inmudalgi
ಡಿಸೆಂಬರ್ 7, 2022 Recent Posts, ತಾಲ್ಲೂಕು, ಬೆಳಗಾವಿ
*ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದ ಫಲ.* *ಡಿಸೆಂಬರ್. 20 ರಂದು ಮೂಡಲಗಿಯಲ್ಲಿ ಕಂದಾಯ ಸಚಿವ ಆರ್ ಅಶೋಕ್ ಅವರಿಂದ ಉಪ ನೋಂದಣಿ ಕಛೇರಿಯಲ್ಲಿ ನೋಂದಣಿ ಕಾರ್ಯಕ್ಕೆ ಚಾಲನೆ.* *ಮೂಡಲಗಿ ತಾಲ್ಲೂಕಿನ ಜನತೆಗೆ ಗುಡ್ ನ್ಯೂಸ್ ಕೊಟ್ಟ ಬಾಲಚಂದ್ರ ಜಾರಕಿಹೊಳಿ.* *ಮೂಡಲಗಿ*-ಮೂಡಲಗಿ ತಾಲ್ಲೂಕಿನ ಸಾರ್ವಜನಿಕರ ಬಹು ನಿರೀಕ್ಷಿತ ಉಪ ನೋಂದಣಿ ಕಛೇರಿಯಲ್ಲಿ ನೋಂದಣಿ ಕಾರ್ಯವನ್ನು ಆರಂಭಿಸಲಿಕ್ಕೆ ಇಲಾಖೆಯು ಅನುಮತಿ ನೀಡಿದ್ದರ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರು ಇದೇ …
Read More »
inmudalgi
ಡಿಸೆಂಬರ್ 6, 2022 Recent Posts, ತಾಲ್ಲೂಕು, ಬೆಳಗಾವಿ
ನಾಳೆ ವಿವಿದೆಡೆ ವಿದ್ಯುತ್ ವ್ಯತ್ಯಯ ಮೂಡಲಗಿ: 33/11ಕೆವಿ ಯಾದವಾಡ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ ತುರ್ತು ಕಾಮಗಾರಿ ಕಾರ್ಯವನ್ನು ಕೈಗೊಳ್ಳಲು ಉದ್ದೇಶಿಸಿರುವುದರಿಂದ ಡಿ.8ರಂದು ಬೆಳಿಗ್ಗೆ.10 ರಿಂದ ಸಾಯಂಕಾಲ 6ರ ವರೆಗೆ ಯಾದವಾಡ ವಿದ್ಯುತ್ ವಿತರಣಾ ಉಪ ಕೇಂದ್ರದ ಎಫ್ 01 ಯಾದವಾಡ ಎನ್ ಜೆ ವಾಯ್ ಪೀಡರ ಹಾಗೂ ಎಲ್ಲ ಐಪಿ ಪೀಡರಗಳಿಂದ ವಿದ್ಯುತ್ ಪೋರೈಕೆಯಾಗುತ್ತಿರುವ ಗುಲಗುಂಜಿಕೊಪ್ಪ, ಮಾನೋಮಿ, ಯರಗುದ್ರಿ, ಯಾದವಾಡ, ತಿಮ್ಮಾಪೂರ, ಕಳ್ಳಿಗುದ್ದಿ, ರಡರಟ್ಟಿ, ಕೊಪದಟ್ಟಿ, ಕಾಮನಕಟ್ಟಿ, ಮಿರ್ಜಿ …
Read More »
inmudalgi
ಡಿಸೆಂಬರ್ 5, 2022 Recent Posts, ತಾಲ್ಲೂಕು, ಬೆಳಗಾವಿ
