inmudalgi
ಮಾರ್ಚ್ 25, 2026 ಬೆಳಗಾವಿ, ರಾಜ್ಯ
ಗೋಕಾಕ- ಸಾಮಾಜಿಕ ನ್ಯಾಯದ ರೂವಾರಿ ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಅರಭಾವಿ ಕ್ಷೇತ್ರದಲ್ಲಿ ಕಳೆದ 30 ವರ್ಷಗಳಿಂದ ಎಲ್ಲ ಸಮಾಜಗಳನ್ನು ಒಂದುಗೂಡಿಸಿಕೊಂಡು ಯಾವೊಂದು ಸಮಾಜಕ್ಕೆ ಅನ್ಯಾಯವಾಗದಂತೆ ಅಭಿವೃದ್ಧಿ ಪರ ಕಾರ್ಯಗಳನ್ನು ಮಾಡುತ್ತಿರುವುದಾಗಿ ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು. ಬುಧವಾರದಂದು ತಾಲ್ಲೂಕಿನ ತಳಕಟ್ನಾಳ ಗ್ರಾಮದಲ್ಲಿ ಸುಮಾರು 4 ಕೋಟಿ ರೂಪಾಯಿ ಮೊತ್ತದ ವಿವಿಧ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ, ಮತ, ಪಂಥಗಳ ಬೇಧ ಭಾವ ಮಾಡದೇ …
Read More »
inmudalgi
ಮಾರ್ಚ್ 21, 2026 ಬೆಳಗಾವಿ, ರಾಜ್ಯ
*ಸ್ವಾವಲಂಬಿ ಜೀವನ ನಡೆಸಲು ಯುವ ಜನತೆ ಸತತ ಪ್ರಯತ್ನ ಮಾಡಬೇಕು : ಕಸ್ತೂರಿ ಹೆಗ್ಗಾನಿ* ಗುರ್ಲಾಪುರ : ಪ್ರತಿಯೊಬ್ಬ ಮನುಷ್ಯ ಸ್ವಾವಲಂಬಿ ಜೀವನ ನಡೆಸಬೇಕಾದರೆ ಪ್ರಯತ್ನ ಮತ್ತು ಶ್ರಮ ನಿರಂತರವಾಗಿ ಇರಬೇಕು ಎಂದು ಭಗೀರಥ ಯುವತಿ ಮಂಡಲದ ಅಧ್ಯಕ್ಷೆ ಕಸ್ತೂರಿ ಹೆಗ್ಗಾನಿ ಹೇಳಿದರು. ಅವರು ಗುರ್ಲಾಪುರ ಗ್ರಾಮದಲ್ಲಿ ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ಮೈ ಭಾರತ ಕೇಂದ್ರ ಬೆಳಗಾವಿ, ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ …
Read More »
inmudalgi
ಮಾರ್ಚ್ 13, 2026 ಬೆಳಗಾವಿ, ರಾಜ್ಯ
ಕಲ್ಲೋಳಿಯಲ್ಲಿ ಮಾ.15ರಂದು ರಾಜ್ಯ ಮಟ್ಟದ ಭಜನಾ ಸ್ಪರ್ಧೆ ಮೂಡಲಗಿ: ‘ತಾಲ್ಲೂಕಿನ ಕಲ್ಲೋಳಿ ಸಿದ್ಧಾರೂಢ ಮಠದಲ್ಲಿ ಇಂಚಲದ ಸಾಧು ಸಂಸ್ಥಾನದ ಶಿವಾನಂದ ಭಾರತಿ ಸ್ವಾಮೀಜಿಗಳ ಅಮೋಘ 55ನೇ ವರ್ಷದ ಆಗಮನ ಮಹೋತ್ಸವ ಅಂಗವಾಗಿ ಮಾ. 15ರಂದು 7ನೇ ವರ್ಷದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ’ ಎಂದು ಕಾರ್ಯಕ್ರಮದ ಸಂಚಾಲಕ ಭಗವಂತ ಪತ್ತಾರ ಅವರು ತಿಳಿಸಿದರು. ಶುಕ್ರವಾರ ಸಿದ್ಧಾರೂಢ ಮಠದಲ್ಲಿ ರಾಜ್ಯ ಮಟ್ಟದ ಭಜನಾ ಸ್ಪರ್ಧೆ ಹಾಗೂ ಕಾರ್ಯಕ್ರಮದ ಪ್ರಚಾರ …
Read More »
inmudalgi
ಮಾರ್ಚ್ 11, 2026 ಬೆಳಗಾವಿ, ರಾಜ್ಯ
ಮೂಡಲಗಿ: ಮೂಡಲಗಿಯ ಲಕ್ಷಿö್ಮನಗರದ ಪುಠಾಣಿ ಪ್ಲಾಟ್ದಲ್ಲಿ ಮಲ್ಲಿಕಾರ್ಜನ ದೇವಸ್ಥಾನ ಮತ್ತುಉದ್ಯಾನ ನಿರ್ಮಾಣಕ್ಕಾಗಿ ಪುರಸಭೆಯ ನಿವೇಶನವನ್ನು ನೀಡಬೇಕುಎಂದು ಪಟ್ಟಣದಎಲ್ಲ ಸಮಾಜದ ಹಿರಿಯರು ಪುರಸಭೆ ಮುಖ್ಯಾಧಿಕಾರಿತುಕಾರಾಮ ಮಾದರಅವರಿಗೆ ಬುಧವಾರ ಮನವಿ ನೀಡಿದರು. ಪುರಸಭೆ ಮಾಜಿ ಸದಸ್ಯಜಯಾನಂದ ಪಾಟೀಲ, ಪ್ರಕಾಶ ಪುಠಾಣಿ, ಬಣಜಿಗ ಸಮಾಜದ ಅಧ್ಯಕ್ಷ ಶಿವಪ್ಪ ಭುಜನ್ನವರ ಹಾಗೂ ಅನ್ವರ ನದಾಫ ಮಾತನಾಡಿ ಲಕ್ಷಿö್ಮÃನಗರದ ಪುಠಾಣಿ ಪ್ಲಾಟ್ದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಮತ್ತು ಉದ್ಯಾನ ನಿರ್ಮಾಣಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೂ ಎಲ್ಲ ಭಕ್ತರು …
Read More »
inmudalgi
ಮಾರ್ಚ್ 10, 2026 ಬೆಳಗಾವಿ, ರಾಜ್ಯ
ಮೂಡಲಗಿ : ಪಟ್ಟಣದ ಆರ್ಡಿಎಸ್ ಕಲಾ ವಾಣಿಜ್ಯ ವಿಜ್ಞಾನ ಹಾಗೂ ಸಮಾಜಕಾರ್ಯ ಪದವಿ ಮಹಾವಿದ್ಯಾಲಯ ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕೋಶದ ವತಿಯಿಂದ ಸಮೀಪದ ದತ್ತು ಗ್ರಾಮ ಇಟ್ನಾಳದಲ್ಲಿ ದಿನಾಂಕ : 11-03-2026 ರಿಂದ 17-03-2026 ರವರೆಗೆ ಎನ್.ಎಸ್.ಎಸ್. ವಾರ್ಷಿಕ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ದಿನಾಂಕ : 11-03-2026 ರಂದು ಮಧ್ಯಾಹ್ನ 3 ಘಂಟೆಗೆ ಶಿಬಿರದ ಉದ್ಘಾಟನೆ ನಡೆಸಲಾಗುವುದು ಉದ್ಘಾಟಕರಾಗಿ ಇಟ್ನಾಳದ ಸಿದ್ದೇಶ್ವರ ಆಶ್ರಮದ ಪ.ಪೂ.ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಆಗಮಿಸುವರು …
Read More »
inmudalgi
