inmudalgi
ಆಗಷ್ಟ್ 29, 2020 ತಾಲ್ಲೂಕು, ಬೆಳಗಾವಿ
ಮೂಡಲಗಿ ತಾಲ್ಲೂಕಿನ ಕಲ್ಲೋಳಿಯ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆತಿಥ್ಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತವತಿಯಿಂದ ಶನಿವಾರ ಆಚರಿಸಿದ ವಚನ ದಿನ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಬಸಗೌಡ ಪಾಟೀಲ ಉದ್ಘಾಟಿಸಿದರು. ಮೂಡಲಗಿ ಮತ್ತು ಗೋಕಾಕದ ಶರಣ ಸಾಹಿತ್ಯ ಪರಿಷತ್ತಿನಿಂದ ‘ವಚನ ದಿನ’ ಆಚರಣೆ ಶರಣರ ಒಂದೊಂದು ವಚನಗಳು ಅಮೃತದ ಹನಿಗಳಿದ್ದಂತೆ ಮೂಡಲಗಿ: ‘ಬಸವಾದಿ ಶರಣರ ವಚನ ಸಾಹಿತ್ಯವು ಕನ್ನಡ ನಾಡಿನ ಬಹುದೊಡ್ಡ ನಿಧಿಯಾಗಿದ್ದು, ಶರಣರ ಒಂದೊಂದು ವಚನಗಳು ಅಮೃತದ ಹನಿಗಳಿದ್ದಂತೆ’ …
Read More »
inmudalgi
ಆಗಷ್ಟ್ 27, 2020 ತಾಲ್ಲೂಕು, ಬೆಳಗಾವಿ
ಡಾ. ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿಗಳ ನುಡಿ ಧರ್ಮದ ನೆಲೆಗಾಗಿ ವೀರಭದ್ರೇಶ್ವರನು ಅವತರಿಸಿದ ಮೂಡಲಗಿ: ‘ಗರ್ವ ಮತ್ತು ಅಹಂಕಾರವನ್ನು ಸಂಹಾರ ಮಾಡುವ ಸಲುವಾಗಿ ಶಿವನು ವೀರಭದ್ರೇಶ್ವರ ಅವತಾರವನ್ನು ತಾಳಬೇಕಾಯಿತು’ ಎಂದು ಭಾಗೋಜಿಕೊಪ್ಪ, ಮುನ್ಯಾಳದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮ್ಭಿಜಿಗಳು ಹೇಳಿದರು. ಇಲ್ಲಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ಸಮಿತಿಯವರು ಆಚರಿಸಿದ ವೀರಭದ್ರೇಶ್ವರ ಜಯಂತ್ಯೋತ್ಸವ ಸಮಾರಂಭವನ್ನು ದೀಪಕ್ಕೆ ತೈಲವನ್ನು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪರಶಿವನು ಅಧರ್ಮ ಮತ್ತು ಜಗದ ಅಹಂಕಾರವನ್ನು …
Read More »
inmudalgi
ಆಗಷ್ಟ್ 26, 2020 ತಾಲ್ಲೂಕು, ಬೆಳಗಾವಿ
ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಬುಧವಾರ ರಂದು ಮತ್ತೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ. ಗೋಕಾಕ ನಗರದಲ್ಲಿ 6, ಜನರಿಗೆ ಮತ್ತು ಮೂಡಲಗಿ 14, ಗುರ್ಲಾಪೂರ. 01, ಅರಬಾವಿ, 02 ಘಟಪ್ರಭಾ, 03 ಅಂಕಲಗಿ. 05 ವೆಂಕಟಾಪೂರ . 02 ಶಿವಾಪೂರ. 01 ಬೂದಿಹಾಳ. 01 ಮದವಾಲ. 01 ನಾಗನೂರ. 01 ಇದೇ ರೀತಿಯಾದರೆ ಇನ್ನೂ ಕೇಸುಗಳು ಹೆಚ್ಚಾಗುವ ಸಂಭವವಿದ್ದು ಜನರಲ್ಲಿ …
Read More »
inmudalgi
ಆಗಷ್ಟ್ 26, 2020 ತಾಲ್ಲೂಕು, ಬೆಳಗಾವಿ
