Breaking News
Home / Recent Posts / ಮೊಹರಂ ಹಬ್ಬದ ಪ್ರಯುಕ್ತ ಕರ್ಬಲ್ ಮತ್ತು ರಿವಾಯತ್ ಪದಗಳು

ಮೊಹರಂ ಹಬ್ಬದ ಪ್ರಯುಕ್ತ ಕರ್ಬಲ್ ಮತ್ತು ರಿವಾಯತ್ ಪದಗಳು

Spread the love

 

ಮೂಡಲಗಿ: ತಾಲೂಕಿನ ಪಿ.ಜಿ.ಹುಣಶ್ಯಾಳ ಗ್ರಾಮದಲ್ಲಿ ಮಂಗಳವಾರ ಸಾಯಂಕಾಲ ಮೊಹರಮ್ ಹಬ್ಬದ ಪ್ರಯುಕ್ತ ವಿವಿಧ ಜಾನಪದ ತಂಡಗಳಿಂದ ಕರ್ಬಲ್ ಮತ್ತು ರಿವಾಯತ್ ಪದಗಳ ಹಾಗೂ ಭಜಂತ್ರಿ ಕಲಾವಿದರಿಂದ ಶಹನಾಯಿ ವಾದನ ಕಾರ್ಯಕ್ರಮ ಜರುಗಿತು.

ಪ್ರತಿ ವರ್ಷ ಈ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಬಾಂದವರು ಭಾವೈಕ್ಯತೆಯಿಂದ ಮೊಹರಂ ಹಬ್ಬ ಆಚರಿಸುವ ವಾಡಿಕೆ. ಮೊಹರಂ ಕತ್ತಲ ರಾತ್ರಿ ಅಂಗವಾಗಿ ನಡೆದ ಕರ್ಯಕ್ರಮದಲ್ಲಿ ಲೇಜಿಮ್,ಹಲಗಿ ಕುಣಿತದೊಂದಿಗೆ ಹಾಡುಗಳ ಸ್ಪರ್ದೆಯಲ್ಲಿ ಮೂಡಲಗಿಯ ಎರಡು ಹಾಗೂ ಹುಣಶ್ಯಾಳ ಗ್ರಾಮದ ಎರಡು ತಂಡಗಳು ಭಾಗವಹಿಸಿ ಬೀಬಿ ಫಾತಿಮಾ,ಹಸೇನ ಹುಸೇನ ಕುರಿತು ‘ಬೀಬಿ ಫಾತಿಮಾನ ಕತಿ ಕೇಳರಿ ಕುಂತ’ಎಂಬ ವಿವಿಧ ಕರ್ಬಲ್,ರಿವಾಯತ್ ಪದಗಳನ್ನು ಹಾಡಿದರು. ಹುಣಶ್ಯಾಳ ಪಿ ಜಿ ಗ್ರಾಮದ ನನ್ನುಸಾಬ ನದಾಫ್ ಮತ್ತು ಕಾಲೇಸಾಬ ತಂಡದ ಕಲಾವಿದರು ಹಾಡಿದ ಹಾಡುಗಳು ಜನಮನ ಸೆಳೆದವು ಸಹ ಕಲಾವಿದರಾದ ಮರಮಸಾಬ ಗದ್ಯಾಳ,ಹಗಣುಸಾಬ ಶೇಖ ಗದ್ಯಾಳ,ಕಾಲೆಸಾಬ ಹುಣಶ್ಯಾಳ,ಹಾಜಿಸಾಬ ಹುಣಶ್ಯಾಳ, ಮಹ್ಮದ ಹುಣಶ್ಯಾಳ, ಚುಟುಕುಸಾಬ ಜಾತಗಾರ(ಮಂಟೂರ) ಹುಣಶ್ಯಾಳ ತಂಡದ ನನ್ನುಸಾಬ ನದಾಫ ಶಂಕರ ಸುಣಗಾರ, ಇಸ್ಮಾಯಿಲ್ ನದಾಫ, ಅಪ್ಪಯ್ಯಾ ಸುಂಕದ, ಮಗತುಮಸಾಬ ನದಾಫ, ನಾಗಪ್ಪ ರವಳೋಜಿ, ರಾಮಸಿದ್ದ ಜಂಗಟಿ, ಲಗಪ್ಪ ನನ್ನಾರಿ, ಬಸವರಾಜ ನನ್ನಾರಿ ಇವರು ಹಾಡಿ ಪ್ರೋತ್ಸಾಹಧನ ಪಡೆದರು.
ಈ ಸಮಯದಲ್ಲಿ ಮುಖಂಡರಾದ ಮಹ್ಮದಸಾಬ ಮುಲ್ಲಾ (ಶೇಗುಣಸಿ), ಕಲ್ಲಪ್ಪ ಗೌನಾಳಿ, ಪಾಂಡುರಂಗ ಕಲಾಲ, ವಿಜಯ ಗೋಣಿ ಹಾಗೂ ಗ್ರಾಮದ ಅನೇಕ ಭಕ್ತರು ಇದ್ದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