ವಿದ್ಯುತ್ ವ್ಯತ್ಯಯ ಮೂಡಲಗಿ: 33/11ಕೆವಿ ಹಳ್ಳೂರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕಾಮಗಾರಿ ಕಾರ್ಯವನ್ನು ಕೈಗೊಳ್ಳಲು ಉದ್ದೇಶಿಸಿರುವುದರಿಂದ ಡಿ.6ರಂದು ಮು.11 ರಿಂದ ಸಾಯಂಕಾಲ 6ರ ವರೆಗೆ ಹಳ್ಳೂರ ವಿದ್ಯುತ್ ವಿತರಣಾ ಉಪ ಕೇಂದ್ರದ ಎಫ್ 04 ಕಮಲದಿನ್ನಿ ಎನ್ ಜೆ ವಾಯ್ ಪೀಡರ ಹಾಗೂ ಎಲ್ಲ ಐಪಿ ಪೀಡರಗಳಿಂದ ವಿದ್ಯುತ್ ಪೋರೈಕೆಯಾಗುತ್ತಿರುವ ಹಳ್ಳೂರ, ಎಚ್ ಶಿವಾಪೂರ, ಖಾನಟ್ಟಿ, ಮುನ್ಯಾಳ, ಕಮಲದಿನ್ನಿ, ರಂಗಾಪೂರ ಗ್ರಾಮಗಳಿಗೆ ವಿದ್ಯುತ್ ಪೋರೈಕೆಯಲ್ಲಿ ವ್ಯತ್ಯಯವಾಗಲಿದೆ ಗ್ರಾಹಕರು ಸಹಕರಿಸಬೇಕು …
Read More »
inmudalgi
ಡಿಸೆಂಬರ್ 5, 2022 Recent Posts, ತಾಲ್ಲೂಕು, ಬೆಳಗಾವಿ
ಮಾನವೀಯತೆ ಮೆರೆವ ಸಾಹಿತ್ಯ ಮೂಡಿಬರಲಿ- ಡಾ.ಸಂಗಮನಾಥ ಲೋಕಾಪೂರ ಮೂಡಲಗಿ: ಇಂದಿನ ಜನಾಂಗ ತಂತ್ರಜ್ಞಾನದ ಜೊತೆಗೆ ಓದಿನತ್ತ ಬರÀಬೇಕು, ಬರಹಗಾರರು ಮಾನವೀಯತೆ ಮೆರೆವ ಸಾಹಿತ್ಯವನ್ನು ನಾಡಿಗೆ ನೀಡಬೇಕಿದೆ ಎಂದು ಧಾರವಾಡದ ಹಿರಿಯ ಕಥೆಗಾರ ಹಾಗೂ ಚಿಂತಕ ಡಾ.ಸಂಗಮನಾಥ ಲೋಕಾಪೂರ ಹೇಳಿದರು ಪಟ್ಟಣದ ಚೈತನ್ಯ ಗ್ರೂಪ್ ಹಾಗೂ ಗೋಕಾವಿ ಗೆಳೆಯರ ಬಳಗ ಸಂಯುಕ್ತಾಶ್ರಯದಲ್ಲಿ ಚೈತನ್ಯ ಆಶ್ರಮ ವಸತಿ ಶಾಲಾ ಸಭಾಂಗಣದಲ್ಲಿ ಸಾಹಿತಿ ಹಾಗೂ ಕಲಾವಿದ ಜಯಾನಂದ ಮಾದರ ಅವರ ಪುಂಡಿಪಲ್ಲೆ ಪ್ರಥಮ ಕಥಾ …
Read More »
inmudalgi
ಡಿಸೆಂಬರ್ 4, 2022 Recent Posts, ತಾಲ್ಲೂಕು, ಬೆಳಗಾವಿ
ಡಿ.6 ರಂದು ಗುಡ್ಲಮಡ್ಡಿ ಈರಣ್ಣ ದೇವರ ಕಾರ್ತಿಕೋತ್ಸವ ಮೂಡಲಗಿ: ಇಲ್ಲಿಯ ಗುಡ್ಲಮಡ್ಡಿ ಈರಣ್ಣ ದೇವರ ಕಾರ್ತಿಕೋತ್ಸವವು ಡಿ.6 ಮಂಗಳವಾರ ರಂದು ಸಂಜೆ ನಡೆಯಲಿದೆ ಸದ್ಭಕ್ತರು ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಸಬೇಕು ಎಂದು ದೇವಸ್ಥಾನದ ಕಮೀಟಿಯವರು ತಿಳಿಸಿದ್ದಾರೆ.
