ಶಿಸ್ತಿನ ಸಂಚಾರ ಸುಗಮ ಸಂಚಾರಕ್ಕೆ ಹಾದಿ ಪಿಎಸ್ಐ ಗೋವಿಂದಗೌಡ ಕುಲಗೋಡ: ಶಿಸ್ತಿನ ಸಂಚಾರ ಸುಗಮ ಸಂಚಾರಕ್ಕೆ ಹಾದಿ ಎಂಬುವದು ಜನರು ತಿಳಿಯಬೇಕು. ವಾಹನ ಚಾಲಕರು ಮತ್ತು ಪಾದಚಾರಿಗಳು ರಸ್ತೆ ಸುರಕ್ಷತೆಯ ಬಗ್ಗೆ ಉತ್ತಮ ಶಿಸ್ತು ಮತ್ತು ಜ್ಞಾನ ಬೆಳಸಿಕೊಳಬೇಕು. ಇಲ್ಲದಿದ್ದರೇ ಜೀವ ಹಾನಿಗೆ ದಾರಿಯಾಗುತ್ತೆ ಎಂದು ಕುಲಗೋಡ ಠಾಣೆಯ ಪಿಎಸ್ಐ ಗೋವಿಂದಗೌಡ ಪಾಟೀಲ ಹೇಳಿದರು. ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಬಸ್ ನಿಲ್ದಾಣದಲ್ಲಿ ಆಯೋಜಿಸಿದ ರಸ್ತೆ ಸುರಕ್ಷತಾ ಸಪ್ತಾಹ …
Read More »TimeLine Layout
ಜನವರಿ, 2023
-
16 ಜನವರಿ
‘ಉತ್ತಮ ಆರೋಗ್ಯ ಕಾಪಾಡಿಕೊಂಡು ಸದೃಢ ಸಮಾಜ ನಿರ್ಮಿಸಬೇಕು’- ಎಲ್.ಟಿ. ತಪಶಿ
‘ಉತ್ತಮ ಆರೋಗ್ಯ ಕಾಪಾಡಿಕೊಂಡು ಸದೃಢ ಸಮಾಜ ನಿರ್ಮಿಸಬೇಕು’ ಮೂಡಲಗಿ: ‘ಗ್ರಾಮೀಣ ಜನರು ಆರೋಗ್ಯದ ಬಗ್ಗೆ ನಿರ್ಲಕ್ಷತೆ ಮಾಡದೆ ಉತ್ತಮ ಆರೋಗ್ಯ ಕಾಪಾಡಿಕೊಂಡು ಸದೃಢ ಸಮಾಜ ನಿರ್ಮಿಸಬೇಕು’ ಎಂದು ಹರಿಯಾನದ ಗುರುಗ್ರಾಮದ ರೈಟ್ಸ್ ಸಂಸ್ಥೆಯ ನಿರ್ದೇಶಕ ಎಲ್.ಟಿ. ತಪಶಿ ಹೇಳಿದರು. ಇಲ್ಲಿಯ ಶಾಂತಿ ನಿಕೇತನ ಪ್ರಾಥಮಿಕ ಶಾಲೆಯ ಆವರಣದಲ್ಲಿ ರೈಟ್ಸ್ ಸಂಸ್ಥೆ, ನೇತಾಜಿ ಇಂಟಿಗ್ರೇಟೆಡ್ ರೂರಲ್ ಡೆವೆಲೆಪ್ಮೆಂಟ್ ಸೊಸೈಟಿ, ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ, ವಿಶ್ವ ಭಾರತಿ ಶಿಕ್ಷಣ ಸಂಸ್ಥೆ …
Read More » -
16 ಜನವರಿ
ರಾಜ್ಯ ಯುವ ಘಟಕದ ನಿರ್ದೇಶಕರಾಗಿ ಗುಡ್ಲಮನಿ ನೇಮಕ
ರಾಜ್ಯ ಯುವ ಘಟಕದ ನಿರ್ದೇಶಕರಾಗಿ ಗುಡ್ಲಮನಿ ನೇಮಕ ಮೂಡಲಗಿ: ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ಭಗವಂತರಾಯಗೌಡ ಪಾಟೀಲ ಅವರು ಮೂಡಲಗಿ ಪುರಸಭೆಯ ಅಧ್ಯಕ್ಷ ಹನಮಂತ ರಾಮಪ್ಪ ಗುಡ್ಲಮನಿ ಅವರನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಯುವ ಘಟಕದ ನಿರ್ದೇಶಕರನ್ನಾಗಿ ನೇಮಕ ಮಾಡಿದ್ದಾರೆ. ಮೂಡಲಗಿ ಪಟ್ಟಣ ಹಾಲು ಮತ ಸಮಾಜದ ಯುವ ಮುಖಂಡ ಹನಮಂತ ಗುಡ್ಲಮನಿ ಅವರನ್ನು ರಾಜ್ಯ ಯುವ ಘಟಕದ ನಿರ್ದೇಶಕರನ್ನಾಗಿ ಆಯ್ಕೆ …