*”ಪ್ರಕಟಣೆ”* *2020-21 ನೇ ಸಾಲಿನ ಮೊರಾರ್ಜಿ ದೇಸಾಯಿ ಹಾಗೂ ಇನ್ನಿತರ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 05-09-2020 ರವರೆಗೆ ವಿಸ್ತರಿಸಲಾಗಿದೆ.* ಈ ವರೆಗೂ ಅರ್ಜಿಗಳು ಸಮರ್ಪಕವಾಗಿ ಬಂದಿರುವುದಿಲ್ಲ,ಕಾರಣ ಕೂಡಲೇ ತಮ್ಮ ಸಮೀಪದ ವಸತಿ ಶಾಲೆಗೆ ಹೋಗಿ ಅರ್ಜಿ ಸಲ್ಲಿಸಲು ಮುಖ್ಯೋಪಾಧ್ಯಾಯರು/ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ತಿಳಿಸಲು ವಿನಂತಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳನ್ನು ಸಲ್ಲಿಸುವಂತೆ ತಮ್ಮ ವ್ಯಾಪ್ತಿಯ ಮಕ್ಕಳಿಗೆ ವ್ಯಾಪಕ ಪ್ರಚಾರ ಕಾರ್ಯ ಕೈಗೊಳ್ಳಲು …
Read More »
inmudalgi
ಆಗಷ್ಟ್ 25, 2020 ತಾಲ್ಲೂಕು, ಬೆಳಗಾವಿ
ಪ್ರವಾಹದಿಂದ ಬಾಧೆಗೊಳಗಾದ ನಿರಾಶ್ರಿತರಿಂದ ಮುಖ್ಯಮಂತ್ರಿಗಳಿಗೆ ಮನವಿ ಅರ್ಪನೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಿಎಂಗೆ ಮನವಿ ಅರ್ಪಿಸಿದ ಗೋಕಾಕ-ಮೂಡಲಗಿ ತಾಲೂಕುಗಳ ಮುಖಂಡರು ಬೆಳಗಾವಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿರ್ದೇಶನದ ಮೇರೆಗೆ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ 2019ರಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡ ನಿರಾಶ್ರಿತ ಫಲಾನುಭವಿಗಳ ಪರವಾಗಿ ಮುಖಂಡರುಗಳು ಇಂದು ಪ್ರವಾಹಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲು ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು. …
Read More »
inmudalgi
ಆಗಷ್ಟ್ 24, 2020 ತಾಲ್ಲೂಕು, ಬೆಳಗಾವಿ
ಗೋಕಾಕ : ಸತತ ಪರಿಶ್ರಮ, ಸ್ಪಷ್ಟ ಗುರಿ ಮತ್ತು ಉತ್ತಮ ಮಾರ್ಗದರ್ಶನವಿದ್ದರೆ ಮಾತ್ರ ಉತ್ತಮ ಸಾಧನೆಗೈಯಲು ಸಾಧ್ಯವಾಗುತ್ತದೆ ಎಂದು ಮೂಡಲಗಿ ತಹಶೀಲ್ದಾರ ದಿಲ್ಶಾದ್ ಮಹಾತ್ ಹೇಳಿದರು. ಇಲ್ಲಿಯ ಎನ್ಎಸ್ಎಫ್ ಅತಿಥಿ ಗೃಹದ ಆವರಣದಲ್ಲಿ ಕಳೆದ ಶನಿವಾರದಂದು ಜರುಗಿದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮೂಡಲಗಿ ಶೈಕ್ಷಣಿಕ ವಲಯದ ಸಾಧಕ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಮ್ಮ ಮುಂದಿನ ಜೀವನ ಉಜ್ವಲವಾಗಲಿ. ನಿಮ್ಮಿಂದ ಹೆಚ್ಚೆಚ್ಚು ಸಾಧನೆಗಳು ನಡೆದು ಕಲಿತಿರುವ ಶಾಲೆಗೆ ಕೀರ್ತಿ …
Read More »
inmudalgi
ಆಗಷ್ಟ್ 24, 2020 ತಾಲ್ಲೂಕು, ಬೆಳಗಾವಿ
