Breaking News

TimeLine Layout

ಆಗಷ್ಟ್, 2021

  • 30 ಆಗಷ್ಟ್

    ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ, ಬೃಹತ ಪ್ರತಿಭಟನೆ

    ಮೂಡಲಗಿ: ತಾಲೂಕಿನ ರಾಜಾಪೂರ ಗ್ರಾಮದ ದಲಿತ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ, ಬೃಹತ ಪ್ರತಿಭಟನೆಯು ಸೋಮವಾರದಂದು ಪಟ್ಟಣದ ಪ್ರಮುಖ ನಗರಲ್ಲಿ ಮೆರವಣಿಗೆ ಮೂಲಕ ಕಲ್ಮೇಶ್ವರ ವೃತ್ತದಲ್ಲಿ ಜಮಾಯಿಸಿ, ಅತ್ಯಚಾರ ಮಾಡಿದ ಐದು ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ತಹಶೀಲ್ದಾರ ಮೂಲಕ ಸಿಎಂ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸದರು. ದಲಿತ ಮುಖಂಡ ರಮೇಶ ಸಣ್ಣಕ್ಕಿ ಮಾತನಾಡಿ, ತಾಲೂಕಿನ ರಾಜಾಪೂರ ದಲಿತ ವಿದ್ಯಾರ್ಥಿನಿ ಮೇಲೆ ಐವರು ಸಾಮೂಹಿಕ ಅತ್ಯಾಚಾರವೆಸಗಿ …

    Read More »
  • 30 ಆಗಷ್ಟ್

    ಬಾಲಕೃಷ್ಣ ಮತ್ತು ರಾಧೆಯ ವೇಷದಲ್ಲಿ ಆರೋಹಿ ನಾಡಗೌಡರ

    ಬಾಲಕೃಷ್ಣ ಮತ್ತು ರಾಧೆಯ ವೇಷದಲ್ಲಿ ಆರೋಹಿ ನಾಡಗೌಡರ ಗಮನಸೆಳೆದ ಕೃಷ್ಣನ ವೇಷದಲ್ಲಿ ಆರೋಹಿ ಮೂಡಲಗಿ: ಮೂಡಲಗಿಯ ಆರೋಹಿ ಕೃಷ್ಣಾ ನಾಡಗೌಡರ ಪುಟಾಣಿಯು ಸೋಮವಾರ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಬಾಲಕೃಷ್ಣ ಮತ್ತು ರಾಧೆಯ ವೇಷದಲ್ಲಿ ಗಮನಸೆಳೆದಳು. ಆರೋಹಿ ಇಲ್ಲಿಯ ಪುರಸಭೆ ಮಾಜಿ ಉಪಾಧ್ಯಕ್ಷ ಆರ್.ಪಿ. ಸೋನವಾಲಕರ ಹಾಗೂ ವಿದ್ಯಾ ಅವರ ಮೊಮ್ಮಗಳು. ತಾಯಿ ಶೃತಿ ಮಗುವಿನ ವೇಷವನ್ನು ಸಿದ್ದಗೊಳಿಸಿದ್ದರು.

    Read More »
  • 29 ಆಗಷ್ಟ್

    ನೂತನ ಟಿವಿಎಸ್ ಶೋರೂಮ್‍ದ ಉದ್ಘಾಟನೆ ಮತ್ತು 5ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ

      ಶ್ರದ್ಧೆ ಮತ್ತು ವಿಶ್ವಾಸದಲ್ಲಿ ಯಶಸ್ಸು ಸಾಧನೆ ಮೂಡಲಗಿ: ‘ಶ್ರದ್ದೆ ಮತ್ತು ಜನರ ವಿಶ್ವಾಸವಿದ್ದರೆ ಎಲ್ಲ ವ್ಯವಹಾರಗಳು ಯಶಸ್ಸು ಸಾಧಿಸುತ್ತವೆ’ ಎಂದು ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿಗಳು ಹೇಳಿದರು. ಇಲ್ಲಿಯ ಕಾಲೇಜು ರಸ್ತೆಯಲ್ಲಿ ಸಮರ್ಥ ಟಿವಿಎಸ್ ದ್ವಿಚಕ್ರ ವಾಹನಗಳ ಮಾರಾಟ ನೂತನ ಶೋರೂಮ ಮತ್ತು 5ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ದೈವಭಕ್ತಿ ಇದ್ದರೆ ಸಾಗುವ ದಾರಿಯು ಯಶಸ್ಸಿನತ್ತ ಇರುತ್ತದೆ ಎಂದರು. ಶಿವಬಸಪ್ಪ ಭೀಮಪ್ಪ …