Read More »
inmudalgi
ಡಿಸೆಂಬರ್ 4, 2022 Recent Posts, ತಾಲ್ಲೂಕು, ಬೆಳಗಾವಿ
ರಾಷ್ಟ್ರ ಭಕ್ತಿಯ ಜೋತೆಗೆ ಹಿಂದೂ ಧರ್ಮದ ರಕ್ಷಣೆಯನ್ನು ಮಾಡಬೇಕು-ಪ್ರಕಾಶ ಮಾದರ ಮೂಡಲಗಿ ತಾಲೂಕಾ ವಿಶ್ವಹಿಂದೂ ಪರಿಷತ್ ಭಜರಂಗದಳದ ಸಂಕೀರ್ತನಾ ಯಾತ್ರೆ ಮತ್ತು ಸತ್ಸಂಗ ಕಾರ್ಯಕ್ರಮಕ್ಕೆ ಇಲ್ಲಿಯ ಶ್ರೀ ಶಿವಬೋಧರಂಗ ಮಠದಲ್ಲಿ ಜರುಗಿದ ಸಂಕೀರ್ತನಾ ಯಾತ್ರೆಗೆ ಮೂಡಲಗಿ ತಾಲೂಕಾ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಪ್ರಕಾಶ ಮಾದರ ಚಾಲನೆ ನೀಡಿದರು. ನಂತರ ಬಸವರಂಗ ಮಂಟಪದಲ್ಲಿ ಜರುಗಿದ ಸತ್ಸಂಗ ಕಾರ್ಯಕ್ರಮಕ್ಕೆ ಇಟನಾಳ ಗ್ರಾಮದ ಸಿದ್ದೇಶ್ವರ ಮಹಾರಾಜರು ಮತ್ತು ತಪಸಿಯ ರೇವಣಸಿದ್ದೇಶ್ವರ ಮಠದ ಸ್ವಾಮೀಜಿ ಹಾಗೂ …
Read More »
inmudalgi
ಡಿಸೆಂಬರ್ 1, 2022 Recent Posts, ತಾಲ್ಲೂಕು, ಬೆಳಗಾವಿ
*ನಾನು ಮತ್ತು ರಮೇಶ ಜಾರಕಿಹೊಳಿ ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಪರ್ಧೆ : ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟನೆ* *ಬಿಜೆಪಿ ಬಿಟ್ಟು ಬೇರೆ ಪಕ್ಷ ಸೇರುತ್ತಾರೆಂಬ ಊಹಾಪೋಹಗಳಿಗೆ ತೆರೆ ಎಳೆದ ಜಾರಕಿಹೊಳಿ ಸಹೋದರರು* *ರಾಜಾಪೂರ ಗ್ರಾಮದಲ್ಲಿ ಅದ್ಧೂರಿಯಾಗಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಈ ಹೇಳಿಕೆ* ಮೂಡಲಗಿ: 2023 ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ನಾನು ಮತ್ತು ನನ್ನ ಶಾಸಕ ಸಹೋದರ ರಮೇಶ …
Read More »
inmudalgi
ಡಿಸೆಂಬರ್ 1, 2022 Recent Posts, ತಾಲ್ಲೂಕು, ಬೆಳಗಾವಿ
ಡಿ.3ರಿಂದ ಡಿ.4ರವರೆಗೆ ಗೋಸಬಾಳ ಮಾರುತಿ ದೇವಸ್ಥಾನದ ಶತಮಾನೋತ್ಸವ, ಕಾರ್ತಿಕೋತ್ಸವ ಹಾಗೂ ಯಾತ್ರಿನಿವಾಸ ಉದ್ಘಾಟನೆ ಕಾರ್ಯಕ್ರಮ ಬೆಟಗೇರಿ:ಸಮೀಪದ ಗೋಸಬಾಳ ಗ್ರಾಮದ ಮಾರುತಿ ದೇವರ ದೇವಸ್ಥಾನದ ಶತಮಾನೋತ್ಸವ ಮತ್ತು ಕಾರ್ತಿಕೋತ್ಸವ, ಯಾತ್ರಿ ನಿವಾಸದ ಉದ್ಘಾಟನಾ ಸಮಾರಂಭ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇದೇ ಶನಿವಾರ ಡಿ.3ರಿಂದ ರವಿವಾರ ಡಿ.4ರವರೆಗೆ ನಡೆಯಲಿವೆ. ಶನಿವಾರ ಡಿ.3ರಂದು ಬೆಳಿಗ್ಗೆ 6ಗಂಟೆಗೆ ಸುಣಧೋಳಿ ಜಡಿಸಿದ್ಧೇಶ್ವರ ಮಠದ ಅಭಿನವ ಶಿವಾನಂದ ಮಹಾಸ್ವಾಮಿಜಿ ದಿವ್ಯ ಸಾನಿಧ್ಯದಲ್ಲಿ ಸ್ಥಳೀಯ ಮಾರುತಿ ದೇವರ ದೇವಾಲಯದಲ್ಲಿರುವ …
Read More »
inmudalgi
ನವೆಂಬರ್ 29, 2022 Recent Posts, ತಾಲ್ಲೂಕು, ಬೆಳಗಾವಿ
ವಿವಿಧ ಕ್ಷೇತ್ರದಲ್ಲಿ ಪಾರ್ವತೇರ ಸಲ್ಲಿಸಿದ ಸೇವೆ ಅವಿಸ್ಮರಣಿಯವಾಗಿದೆ: ಬಸವರಾಜ ಪಣದಿ ಬೆಟಗೇರಿ:ಪುಂಡಲೀಕಪ್ಪ ಮಹಾರಾಜರು ನಾಮಾಂಕಿತದಿಂದ ಪ್ರಚಲಿತರಾದ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಆಧ್ಯಾತ್ಮಜೀವಿ ದಿ.ಪುಂಡಲೀಕಪ್ಪ ಪಾರ್ವತೇರ ಅವರ ಸಾಮಾಜಿಕ, ಶೈಕ್ಷಣಿಕ, ಸಹಕಾರ ಹಾಗೂ ಆಧ್ಯಾತ್ಮ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅವಿಸ್ಮರಣೀಯವಾಗಿದೆ ಎಂದು ಬೆಟಗೇರಿ ಗ್ರಾಮ ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕ ಬಸವರಾಜ ಪಣದಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ವ್ಯವಸ್ಥಾಪಕ, ಆಧ್ಯಾತ್ಮಜೀವಿ ಪುಂಡಲೀಕಪ್ಪ …
Read More »
inmudalgi
ನವೆಂಬರ್ 28, 2022 Recent Posts, ತಾಲ್ಲೂಕು, ಬೆಳಗಾವಿ
ನಿಧನ ವಾರ್ತೆ ಬೆಟಗೇರಿ ಗ್ರಾಮದ ಆಧ್ಯಾತ್ಮಜೀವಿ ಪುಂಡಲೀಕಪ್ಪ ಪಾರ್ವತೇರ ಇನ್ನಿಲ್ಲಾ.! ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಲಿಂಗಾಯತ ಸಮಾಜದ ಹಿರಿಯ ನಾಗರಿಕ, ಸಾಮಾಜಿಕ, ಶೈಕ್ಷಣಿಕ ವಲಯದ ಚಿಂತಕ ಹಾಗೂ ಆಧ್ಯಾತ್ಮಜೀವಿ, ಶರಣರಾದ ಪುಂಡಲೀಕಪ್ಪ ರತ್ನಪ್ಪ ಪಾರ್ವತೇರ (71) ಇವರು ನ.28ರಂದು ನಿಧನರಾದರು. ಮೃತರು ಓರ್ವ ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಮೊಮ್ಮಕ್ಕಳು, ಅಳಿಯಂದಿರು, ಸಹೋದರರು ಸೇರಿದಂತೆ ಅಪಾರ ಬಂಧು-ಬಳಗವನ್ನಗಲಿದ್ದಾರೆ. ಸಂತಾಪ: ಇಂಚಲದ ಡಾ..ಶಿವಾನಂದ ಭಾರತಿ ಮಹಾಸ್ವಾಮೀಜಿ, ನಾಡಿನ ವಿವಿಧ ಮಠ-ಮಾನ್ಯಗಳ …
Read More »