ಮೂಡಲಗಿಯ ಲಯನ್ಸ್ ಕ್ಲಬ್ ಪರಿವಾರದ 2020-21ನೇ ಸಾಲಿನ ಪದಗ್ರಹಣ ಮತ್ತು ಅಧಿಕಾರ ಹಸ್ತಾಂತರ ಕಾರ್ಯಕ್ರಮವನ್ನು ಹಿರಿಯ ನ್ಯಾಯವಾದಿ ಗುರುದೇವ ಸಿದ್ಧಾಪುರಮಠ ಉದ್ಘಾಟಿಸಿದರು. 2020-21ರ ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ ಪದಗ್ರಹಣ ಮೂಡಲಗಿ: ‘ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಮನೋಭಾವದಿಂದ ಮಾಡುವ ಸೇವೆಯು ನಿಜವಾದ ಸಮಾಜ ಸೇವೆಯಾಗುವುದು’ ಎಂದು ಗೋಕಾಕದ ಹಿರಿಯ ನ್ಯಾಯವಾದಿ ಗುರುದೇವ ಸಿದ್ದಾಪುರಮಠ ಹೇಳಿದರು. ಇಲ್ಲಿಯ ಸಾಯಿ ಕಾಲೇಜು ಸಭಾ ಭವನದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ 2020-21ರ …
Read More »
inmudalgi
ಆಗಷ್ಟ್ 24, 2020 ತಾಲ್ಲೂಕು, ಬೆಳಗಾವಿ
ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ಗೋಕಾಕ : ಇತ್ತೀಚೆಗೆ ಮಳೆ ಹಾಗೂ ಪ್ರವಾಹದಿಂದಾಗಿ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ರೈತರ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ಕೂಡಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷಾ ಕಾರ್ಯಗಳನ್ನು ಕೈಗೊಳ್ಳುವಂತೆ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗೋಕಾಕ ಹಾಗೂ ಮೂಡಲಗಿ ತಹಶೀಲ್ದಾರರಿಗೆ ಸೂಚನೆ …
Read More »
inmudalgi
ಆಗಷ್ಟ್ 23, 2020 ತಾಲ್ಲೂಕು, ಬೆಳಗಾವಿ
ಮೂಡಲಗಿ: ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ 2020-21ನೇ ಸಾಲಿನ ಅಧ್ಯಕ್ಷರಾಗಿ ಪುಲಕೇಶ ಆರ್. ಸೋನವಾಲಕರ, ಕಾರ್ಯದರ್ಶಿಯಾಗಿ ಸಚಿಜಯ ಎಸ್. ಮೋಕಾಶಿ ಮತ್ತು ಖಜಾಂಚಿಯಾಗಿ ಸಂಜಯ ಎಸ್. ಮಂದ್ರೋಳಿ ಅವರು ಆಯ್ಕೆಯಾಗಿರುವರು ಎಂದು ಲಯನ್ಸ್ ಕ್ಲಬ್ನ ರೀಜಿನಲ್ ಚೇರ್ಪರಸನ್ ವೆಂಕಟೇಶ ಸೋನವಾಲಕರ ತಿಳಿಸಿದ್ದಾರೆ. ನಿರ್ದೇಶಕರು: ಎಂ.ಬಿ. ಹೊಸೂರ, ಡಾ. ಪ್ರಕಾಶ ನಿಡಗುಂದಿ, ಪ್ರಕಾಶ ಬಾಗೇವಾಡಿ, ಈರಣ್ಣ ಕೊಣ್ಣೂರ, ಶ್ರೀಶೈಲ್ ಲೋಕನ್ನವರ, ಅಬ್ದುಲ್ ಬಾಗವಾನ್ ನಿರ್ದೇಶಕರಾಗಿ ಆಯ್ಕೆಯಾಗಿರುವರು. ಕ್ಲಬ್ ಪರಿವಾರದ ಇತರೆ …
Read More »
inmudalgi
ಆಗಷ್ಟ್ 23, 2020 ತಾಲ್ಲೂಕು, ಬೆಳಗಾವಿ
ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಇಂದು 10 ಕೊರೋನಾ ಕೇಸ್ ಪತ್ತೆ . ಮೂಡಲಗಿ: ಪಟ್ಟಣದಲ್ಲಿ 1 ಗೋಕಾಕ ನಗರ. 2 ಅರಳಿಮಟ್ಟಿ . 1 ಅಂಕಲಗಿ . 1 ಬೈರನಟ್ಟಿ. 1 ಖನಗಾಂವ. 1 ವೆಂಕಟಾಪೂರ. 1 ಮಾಳಮರಡಿ. 1 ಕೊರೋನಾ ಪಾಸಿಟಿವ್ ಕೇಸು ಪತ್ತೆಯಾಗಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ. ಸೋಂಕು ದೃಢಪಟ್ಟಿದ್ದುನ್ನು ಆರೋಗ್ಯ ಇಲಾಖೆಯ ಮೂಲಗಳಿಂದ ಅಧಿಕೃತ ಪ್ರಕಟಣೆಯೊಂದೇ ಬಾಕಿ ಉಳಿದಿದೆ. ಕೊರೋನಾ ಕೇಸುಗಳು ಮೂಡಲಗಿ ತಾಲೂಕಿಗೆ …
Read More »