ಕೋವಿಡ್ ಲಸಿಕಾ ಶಿಬಿರ
ಮೂಡಲಗಿ: ರೋಗ ನಿರೋಧಕ ಶಕ್ತಿ ಹೊಂದಲು ಹಾಗೂ ಕೊರೋನಾ ರೋಗ ಬಾದಿಸದಂತೆ ಮುನ್ನೆಚ್ಚರಿಕೆಗಾಗಿ ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಪಡೆಯುವುದು ಅವಶ್ಯವಿದೆ ಎಂದು ಮಾಜಿ ಪುರಸಭೆ ಸದಸ್ಯ ಈರಪ್ಪ ಬನ್ನೂರ ಹೇಳಿದರು
ಶನಿವಾರದಂದು ಇಲ್ಲಿನ ವಾರ್ಡ ನಂ 17 ಕೆಇಬಿ ಪ್ಲಾಟ್, ಈರಣ್ಣ ನಗರದ ಹನುಮಾನ ದೇವಸ್ಥಾನ ಆವರಣದಲ್ಲಿ ಕೋವಿಡ್ ಲಸಿಕಾ ಶಿಬೀರದಲ್ಲಿ ಮಾತನಾಡಿದ ಅವರು, ಕೊರೋನಾ ಲಸಿಕೆಯಿಂದ ಯಾರೂ ವಂಚಿತರಾಗಬಾರದೆಂದುಇಲ್ಲಿನ ನಿವಾಸಿಗಳ ಅನುಕೂಲತೆಗಾಗಿ ಈ ವ್ಯವಸ್ಥೆ ಮಾಡಲಾಗಿದೆ ಇದರ ಸದುಪಯೋಗ ಎಲ್ಲರೂ ಪಡೆಯಬೇಕು ಹಾಗೂ ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದರು.
ಆಶಾ ಕಾರ್ಯಕರ್ತೆಯರಾದ ಶಕುಂತಲಾ ಗೋಲಶೆಟ್ಟಿ, ರತ್ನಾ ದಳವಾಯಿ,ಆರೋಗ್ಯ ಸಿಬ್ಬಂದಿ ಆರ್ ಎಸ್ ತೆಳಗಡೆ, ಅಂಗನವಾಡಿ ಕಾರ್ಯಕರ್ತೆ ರೇಖಾ ಹೊಸಮನಿ ಇದ್ದರು.
ಈ ಶಿಬಿರದಲ್ಲಿ 100 ಜನರು ಕೋವಿಡ್ ಲಸಿಕೆ ಪಡೆದರು.