    Read More »
  • 29 ಆಗಷ್ಟ್

    ವಚನ ಸಾಹಿತ್ಯವು ಕನ್ನಡ ಸಾರಸ್ವತಲೋಕದ ಅಕ್ಷಯ ಸಂಪತ್ತು -ಸಾಹಿತಿ ಪ್ರೊ. ಚಂದ್ರಶೇಖರ ಅಕ್ಕಿ

    ಮೂಡಲಗಿ: ‘12ನೇ ಶತಮಾನದಲ್ಲಿ ರಚಿತವಾದ ವಚನ ಸಾಹಿತ್ಯವು ಕನ್ನಡ ಸಾರಸ್ವತಲೋಕದ ಅಕ್ಷಯ ಸಂಪತ್ತು‘ ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಚಂದ್ರಶೇಖರ ಅಕ್ಕಿ ಹೇಳೀದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತ ಮೂಡಲಗಿ ಮತ್ತು ಗೋಕಾಕ ತಾಲ್ಲೂಕು ಘಟಕಗಳಿಂದ ಲಿಂಗೈಕ್ಯ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಗಳ ಜನ್ನ ದಿನದ ಅಂಗವಾಗಿ ಭಾನುವಾರ ಗೂಗಲ್‌ ಮೀಟ್‌ದಲ್ಲಿ ಆಯೋಜಿಸಿದ ವಚನ ದಿನ ಆಚರಣೆಯ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ವಚನ  ಸಾಹಿತ್ಯದ ರೂಪವು ಜಗತ್ತಿನ ಯಾವ …

    Read More »
  • 28 ಆಗಷ್ಟ್

    ರಾಜಯೋಗಿನಿ ಪ್ರಕಾಶಮನಿ ದಾದೀಜಿ ಅವರು ವಿಶ್ವ ಭಾತೃತ್ವವನ್ನು ಬೆಳೆಸುವ ಮೂಲಕ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ’ – ಬ್ರಹ್ಮಕುಮಾರಿ ರೇಖಾ ಅಕ್ಕನವರು

      ಮೂಡಲಗಿ: ರಾಜಯೋಗಿನಿ ಪ್ರಕಾಶಮನಿ ದಾದೀಜಿ ಅವರು ವಿಶ್ವ ಭಾತೃತ್ವವನ್ನು ಬೆಳೆಸುವ ಮೂಲಕ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ’ ಎಂದು ಬ್ರಹ್ಮಕುಮಾರಿ ರೇಖಾ ಅಕ್ಕನವರು ಹೇಳಿದರು. ಇಲ್ಲಿಯ ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರ ಈಶ್ವರಿ ವಿಶ್ವವಿದ್ಯಾಲಯದಲ್ಲಿ ರಾಜಯೋಗಿನಿ ಬ್ರಹ್ಮಕುಮಾರಿ ಪ್ರಕಾಶಮನಿ ದಾದೀಜಿ ಅವರ 14ನೇ ಸ್ಮøತಿ ದಿವಸದಲ್ಲಿ ಮಾತನಾಡಿದ ಪ್ರಕಾಶಮನಿ ದಾದೀಜಿ ಅವರು ಬದುಕಿನ ರೀತಿಯು ಜಗತ್ತಿಗೆ ಸಂದೇಶವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರಿಗೆ ರಕ್ಷಾಬಂಧನ ಮಾಡಿದರು. ಗುರುಲಿಂಗಪ್ಪ ಶೀಲವಂತ, ಶಂಕರ …

