯ ಸಂಸ್ಥಾಪಕ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ …

Read More »

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಗೋದಾಮು ನೂತನ ಕಟ್ಟಡದ ಭೂಮಿ ಪೂಜೆ

ಬೆಟಗೇರಿ:ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರು ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಿವೆ ಎಂದು ಭಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘ ರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಗೋದಾಮು ನೂತನ ಕಟ್ಟಡದ ಭೂಮಿ ಪೂಜೆ ಶುಕ್ರವಾರದಂದು ನೆರವೇರಿಸಿ ಮಾತನಾಡಿ, ಸಹಕಾರಿ ಸಂಘಗಳು ಗ್ರಾಮೀಣ ವಲಯದ ಜನರ ಜೀವನಾಡಿಗಳಾಗಿವೆ ಎಂದರು. ಸ್ಥಳೀಯ ಪಿಕೆಪಿಎಸ್ ಮುಖ್ಯ ಕಾರ್ಯನಿರ್ವಾಹಕ ಅಡಿವೆಪ್ಪ ಮುರಗೋಡ ಪ್ರಾಸ್ತಾವಿಕವಾಗಿ ಮಾತನಾಡಿ, ಸುಮಾರು …

Read More »

ಸರ್ಕಾರಿ ಶಾಲೆಗಳಿಗೆ ಕ್ರಾಂತಿವೀರ ಸಂಗೋಳಿ ರಾಯಣ್ಣನ ಭಾವಚಿತ್ರ

ಮೂಡಲಗಿ: ಬೆಳಗಾವಿ ಜಿಲ್ಲಾ ಹಾಲು ಮತ ಮಹಾಸಭಾದಿಂದ ಮೂಡಲಗಿ ಶಿಕ್ಷಣ ವಲಯದ ಸುಮಾರು 270 ಸರ್ಕಾರಿ ಶಾಲೆಗಳಿಗೆ ಕ್ರಾಂತಿವೀರ ಸಂಗೋಳಿ ರಾಯಣ್ಣನ ಭಾವಚಿತ್ರಗಳನ್ನು ಬಿಇಓ ಅಜೀತ ಮನ್ನಿಕೇರಿಯರ ಮುಖಾಂತರ ಹಸ್ತಾಂತರಿಸಲಾಯಿತ್ತು. ಈ ಸಂದರ್ಭದಲ್ಲಿ ಕುರುಬ ಸಮಾಜದ ಮುಖಂಡ ಅರವಿಂದ್ರ ದಳವಾಯಿ ಮಾತನಾಡಿ, ಬ್ರಿಟೀಷರ ವಿರುದ್ದ ತೊಡೆತಟ್ಟಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ. ರಾಯಣ್ಣ ಹುಟ್ಟಿದ ದಿನವೇ ಸ್ವಾತಂತ್ರ್ಯ ದಿನಾಚಾರಣೆ ಹಾಗೂ ಅವರ ಹುತಾತ್ಮರಾದ ದಿನ …

Read More »

ಸ್ವಾತಂತ್ರ್ಯ ದಿನಾಚರಣೆಯ ಕುರಿತು ಚಿತ್ರಕಲೆ

ಮೂಡಲಗಿ: ಪ್ರವಾಹ, ಆಕಾಲಿಕ ಮಳೆ, ಕೊರೋನಾ ಅಲೆಯಿಂದಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಭೌತಿಕವಾಗಿ ತರಗತಿಗಳು ನಡೆಯದ ಕಾರಣ ವಿದ್ಯಾರ್ಥಿಗಳಿಗೆ ಕಲಿಕೆ ಸಾಗಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಪಟ್ಟಣದ ಲಕ್ಷ್ಮೀ ನಗರದ ಸೇಂಟ್ ಮೇರಿಸ್ ಆಂಗ್ಲ ಮಾದ್ಯಮ ಪೂರ್ವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕು. ಲಕ್ಷ್ಮೀ ಮಲ್ಲಪ್ಪ ಮೀಸಿ ಇತಳು ಸ್ವಾತಂತ್ರ್ಯ ದಿನಾಚರಣೆಯ ಕುರಿತು ಚಿತ್ರಕಲೆ ಬಿಡಿಸುವ ಮೂಲಕ ದೇಶಾಭಿಮಾನ ಮೇರೆದಿದ್ದಾಳೆ

Read More »