inmudalgi
ಸೆಪ್ಟೆಂಬರ್ 11, 2024 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ: ಮನುಷ್ಯನನ್ನು ಕಾಪಡುವುದು ಆಸ್ತಿ, ಅಂತಸ್ತು, ಹಣ ಅಲ್ಲ ಭಗವಂತನ ಶಿವ ನಾಮಸ್ಮರಣೆ ಮಾತ್ರ, ಪ್ರತಿಯೋಬ್ಬರು ಜೀವನವನ್ನು ಪಾವನ ಮಾಡಿಕೊಳ್ಳಲು ಶಿವ ನಾಮಸ್ಮರಣೆ ಜಪಿಸಬೇಕೆಂದು ಎಂದು ಅಂಕಲಗಿಯ ಶ್ರೀ ಅಡವಿಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಅಮರಸಿದ್ಧೇಶ್ವರ ಮಹಾಸ್ವಾಮಿಜಿಗಳು ಹೇಳಿದರು. ಅವರು ತಾಲೂಕಿನ ಶಿವಾಪೂರ (ಹ) ಗ್ರಾಮದಲ್ಲಿ ಶ್ರೀ ಗಜಾನನ ಉತ್ಸವ ನಿಮಿತ್ತವಾಗಿ ಮಂಗಳವಾರ ರಾತ್ರಿ ಜರುಗಿದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಭಾಗವಹಿಸಿ ಮಾತನಾಡಿ, ಭಾರತ ದೇಶದಲ್ಲಿ ಬ್ರೀಟಿಷ ವಿರುದ್ದ ಸ್ವತಂತ್ರದ …
Read More »
inmudalgi
ಸೆಪ್ಟೆಂಬರ್ 11, 2024 Recent Posts, ತಾಲ್ಲೂಕು, ಬೆಳಗಾವಿ
ಇಂಚಲದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿಗೆ ಭಕ್ತಿಯ ತುಲಾಭಾರ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ 40ನೇ ಸತ್ಸಂಗ ಸಮ್ಮೇಳನದಲ್ಲಿ ಇಂಚಲ ಸಾಧು ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿಗೆ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶರಣ ಈರಪ್ಪ ಅಡಿವೆಪ್ಪ ದೇಯನ್ನವರ ಮತ್ತು ಕುಟುಂಬದವರಿಂದ ಭಕ್ತಿಯ ತುಲಾಭಾರ ಸೇವೆ ನಡೆಯಿತು. ಹಳಕಟ್ಟಿಯ ನಿಜಗುಣ ಸ್ವಾಮಿಜಿ, ಹುಬ್ಬಳ್ಳಿಯ ರಾಮಾನಂದ ಭಾರತಿ ಸ್ವಾಮಿಜಿ, ಇಂಚಲದ ಪೂರ್ಣಾನಂದ …
Read More »
inmudalgi
ಸೆಪ್ಟೆಂಬರ್ 11, 2024 Recent Posts, ತಾಲ್ಲೂಕು, ಬೆಳಗಾವಿ
ಸನ್ಮಾನ ಮೂಡಲಗಿ:-ಪಟ್ಟಣದ ಪ್ರತಿಷ್ಠಿತ ದಿ.ಮೂಡಲಗಿ ಕೋ-ಆಪ್ ಬ್ಯಾಂಕಿನ ಸಭಾ ಭವನದಲ್ಲಿ ವಿದೇಶ ಪ್ರಯಾಣ ಮಾಡಿ ಬಂದಿರುವ ಬೆಳಗಾವಿ. ಡಿ.ಸಿ.ಸಿ.ಬ್ಯಾಂಕಿನ ಉಪಾಧ್ಯಕ್ಷರಾದ ಸುಭಾಸ ಢವಳೇಶ್ವರ ಅವರಿಗೆ ಮೂಡಲಗಿ ತಾಲೂಕಾ ಪಂಚಮಸಾಲಿ ಘಟಕದವತಿಯಿಂದ ಸನ್ಮಾನ ಮಾಡಲಾಯಿತು. ಡೆನ್ಮಾರ್ಕ್, ನಾರ್ವೆ, ಜರ್ಮನ್,ಐಸ್ ಲ್ಯಾಂಡ್, ಪ್ಯಾರಿಸ್ (ಪ್ರಾನ್ಸ್) ಮತ್ತು ದುಬೈ ಈ ಎಲ್ಲ ದೇಶಗಳನ್ನು ಸುಖಕರ ಪ್ರಯಾಣ ಮಾಡಿ ಬಂದಿರುವ ಸುಭಾಸ ಢವಳೇಶ್ವರ ಅವರಿಗೆ ಪಂಚಮಸಾಲಿ ಮುಖಂಡರು ಗೌರವದ ಸನ್ಮಾನ ಮಾಡಿದರು. …
Read More »
inmudalgi