Read More » -
16 ಜನವರಿ
ಪ್ರತಿ ಮನೆ ಮನೆಗೆ ಕಾರ್ಯಕರ್ತರು ಭೇಟಿ ಕೊಟ್ಟು ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡಿ
ಪ್ರತಿ ಮನೆ ಮನೆಗೆ ಕಾರ್ಯಕರ್ತರು ಭೇಟಿ ಕೊಟ್ಟು ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡಿ ಅರಭಾವಿ ಮಂಡಲದಿಂದ ಜರುಗಿದ ವಿಜಯ ಸಂಕಲ್ಪ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಮುಖಂಡರ ಮನವಿ ಗೋಕಾಕ : ಪಕ್ಷದ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಭೇಟಿ ನೀಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಾಧನೆಗಳನ್ನು ಮುಂದಿಟ್ಟುಕೊಂಡು ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ಕೈಗೊಳ್ಳುವಂತೆ ಮಾಜಿ ಸಚಿವ ಶಶಿಕಾಂತ ನಾಯಿಕ ಕರೆ ನೀಡಿದರು. ಇಲ್ಲಿಯ ಅರಭಾವಿ ಮಂಡಲ …
Read More » -
16 ಜನವರಿ
‘ಚಿತ್ರಕಲೆಯು ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುತ್ತದೆ’- ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ್ ಮನ್ನಿಕೇರಿ
‘ಚಿತ್ರಕಲೆಯು ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುತ್ತದೆ’ ಮೂಡಲಗಿ: ‘ಮಕ್ಕಳಲ್ಲಿ ಸೃಜಶೀಲತೆಯನ್ನು ಬೆಳೆಸುವಲ್ಲಿ ಚಿತ್ರಕಲೆಯು ಅತ್ಯಂತ ಪರಿಣಾಮಕಾರಿ ಮಾಧ್ಯಮವಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ್ ಮನ್ನಿಕೇರಿ ಹೇಳಿದರು. ಇಲ್ಲಿಯ ಮೇಘಾ ಪ್ರೌಢ ಶಾಲೆಯಲ್ಲಿ ಜರುಗಿದ ಮೂಡಲಗಿ ತಾಲ್ಲೂಕು ಮಟ್ಟದ ಚಿತ್ರಕಲಾ ಶಿಕ್ಷಕರ ಎರಡು ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಶಾಲಾ ಪಠ್ಯಗಳೊಂದಿಗೆ ಚಿತ್ರಕಲೆಯು ಸಹ ಮಕ್ಕಳ ಬೆಳವಣಿಗೆಗೆ ಪೂರಕವಾಗಿದೆ ಎಂದರು. ಮುಖ್ಯ ಅತಿಥಿ ಸಾಹಿತಿ ಬಾಲಶೇಖರ ಬಂದಿ ಮಾತನಾಡಿ ಚಿತ್ರಕಲೆಯು …
Read More » -
15 ಜನವರಿ
ಸುಣಧೋಳಿಯ ಪಿಯು ಕಾಲೇಜಿನಲ್ಲಿ ಹಳ್ಳಿಹಬ್ಬ ಆಚರಣೆ
