*ಹುಡೇದವರಿಗೆ ಕರ್ನಾಟಕ* *ವಿಕಾಸ ರತ್ನ ಪ್ರಶಸ್ತಿ ಪ್ರದಾನ*
ಮೂಡಲಗಿ: ಭಾರತ ರತ್ನ ಸರ್ರ ಎಂ ವಿಶ್ವೇಶ್ವÀರಯ್ಯ ಇಂಜಿನಿಯರಿಂಗ ಪ್ರತಿಷ್ಟಾನ ಟ್ರಸ್ಟ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರ ಸಹಕಾರದೊಂದಿ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸಾಧಕರ ಸೇವೆಯಲ್ಲಿ “ಕರ್ನಾಟಕ ವಿಕಾಸ ರತ್ನ ರಾಜ್ಯ ಪ್ರಶಸ್ತಿ ಪಡೆದ ಯಾದವಾಡ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಎಮ್.ಎಚ್. ಹುಡೇದ ಅವರಿಗೆ ಬೆಂಗಳೂರಿನ ರವಿಂದ್ರ ಕಲಾಕ್ಷೇvದಲ್ಲಿÀ್ರ ಜರುಗಿದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಸಾನಿಧ್ಯ ವಹಿಸಿದ ಬೆಂಗಳೂರ ಕುಂಬಳಗೋಡ ವಿಶ್ವ ಒಕ್ಕಲಿಗರ ಮಹಾಸಂಸ್ಥಾನಮಠದ ಶ್ರೀ ಕುಮಾರ ಚÀಂದ್ರಶೇಖರನಾಥ ಸ್ವಾಮೀಜಿ ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ, ಚಲನ ಚಿತ್ರ ಹಿರಿಯ ಕಲಾವಿದ ಶಂಕರಭಟ್, ಕಲಾವಿದೆ ಮೀನಾ ಅವರು ಮಾನಾಡಿ ಸಮಾಜದಲ್ಲಿ ಯಾವುದೇ ವ್ಯಕ್ತಿಯು ಗುರುತಿಸ ಬೇಕಾದರೆ ಅವರು ಮಾಡವಂತಹ ಕಾರ್ಯ ಕ್ಷಮತೆ ವಿವಿಧ ಕ್ಷೇತ್ರಗಳಲ್ಲಿ ಸಾರ್ವಜನಿಕರ ಶ್ರೇಯೋಭಿವೃದ್ದಿಗಾಗಿ ಮಾಡಿದ ಉತ್ತಮ ಕೆಲಸದ ಅವಶ್ಯಕವಾಗಿದೆ ಇಂತಹವರನ್ನು ಗುರುತಿಸುವ ಕೆಲಸವನ್ನು ಸಂಘಟಕರು ವಿಶ್ವೇಸ್ವರಯ್ಯ ಇಂಜಿನಿಯರಿಂಗ ಪ್ರತಿಷ್ಟಾನ ಟ್ರಸ್ಟ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮಾಡುತ್ತಿದೆ ಎಂದರು.
ವಿಧಾನ ಪರಿಷತಸದಸ್ಯ ಅ ದೇವೇಗೌಡರ, ಹಟ್ಟಿ ಗೋಲ್ಡ್ ಮೈನ್ ಮಾಜಿ ಅಧ್ಯಕ್ಷ ಟಿ.ರಘೂಮೂರ್ತಿ, ಉಡುಪಿಯ ದೊಡ್ಡನಗುಡ್ಡೆ ಶ್ರೀ ದುರ್ಗಾ ಆದಿ ಶಕ್ತಿ ಕ್ಷೇತ್ರದ ಧರ್ಮದರ್ಶಿ ರಮಾನಂದ ಗೂರೂಜಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ಕಲಬುರಗಿಯ ಹಿರಿಯ ತಂತ್ರಜ್ಞಾನ ಡಾ: ಸುರೇಶ ಎಲ್.ಶರ್ಮಾ, ಪತ್ರಕರ್ತ ಹಾಗೂ ಚಲಚಿತ್ರ ನಿರ್ದೇಶಕ ರಮೇಶ ಸುರ್ವೆ, ಪ್ರತಿಷ್ಠಾನದ ಉತ್ತರ ಕರ್ನಾಟಕ ವಿಭಾಗದ ಸಂಚಾಲಕ ಬಿ.ಎಚ್.ಹೊಂಗಲ ಮತ್ತಿತರು ಇದ್ದರು.
ಫೋಟೋ ಕ್ಯಾಪ್ಸನ್> ಮೂಡಲಗಿ: ಯಾದವಾಡ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಎಮ್.ಎಚ್. ಹುಡೇದ ಅವರಿಗೆ ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರದಲ್ಲಿ ಜರುಗಿದ ಸಮಾರಂಭದಲ್ಲಿ “ಕರ್ನಾಟಕ ವಿಕಾಸ ರತ್ನ ರಾಜ್ಯ ಪ್ರಶಸ್ತಿ” ಪ್ರದಾನ ಮಾಡಿ ಗೌರವಿಸಿದರು.
ವರದಿ- ಈಶ್ವರ ಢವಳೇಶ್ವರ