ಸೆಪ್ಟೆಂಬರ್ 11, 2024 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದಿಂದ ಹರ್ಷಾ ಸಾಂಸ್ಕøತಿಕ ಭವನದಲ್ಲಿ ಆಚರಿಸಿದ ಶಿಕ್ಷಕರ ದಿನಾಚರಣೆಯಲ್ಲಿ ಆನಂದ ಹಮ್ಮನವರ ಹಾಗೂ ಗೀತಾ ವರಾಳೆ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದರು. ಮೂಡಲಗಿ ಲಯನ್ಸ್ ಕ್ಲಬ್ದಿಂದ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ‘ಪ್ರಶಸ್ತಿಗಳು ವೃತ್ತಿ ಜವಾಬ್ದಾರಿ ಹೆಚ್ಚಿಸುತ್ತವೆ’ ಮೂಡಲಗಿ: ‘ಪ್ರಶಸ್ತಿಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತಿದ್ದು, ಉತ್ತಮ ಶಿಕ್ಷಕ ಪ್ರಶಸ್ತಿಯಿಂದ ವೃತ್ತಿಯಲ್ಲಿ ಇನ್ನು ಹೆಚ್ಚು ಕೆಲಸ ಮಾಡಬೇಕೆನ್ನುವ ಉತ್ಸಾಹ ತುಂಬಿದೆ’ ಎಂದು ವಡೇರಹಟ್ಟಿ ಸಿಆರ್ಪಿ …
Read More »
inmudalgi
ಸೆಪ್ಟೆಂಬರ್ 11, 2024 Recent Posts, ತಾಲ್ಲೂಕು, ಬೆಳಗಾವಿ
ಶ್ರೀ ಮಹಾಲಕ್ಷ್ಮೀ ಸೊಸಾಯಿಟಿ ಮೂಡಲಗಿ ಇದರ 32 ನೇ ವಾರ್ಷಿಕ ಮಹಾಸಭೆ ಮೂಡಲಗಿ: ಶ್ರೀ ಮಹಾಲಕ್ಷ್ಮೀ ಅರ್ಬನ್ ಕೋ ಆಪ್ ಕ್ರೇ ಸೊಸಾಯಿಟಿ ಲಿ.,ಮೂಡಲಗಿ ಇದರ 32 ನೇ ವಾರ್ಷಿಕ ಮಹಾಸಭೆಯು ದಿನಾಂಕ 13/09/2024 ರಂದು ಪ್ರಧಾನ ಕಛೇರಿ ಮೂಡಲಗಿ ಸಭಾಭವನದಲ್ಲಿ ಮುಂಜಾನೆ 10-00 ಕ್ಕೆ ಮಲಪ್ಪ. ಗು.ಗಾಣಿಗೇರ ಇವರ ಅಧ್ಯಕ್ಷತೆಯಲ್ಲಿ ಜರುಗಲಿದ್ದು ಸಂಘದ ಎಲ್ಲ ಸದಸ್ಯರು ಸದರೀ ಸಭೆಗೆ ಹಾಜರಾಗಿ ಸಭೆಯನ್ನು ಯಶಸ್ವಿಗೊಳಿಸಲು ಸಂಘದ ಪ್ರಧಾನಕಾರ್ಯದರ್ಶಿ ಸಿ.ಎಸ್.ಬಗನಾಳ ಪ್ರಕಟನೆಯಲ್ಲಿ …
Read More »
inmudalgi
ಸೆಪ್ಟೆಂಬರ್ 10, 2024 Recent Posts, ತಾಲ್ಲೂಕು, ಬೆಳಗಾವಿ
ಒಳ್ಳೆಯ ಕಾರ್ಯಕ್ಕೆ ದಾನ, ಧರ್ಮ ಮಾಡಬೇಕು:ಡಾ.ಶಿವಾನಂದ ಭಾರತಿ ಶ್ರೀಗಳು ಬೆಟಗೇರಿ:ಮನುಷ್ಯನು ಸಾರ್ಥಕ ಜೀವನ ಮಾಡುವಂತೆ ಪರಮಾತ್ಮ ಸಿದ್ಧಾರೂಢರ ರೂಪದಲ್ಲಿ ಭೂಮಿಗೆ ಬಂದು ನಮ್ಮೆಲ್ಲರನ್ನು ಜೀವನ ಮುಕ್ತರನ್ನಾಗಿ ಮಾಡಿದ್ದಾರೆ ಎಂದು ಇಂಚಲ ಸಾಧು ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗಜಾನನ ವೇದಿಕೆಯಲ್ಲಿ ಸೆ.೧೦ರಂದು ನಡೆದ ೪೦ನೇ ಸತ್ಸಂಗ ಸಮ್ಮೇಳನ ಸಮಾರೂಪ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಅಜ್ಞಾನದ ಕತ್ತಲೆ …
Read More »
inmudalgi
ಸೆಪ್ಟೆಂಬರ್ 10, 2024 Recent Posts, ತಾಲ್ಲೂಕು, ಬೆಳಗಾವಿ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ೪೦ನೇ ಸತ್ಸಂಗ ಸಮ್ಮೇಳನದಲ್ಲಿ ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿಗೆ ಗೋಕಾಕ ತಾಲೂಕಿನ ಬೆಟಗೇರಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಮುಖ್ಯಶಿಕ್ಷಕ ವೈ.ಸಿ.ಶೀಗಿಹಳ್ಳಿ ಮತ್ತು ಕುಟುಂಬದವರು ಭಕ್ತಿಯ ತುಲಾಭಾರ ಸೇವೆ ನೆರವೇರಿಸಿದರು.