ಸುಣಧೋಳಿಯ ಪಿಯು ಕಾಲೇಜಿನಲ್ಲಿ ಹಳ್ಳಿಹಬ್ಬ ಆಚರಣೆ ಮೂಡಲಗಿ: ತಾಲೂಕಿನ ಸುಣಧೋಳಿ ಪಿಯು ಕಾಲೇಜಿನಲ್ಲಿ ರವಿವಾರ ಮಕರ ಸಂಕ್ರಾಂತಿಯ ದಿನದಂದು ಹಳ್ಳಿ ಹಬ್ಬವನ್ನು ಸುಣದೋಳಿಯ ಜಡಿಸಿದ್ಧೇಶ್ವರ ಮಠದ ಶ್ರೀ ಶಿವಾನಂದ ಸ್ವಾಮಿಜೀಗಳ ಸಾನಿಧ್ಯದಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನೀಯರು ಸಾಂಪ್ರದಾಯಿಕ ಹಳೆಯ ಕಾಲದ ಉಡುಗೆ ಧರಿಸಿ ಆಚರಿಸಿದರು. ಕಾಲೇಜಿನ ಪ್ರಾಚಾರ್ಯ ಸುರೇಶ ಲಂಕೆಪ್ಪನವರ ಮಾತನಾಡಿ, ಕುರಿತು ಸಾಂಪ್ರದಾಯಿಕ ಉಡುಗೆ ತೊಡುಗೆಗಳಲ್ಲಿ ಭಾರತ ದೇಶವು ಮುಂಚೂಣಿಯಲ್ಲಿದ್ದು, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಹಳ್ಳಿ ಹಬ್ಬವನ್ನು ಆಚರಿಸುತ್ತಿರುವುದಕ್ಕೆ …
Read More » -
15 ಜನವರಿ
ಛಲ ಬಿಡದೆ ನಿಯಮಿತವಾಗಿ ಅಭ್ಯಾಸ ಮಾಡಿದ್ದೆ ಆದರೆ ಜೀವನದಲ್ಲಿ ದೊಡ್ಡ ಸಾಧನೆ ಮಾಡಬಹುದು- ಲಕ್ಕಪ್ಪ ಹಣಮಣ್ಣವರ್
ಮೂಡಲಗಿ : ಬಡತನ, ದೈಹಿಕ ಅಂಗವೈಕಲ್ಯತೆ, ಸುತ್ತಲಿನ ಪರಿಸರ, ಮಾನಸಿಕ ಸ್ಥಿತಿ ಇವುಗಳನ್ನು ಲೆಕ್ಕಿಸದೆ ನಿರಂತರ ಪ್ರಯತ್ನ, ನಿರ್ದಿಷ್ಟ ಗುರಿಯನ್ನು ಹೊಂದಿ, ಛಲ ಬಿಡದೆ ನಿಯಮಿತವಾಗಿ ಅಭ್ಯಾಸ ಮಾಡಿದ್ದೆ ಆದರೆ ಜೀವನದಲ್ಲಿ ಎಂತಹ ದೊಡ್ಡ ಸಾಧನೆಯನ್ನಾದರೂ ಮಾಡಬಹುದು ಹಾಗೂ ನೀವು ಕೂಡ ನನ್ನ ಹಾಗೆ ಜಿಲ್ಲಾಧಿಕಾರಿಯಾಗ ಬಹುದು ಎಂದು ಬೆಂಗಲೂರ ನಗರದ ಆದಾಯ ತೆರಿಗೆ ಇಲಾಖೆಯ ಜಿಲ್ಲಾಧಿಕಾರಿ ಲಕ್ಕಪ್ಪ ಹಣಮಣ್ಣವರ್ ಅವರು ಅಭಿಪ್ರಾಯ ಪಟ್ಟರು. ಅವರು ಶನಿವಾರ ಸಂಜೆ ತಾಲೂಕಿನ …
Read More » -
13 ಜನವರಿ
‘ಮನುಷ್ಯ ಮನುಷ್ಯರಂತೆ ಬದುಕುವುದನ್ನು ಕಲಿಯಬೇಕು’
‘ಮನುಷ್ಯ ಮನುಷ್ಯರಂತೆ ಬದುಕುವುದನ್ನು ಕಲಿಯಬೇಕು’ ಮೂಡಲಗಿ: ‘ವಿದ್ಯೆ, ದಾನ, ಧರ್ಮ, ಧ್ಯಾನ, ಉತ್ತಮ ಆಚಾಚರಗಳಿಲ್ಲದ ಮನುಷ್ಯನ ಬದುಕು ವ್ಯರ್ಥವಾದದ್ದು’ ಎಂದು ಬೀದರದ ಚಿದಂಬರಾಶ್ರಮದ ಸಿದ್ಧಾರೂಢ ಮಠದ ಡಾ. ಶಿವಕುಮಾರ ಸ್ವಾಮೀಜಿಗಳು ಹೇಳಿದರು. ಇಲ್ಲಿಯ ವಿ.ಬಿ. ಸೋನವಾಲಕರ ಶಾಲೆಯ ಆವರಣದಲ್ಲಿ ವಿಶ್ವಶಾಂತಿಗಾಗಿ ಜರುಗುತ್ತಿರುವ 14ನೇ ಸತ್ಸಂಗ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಕರ್ಮ ಮತ್ತು ಧರ್ಮದ ದಾರಿಯಲ್ಲಿ ನಡೆದು ಮನುಷ್ಯ ತನ್ನ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು. ಯಾವ ಮನುಷ್ಯನು ಧರ್ಮ, …