    Read More »
  • 28 ಆಗಷ್ಟ್

    ದಾಲ್ಮೀಯಾ ಸಿಮೇಂಟ್ ಕಾರ್ಖಾನೆ ಮತ್ತು ಗಣಿಗಾರಿಕೆ ವಿಸ್ತರಣೆಯ ಸಾರ್ವಜನಿಕರ ಹವಾಲು ಸಭೆ

    ಮೂಡಲಗಿ: ದಾಲ್ಮೀಯಾ ಸಿಮೇಂಟ್ ಕಾರ್ಖಾನೆ ಮತ್ತು ಗಣಿಗಾರಿಕೆ ವಿಸ್ತರಣೆಯ ಸಾರ್ವಜನಿಕರ ಹವಾಲು ಸಭೆಯಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳ ಹೇಳಿಕೆಯ ವಿಡಿಯೋ ರೀಕಾಡ್ ಹಾಗೂ ಮನವಿಗಳನ್ನು ಪರಿಸರ ಮಂತ್ರಾಯ ಭಾರತ ಸರ್ಕಾರಕ್ಕೆ ವರದಿಯನ್ನು ಕಳಿಸಲಾಗುವುದು ಎಂದು ಜಿಲ್ಲಾ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಹೇಳಿದರು. ಶುಕ್ರವಾರದಂದು ತಾಲೂಕಿನ ಯಾದವಾಡ ದಾಲ್ಮೀಯಾ ಸಿಮೆಂಟ್ ಕಾರ್ಖಾನೆಯ ಹತ್ತಿರ ಆಯೋಜಿಸಲಾದ ಕಾರ್ಖಾನೆಯ ವಿಸ್ತರಣೆ ಬಗ್ಗೆ ಪರಿಸರ ಸಾರ್ವಜನಿಕರ ಆಲಿಕೆ ಸಭೆಯ ಅಧ್ಯಕ್ಷತೆ ವಹಿಸಿ ಸಾರ್ವಜನಿಕರ ಅಭಿಪ್ರಾಯಗಳನ್ನು …

    Read More »
  • 28 ಆಗಷ್ಟ್

    ಮಗುವಿನ ಸರ್ವಾಂಘೀನ ಅಭಿವೃದ್ಧಿ ಹೊಂದಿದಾಗ ಮಾತ್ರ ಶೈಕ್ಷಣಿಕ ಕಾಳಜಿಯ ಬಗ್ಗೆ ಗುರ್ತಿಸಲು ಸಾಧ್ಯವಾಗುವದು – ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ

    ಮೂಡಲಗಿ: ಮಕ್ಕಳ ಕಲಿಕೆ ಫಲಪ್ರಧವಾಗುವ ನಿಟ್ಟಿನಲ್ಲಿ ಶಿಕ್ಷಕರ, ವಿದ್ಯಾರ್ಥಿಯ ಹಾಗೂ ಪಾಲಕರ ಪಾತ್ರ ಬಹುಮುಖ್ಯವಾಗಿದೆ. ಮಗುವಿನ ಸರ್ವಾಂಘೀನ ಅಭಿವೃದ್ಧಿ ಹೊಂದಿದಾಗ ಮಾತ್ರ ಶೈಕ್ಷಣಿಕ ಕಾಳಜಿಯ ಬಗ್ಗೆ ಗುರ್ತಿಸಲು ಸಾಧ್ಯವಾಗುವದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು. ಅವರು ಶನಿವಾರ ಪಟ್ಟಣದ ಬಿಇಒ ಕಾರ್ಯಾಲಯದಲ್ಲಿ ಜರುಗಿದ ‘ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದುಕೊಂಡಿರುವ ಶಾಲಾ ಮುಖ್ಯಸ್ಥರ ಸನ್ಮಾನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶೈಕ್ಷಣಿಕ ವಲಯವು ಪ್ರತಿ ವರ್ಷವು ಪ್ರತಿಯೊಂದು …