Read More »
inmudalgi
ಸೆಪ್ಟೆಂಬರ್ 10, 2024 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ: ಮೂರೂವರೆ ವರ್ಷದಿಂದ ಮೀಸಲಾತಿಗಾಗಿ ನಿರಂತರ ಹೋರಾಟ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಯಾವುದೇ ರೀತಿಯ ಸ್ಪಂದನೆ ಸಿಗುತ್ತಿಲ್ಲ. ಆದ್ದರಿಂದ 7ನೇ ಹಂತದ ಹೋರಾಟ ಆರಂಭಿಸಿದ್ದೇವೆ. ಪಂಚಮಸಾಲಿ ಮೀಸಲಾತಿ ಹಕ್ಕೊತ್ತಾಯಕ್ಕಾಗಿ ಸೆ. 22ರಂದು ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ವಕೀಲರ ಪ್ರಥಮ ರಾಜ್ಯ ಸಮಾವೇಶ ಆಯೋಜಿಸಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಮಂಗಳವಾರದಂದು ಪಟ್ಟಣದ ಲಕ್ಮೀನಗರದ ನೇಗಿಲಯೋಗಿ ಫಾರ್ಮ್ ಹೌಸ್ದ್ದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ …
Read More »
inmudalgi
ಸೆಪ್ಟೆಂಬರ್ 10, 2024 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ ಶ್ರೀ ಶಿವಬೋಧರಂಗ ಸೋಸೈಟಿಗೆ 5.70 ಕೋಟಿ ರೂ ಲಾಭ-ಗುಲಗಾಜಂಬಗಿ ಮೂಡಲಗಿ: ಶ್ರೀ ಶಿವಬೋಧರಂಗ ಅರ್ಬನ್ ಸೊಸಾಯಟಿಯು 18 ಶಾಖೆಗಳನ್ನು ಹೊಂದಿ ಶೇರುದಾರರಿಗೆ ಶೇ.16 ರಷ್ಟು ಲಾಭಾಂಶ ವಿತರಿಸ ಪ್ರಗತಿ ಪತಥದ ಸಾಗಿ ಶೇರುದಾರರ ಮತ್ತು ಸಾರ್ವಜನಿಕರ ಮನದಾಳದಲ್ಲಿದೆ ಎಂದು ಸೋಸೈಟಿಯ ಅಧ್ಯಕ್ಷ ಬಸವರಾಜ ವ್ಹಿ ಗುಲಗಾಜಂಬಗಿ ಹೇಳಿದರು. ಅವರು ಪಟ್ಟಣದ ಗುಡ್ಲಮಡ್ಡಿ ವೀರಭದ್ರೇಶ್ವರ ದೇವಸ್ಥಾನದ ಕೆ.ಎಚ್.ಸೋನವಾಲಕರ ಕಲ್ಯಾಣ ಮಂಟಪದಲ್ಲಿ ಜರುಗಿದ ಸ್ಥಳೀಯ ಪ್ರತಿಷ್ಠಿತ ಹಣಕಾಸಿನ ಸಂಸ್ಥೆಯಾದ ಶ್ರೀ …
Read More »
inmudalgi
ಸೆಪ್ಟೆಂಬರ್ 9, 2024 ಪ್ರಕಟಣೆ
ನಿಧನ ವಾರ್ತೆ ಮೂಡಲಗಿ : ವಿದ್ಯಾನಗರದ ನಿವಾಸಿ, ಖಾನಟ್ಟಿ ಸರಕಾರಿ ಪ್ರೌಢಶಾಲೆಯ ಪ್ರಧಾನ ಗುರುಮಾತೆ ಶೀಲವ್ವ ಕೆಂಪಣ್ಣ ಸಾರಾಪೂರ (ಸಣ್ಣಕ್ಕಿ) 56 ಇವರು ಭಾನುವಾರ ನಿಧನರಾದರು. ಪತಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.
Read More »