ಮಾರ್ಚ್ 8, 2026 ಬೆಳಗಾವಿ, ರಾಜ್ಯ
ವರದಿ: ಅಡಿವೇಶ ಮುಧೋಳ. ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬೆಟಗೇರಿ ಕೃಷ್ಣಶರ್ಮ ಚೈತನ್ಯ ಶಾಲೆಯಲ್ಲಿ ಅಕ್ಷರದಾಸೋಹಿ ದಿ. ಎಸ್.ಎಸ್.ಹೊರಟ್ಟಿ ವಿದ್ಯಾ ವಿಕಾಸ ಪ್ರತಿಷ್ಠಾನದ ಅಡಿಯಲ್ಲಿ ವಸತಿ ಸಹಿತ ಉಚಿತ ಶಿಕ್ಷಣದ ಸ್ಪರ್ಧಾತ್ಮಕ ಪರೀಕ್ಷೆ ರವಿವಾರ ಮಾ.8ರಂದು ಯಶಸ್ವಿಯಾಗಿ ಜರುಗಿತು. ವಸತಿ ಸಹಿತ ಉಚಿತ ಶಿಕ್ಷಣಕ್ಕಾಗಿ ಪ್ರಸ್ತುತ 3 ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಸ್ಪರ್ಧಾತ್ಮಕ ಪರೀಕ್ಷೆ ಹಮ್ಮಿಕೊಳ್ಳಲಾಯಿತು. ಬೆಳಗಾವಿ, ಬಾಗಲಕೋಟ, ವಿಜಯಪುರ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಿಂದ …
Read More »
inmudalgi
ಮಾರ್ಚ್ 6, 2026 ಬೆಳಗಾವಿ, ರಾಜ್ಯ
*ಗ್ಯಾರಂಟಿಯತ್ತ ಗಮನ, ಅಭಿವೃದ್ಧಿ ಶೂನ್ಯ ಬಜೆಟ್* ತಮ್ಮ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡುವುದರಲ್ಲಿಯೇ ಬಜೆಟ್ ರೂಪುರೇಶೆ ತಯಾರಿಸಿದಂತಿದೆ. ಕನ್ನಡಿಗರ ಮೇಲೆ ಮತ್ತಷ್ಟು ಸಾಲದ ಹೊರೆಯನ್ನು ಹೊರೆಸಿದ್ದಾರೆ. ಈ ಮೂಲಕ ಜನರನ್ನು ಆರ್ಥಿಕವಾಗಿ ಮತ್ತಷ್ಟು ಕುಗ್ಗುವಂತೆ ಮಾಡಿದ್ದಾರೆ. ಇಲಾಖಾವಾರು ಹಣ ಹಂಚಿಕೆ ಮಾಡಿರುವುದನ್ನು ಗಮನಿಸಿದರೆ ಖಜಾನೆಯಲ್ಲಿ ಹಣದ ಕೊರತೆ ರಾಜ್ಯ ಸರ್ಕಾರವನ್ನು ಕಾಡುತ್ತಿದೆ ಎಂಬುವುದು ಸ್ಪಷ್ಟವಾಗುತ್ತಿದೆ. ಹೀಗಾಗಿ ಇದೊಂದು ಅಭಿವೃದ್ಧಿ ಶೂನ್ಯ, ಪ್ರಗತಿ ರಹಿತ, ದಿಕ್ಕು ದೆಸೆ ಇಲ್ಲದ ಬಜೆಟ್ …
Read More »
inmudalgi
ಮಾರ್ಚ್ 4, 2026 Uncategorized