    Read More »
  • 27 ಆಗಷ್ಟ್

    ಕಾರ್ಮಿಕ ರಾಷ್ಟ್ರೀಯ ಡಾಟಾ ಬೇಸ್ ಇ-ಶ್ರಮ ಯೋಜನೆ ಜಾರಿ

    ಮೂಡಲಗಿ: ಕಾರ್ಮಿಕರ ಬಗ್ಗೆ ಕಾಳಜಿಯಿಂದ ಕೇಂದ್ರ ಸರ್ಕಾರ ಅಸಂಘಟಿತ ಕಾರ್ಮಿಕ ರಾಷ್ಟ್ರೀಯ ಡಾಟಾ ಬೇಸ್ ಇ-ಶ್ರಮ ಯೋಜನೆ ಜಾರಿಗೆ ಬಂದಿದ್ದು, ಎಲ್ಲ ವರ್ಗದ ಅಸಂಘಟಿತ ಕಾರ್ಮಿಕರು ನೊಂದಣಿ ಮಾಡುವ ಮೂಲಕ ಸರ್ಕಾರದ ಯೋಜನೆಗಳನ್ನು ಪಡೆಯಲು ಇದರಿಂದ ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಲಹಾ ಸಮಿತಿ ಸದಸ್ಯ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ಶುಕ್ರವಾರ ಆ 27 ರಂದು ಅರಭಾಂವಿ ವಿಧಾನಸಭಾ ಮತಕ್ಷೇತ್ರದ ಕಲ್ಲೋಳಿ …

    Read More »
  • 26 ಆಗಷ್ಟ್

    ಕಲ್ಲೋಳಿ: ವಿವಿಧ ಬೆಳೆಗಳ ತರಬೇತಿ ಗೋವಿನಜೋಳ ಮತ್ತು ಸೋಯಾಅವರೆ ಕ್ಷೇತ್ರೋತ್ಸವ

    ಕಲ್ಲೋಳಿ: ವಿವಿಧ ಬೆಳೆಗಳ ತರಬೇತಿ ಗೋವಿನಜೋಳ ಮತ್ತು ಸೋಯಾಅವರೆ ಕ್ಷೇತ್ರೋತ್ಸವ ಮೂಡಲಗಿ: ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ಸಂಶೋಧನಾ ಕೇಂದ್ರ ಕಲ್ಲೋಳಿ ಇವುಗಳ ಸಂಯುಕ್ತಾಶ್ರಯಲ್ಲಿ ಗೋವಿನಜೋಳ ಮತ್ತು ಸೋಯಾಅವರೆ ಕ್ಷೇತ್ರೋತ್ಸವ ಹಾಗೂ ತರಬೇತಿ ಕಾರ್ಯಕ್ರಮ ಸೋಮವಾರ ಆ 30 ರಂದು ಬೆಳಿಗ್ಗೆ 9.00 ಗಂಟೆಗೆ ಕಲ್ಲೋಳಿ ಪಟ್ಟಣದ ಬೀಜ ಸಂಸ್ಕರಣಾ ಘಟಕ, ಕೃಷಿ ಸಂಶೋಧನಾ ಕೇಂದ್ರದಲ್ಲಿ ನಡೆಯಲಿದೆ. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಮುಖ್ಯತಿಥಿಗಳಾಗಿ ಅರಭಾವಿ …

    Read More »
  • 25 ಆಗಷ್ಟ್

    ಜಾನುವಾರ ಸಂತೆ ಭಾನುವಾರದ ಬದಲು ಬುಧವಾರ ಅನುಮತಿಗೆ ಮನವಿ

    ಜಾನುವಾರ ಸಂತೆ ಭಾನುವಾರದ ಬದಲು ಬುಧವಾರ  ಅನುಮತಿಗೆ ಮನವಿ ಮೂಡಲಗಿ : ಪ್ರತಿ ಶನಿವಾರ ಹಾಗೂ ಭಾನುವಾರ ವಿಕೆಂಡ್ ಕಪ್ರ್ಯೂ ಜ್ಯಾರಿ ಇರುವ ಈ ದಿನಗಳಲ್ಲೇ ನಡೆಯುವ ಇಲ್ಲಿನ ಪ್ರಖ್ಯಾತ ಜಾನುವಾರು ಸಂತೆ ಕೊರೋನಾ ಮಹಾಮಾರಿಯಿಂದ ಸಂತೆ ಸ್ಥಗಿತಗೊಂಡು ವ್ಯಾಪಾರಸ್ಥರು,ದಲ್ಲಾಳಿಗಳು,ಗ್ರಾಮಸ್ಥರು ಆರ್ಥಿಕ ಸಂಕಷ್ಟಕ್ಕೀಡಾಗಿ ಉಪ ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಪುರಸಭೆ ಸದಸ್ಯ ಹುಸೇನಸಾಬ ಶೇಖ ಹೇಳಿದರು. ತಹಸೀಲದಾರರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಈ ಸಂತೆಯಿಂದ ಅದೆಷ್ಟೋ ಬಡಬಗ್ಗರು …

    Read More »