Read More » -
13 ಜನವರಿ
ಆರ್.ಡಿ.ಎಸ್. ಸಮೂಹ ಸಂಸ್ಥೆಗಳಿಂದ ಬೃಹತ್ ಮ್ಯಾರಾಥಾನ್ ಓಟ
ಆರ್.ಡಿ.ಎಸ್. ಸಮೂಹ ಸಂಸ್ಥೆಗಳಿಂದ ಬೃಹತ್ ಮ್ಯಾರಾಥಾನ್ ಓಟ ಮೂಡಲಗಿ : ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ಇಂದು ಆರ್.ಡಿ.ಎಸ್. ಸಮೂಹ ಶಿಕ್ಷಣ ಸಂಸ್ಥೆಗಳಿಂದ ಬೃಹತ್ ಮ್ಯಾರಾಥಾನ್ ಓಟವನ್ನು ನಡೆಸಲಾಯಿತು ಆರ್.ಡಿ.ಎಸ್. ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸಂತೋಷ ಪಾರ್ಶಿಯವರಿಂದ ಸ್ವಾಮಿವಿವೇಕಾನಂದರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಮ್ಯಾರಾಥಾನ್ ರ್ಯಾಲಿಯನ್ನು ಉದ್ಘಾಟಿಸಲಾಯಿತು. ಮ್ಯಾರಾಥಾನ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರಾದ ಹಣಮಂತ ಗುಡ್ಲಮನಿ ಮತ್ತು ಪುರಸಭೆ ಸದಸ್ಯರು ಹಾಜರಿದ್ದರು ಇದೇ ಸಂದರ್ಭದಲ್ಲಿ ಮೂಡಲಗಿಯ ಕ್ಷೇತ್ರಶಿಕ್ಷಣಾಧಿಕಾರಿ …
Read More » -
12 ಜನವರಿ
ಮೂಡಲಗಿ ಲಯನ್ಸ್ಗೆ ಕ್ರಿಕೆಟ್ ಟೂರ್ನಿಯಲ್ಲಿ ರನ್ನರ್ಸ್ ಪ್ರಶಸ್ತಿ
ಮೂಡಲಗಿ ಲಯನ್ಸ್ಗೆ ಕ್ರಿಕೆಟ್ ಟೂರ್ನಿಯಲ್ಲಿ ರನ್ನರ್ಸ್ ಪ್ರಶಸ್ತಿ ಮೂಡಲಗಿ: ಬಾಗಲಕೋಟ ಲಯನ್ಸ್ ಕ್ಲಬ್ ಆತಿಥ್ಯದಲ್ಲಿ ಜರುಗಿದ 2022-23ನೇ ಸಾಲಿನ ರೀಜನ್ ಲೀಗ್ ಕ್ರೀಕೆಟ್ ಟೂರ್ನಿಯಲ್ಲಿ ಮೂಡಲಗಿ ಲಯನ್ಸ್ ಕ್ಲಬ್ ಪರಿವಾರ ತಂಡವು ರನ್ನರ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಮೂಡಲಗಿ ತಂಡವು ಮೊದಲ ಮೂರು ಸುತ್ತಿನಲ್ಲಿ ಮುದ್ದೇಬಿಹಾಳ, ಜಮಖಂಡಿ ಮತ್ತು ಮಹಾಲಿಂಗಪೂರದೊಂದಿಗೆ ಆಡಿ ಗೆಲವು ಸಾಧಿಸಿತ್ತು. ಅಂತಿಮ ಪಂದ್ಯವನ್ನು ಇಲಕಲ್ ತಂಡದೊಂದಿಗೆ ಆಡಿ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಮೂಡಲಗಿ ಲಯನ್ಸ್ ಕ್ಲಬ್ದ ಅಪ್ಪಣ್ಣ …
Read More »
IN MUDALGI Latest Kannada News