ವರದಿ: ಅಡಿವೇಶ ಮುಧೋಳ. ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಕಾಮಣ್ಣನ ದಹನ ಹಾಗೂ ಬಣ್ಣದಾಟ ದಿನವಾದ ಮಾರ್ಚ.4ರಂದು ರಂಗು ರಂಗಿನ ಬಣ್ಣದೊಕುಳಿ ಸಡಗರ, ಸಂಭ್ರಮದಿಂದ ನಡೆಯಿತು. ಸಂಪ್ರದಾಯದಂತೆ ಗ್ರಾಮದ ಹಿರಿಯರು ಬೆಳಗ್ಗೆ 6 ಗಂಟೆಗೆ ಗ್ರಾಮದ ದಲಿತ ಕೇರಿಯ ಕಾಮಣ್ಣನ ದಹನಕ್ಕೆ ಚಾಲನೆ ನೀಡಿದ ಬಳಿಕ ಸ್ಥಳೀಯ ಮಾರುಕಟ್ಟೆ ಆವರಣದಲ್ಲಿ ಬೆರಣಿ, ಕಟ್ಟಿಗೆ ಸಂಗ್ರಹಿಸಿದನ್ನು ಒಟ್ಟಿಗೆ ಸೇರಿಸಿ ಕಾಮ ದಹನಕ್ಕೆ ಪ್ರತಿಷ್ಠಾಪಿಸಲ್ಪಟ್ಟ ಕಾಮಣ್ಣನ ದಹನ ಮಾಡಲಾಯಿತು. …
Read More »
inmudalgi
ಮಾರ್ಚ್ 2, 2026 ಬೆಳಗಾವಿ, ರಾಜ್ಯ
ಗೋಕಾಕ್- ಬೇಸಿಗೆಯ ಸಮಯದಲ್ಲಿ ಸಾರ್ವಜನಿಕರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಗಳು ಬರದಂತೆ ಈಗಿನಿಂದಲೇ ಕಾರ್ಯಪ್ರವೃತ್ತರಾಗುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಅಧಿಕಾರಿಗಳಿಗೆ ಸೂಚಿಸಿದರು. ಸೋಮವಾರದಂದು ತಾಲ್ಲೂಕಿನ ದುರದುಂಡಿ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ಕರೆಯಲಾಗಿದ್ದ ಮೂಡಲಗಿ ಮತ್ತು ಗೋಕಾಕ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸಂಭವನೀಯ ಕುಡಿಯುವ ನೀರಿನ ಸಮಸ್ಯೆಗಳು ಎದುರಾಗದಂತೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಕೊಳ್ಳಲು ಶಾಸಕರು ಸೂಚನೆಗಳನ್ನು ನೀಡಿದರು. ಈಗ …
Read More »
inmudalgi
ಫೆಬ್ರವರಿ 28, 2026 ಬೆಳಗಾವಿ, ರಾಜ್ಯ
ಮೂಡಲಗಿ : ಹಳ್ಳೂರ ಗ್ರಾಮದ ಯುವ ಮುಖಂಡರು, ಸಾಲು ಮರದ ಸಿದ್ದಣ್ಣ ಖ್ಯಾತಿಯ ಪರಿಸರ ಪ್ರೇಮಿ, ಸಂಘಟನೆಯ ಸರದಾರ ಬಿರುದು ಪಡೆದ ಉದಯೋನ್ಮುಖ ಪ್ರತಿಭೆ ಸಿದ್ದಣ್ಣ ದುರದುಂಡಿ ಅವರಿಗೆ ಶ್ರೀಮತಿ ಮಾಯವ್ವಾ ವಿಠ್ಠಲ ಕಪರಟ್ಟಿ ಯುವರತ್ನ ಪ್ರಶಸ್ತಿ ಪ್ರಧಾನ ನಡೆಯಿತು. ಕೆಸರಗೋಪ್ಪ ಗ್ರಾಮದ ಶ್ರೀಮತಿ ಮಾಯವ್ವ ವಿಠ್ಠಲ ಕಪರಟ್ಟಿ ಆಂಗ್ಲ ಮಾಧ್ಯಮ ಶಾಲೆಯ 9ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಕಪರಟ್ಟಿ ಫೆಸ್ಟಿವಲ್ 2026 ರ ಕಾರ್ಯಕ್ರಮದಲ್ಲಿ ಯುವ ಸಂಘಟಕ …
Read More »