Breaking News
Home / Recent Posts / ಎಲ್ಲಿ ಹೆಣ್ಣು ಮಕ್ಕಳು ಪೂಜಿಸಲು ಪಡುತ್ತಾರೋ ಅಲ್ಲಿ ಸಾಕ್ಷಾತ ದೇವತೆಗಳು ವಾಸವಾಗಿರುತ್ತಾರೆ- ಪೂಜ್ಯಶ್ರೀ ಅಮರಸಿದ್ದೇಶ್ವರ ಮಹಾಸ್ವಾಮೀಜಿ

ಎಲ್ಲಿ ಹೆಣ್ಣು ಮಕ್ಕಳು ಪೂಜಿಸಲು ಪಡುತ್ತಾರೋ ಅಲ್ಲಿ ಸಾಕ್ಷಾತ ದೇವತೆಗಳು ವಾಸವಾಗಿರುತ್ತಾರೆ- ಪೂಜ್ಯಶ್ರೀ ಅಮರಸಿದ್ದೇಶ್ವರ ಮಹಾಸ್ವಾಮೀಜಿ

Spread the love

ಮೂಡಲಗಿ: ದೇವತೆಗಳು ನಮ್ಮ ಮನೆಯಲ್ಲೇ ಇರುತ್ತಾರೆ ಭಕ್ತಿಯಿಂದ ಪೂಜಿಸುವ ಭಾವ ಇರಬೇಕು ಶಕ್ತಿ ಅಂದರೆ ನವ ದೇವತೆಗಳ ಅವತಾರ ಆ ಅವತಾರ ಈ ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಧ್ಯಾನ ಪ್ರಾರ್ಥನೆ ಭಕ್ತಿ ಶೃದ್ದೆಯಿಂದ ದೇವಿ ಆರಾಧನೆ ಮಾಡಬೇಕು ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು. ಅವರು ಹಳ್ಳೂರ ಗ್ರಾಮದ ಶ್ರೀ ಧ್ಯಾಮವ್ವಾ ತಾಯಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ನಿಮಿತ್ಯವಾಗಿ 9 ದಿವಸಗಳ ವರಗೆ ನಡೆದ ಶ್ರೀ ದೇವಿ ಪುರಾಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ನಮ್ಮ ಮುಂದಿನ ಜನತೆಗೆ ಉತ್ತಮ ಸಂಸ್ಕಾರ ಕೊಡೋಣ ಎಂದರು. ಅಂಕಲಗಿ ಅಡವಿಸಿದ್ದೇಶ್ವರ ಮಠದ ಪೂಜ್ಯಶ್ರೀ ಅಮರಸಿದ್ದೇಶ್ವರ ಮಹಾಸ್ವಾಮೀಜಿ ಮಾತನಾಡಿ ಎಲ್ಲಿ ಹೆಣ್ಣು ಮಕ್ಕಳು ಪೂಜಿಸಲು ಪಡುತ್ತಾರೋ ಅಲ್ಲಿ ಸಾಕ್ಷಾತ ದೇವತೆಗಳು ವಾಸವಾಗಿರುತ್ತಾರೆ ಹಾಗಾಗಿ ನಮ್ಮ ನಾಡಿನ ಸಂಸ್ಕೃತಿಯನ್ನು ಬೆಳೆಸಲು ತಾಯಂದಿರ ಪಾತ್ರ ಬಹಳ ಇದೆ ಮತ್ತು 9 ದಿನಗಳಲ್ಲಿ ಕೇಳಿದಂತಾ ಈ ಒಳ್ಳೆಯ ವಿಚಾರಗಳನ್ನು ದಿನನಿತ್ಯ ರೂಡಿಯಲ್ಲಿ ಇರಬೇಕು ಎಂದು ಹೇಳಿದರು. ಕಪರಟ್ಟಿ ಕಳ್ಳಿಗುದ್ದಿಯ ಪೂಜ್ಯಶ್ರೀ ಬಸವರಾಜ ಸ್ವಾಮೀಜಿ ಮಾತನಾಡಿ ಗ್ರಾಮದ ಗುರು ಹಿರಿಯರು ಸಹಕಾರದಿಂದ ಹಳ್ಳೂರ ಗ್ರಾಮದಲ್ಲಿ 9 ದಿನಗಳ ದೇವಿ ಪುರಾಣ ವಿಶೇಷವಾಗಿ ನಡೆಯಿತು. ಆದಿಶಕ್ತಿ ಪರಾಕ್ರಮಿ ದೇವಿಯ ಹಲವಾರು ಅವತಾರಗಳು ನಾವು ನಿವು ನೋಡಿದೆವು ಎಂದು ಹೇಳಿದರು.

ಸಮಾರಂಭದಲ್ಲಿ   ಹಿರಿಯರಾದ ಬಸವಣೆಪ್ಪಾ ಡಬ್ಬಣ್ಣವರ, ಶಿವಪ್ಪ ನಿಡೋಣಿ, ಮಲ್ಲಿಕಾರ್ಜುನ ಸಂತಿ, ಬಾಳಗೌಡ ಪಾಟೀಲ, ಭೀಮಸಿ ಹೊಸಟ್ಟಿ, ಅಡಿವೆಪ್ಪ ಪಾಲಬಾವಿ, ಶಿವಲಿಂಗ ಗುರ್ಲಾಪುರ, ಶಿವನಗೌಡ ಪಾಟೀಲ, ಹಣಮಂತ ತೇರದಾಳ, ರವಿ ಪಾಟೀಲ, ಶಂಕರಯ್ಯ ಹಿರೇಮಠ, ದುಂಡಪ್ಪ ಮಹಾರಾಜರು, ಶ್ರೀಶೈಲ ಹಿರೇಮಠ, ಅಬ್ದುಲ್ ಮಿರ್ಜಾನಾಯಕ, ಶಿದಗಿರೆಪ್ಪ ಬಡಿಗೇರ, ಲಕ್ಷ್ಮಣ ಹೊಸಮನಿ, ಲಕ್ಷ್ಮಣ ಬಡಿಗೇರ ಸಿದ್ದು ಬಡಿಗೇರ ಮೂಡಲಗಿ ತಾಲೂಕ ಬಡಿಗೇರ ಅಧ್ಯಕ್ಷ ಶಿವು ಬಡಿಗೇರ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ವಿಜೇತ ಸಿದ್ದಣ್ಣ ದುರದುಂಡಿ ಸ್ವಾಗತಿಸಿ ನಿರೂಪಿಸಿದರು . ಪೂರ್ವದಲ್ಲಿ ಹಳ್ಳೂರ ಗ್ರಾಮದ ಪಿರಸಾಬ್ ದರ್ಗಾದಿಂದ ದೇವಸ್ಥಾನದಿಂದ ಸುಮಂಗಲೆಯರಿಂದ ಆರತಿ ಹಾಗೂ ಕುಂಭಮೇಳ ಸಕಲ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬಿದಿಗಳ ಮೂಲಕ ದೇವಿಯ ಭಾವಚಿತ್ರ ಭವ್ಯ ಮೆರವಣಿಗೆ ಕಾರ್ಯಕ್ರಮ ನಡೆಯಿತು. ನಂತರ ವೇದಿಕೆಯಲ್ಲಿ ದೇವಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲರನ್ನು ಸನ್ಮಾನಿಸಲಾಯಿತು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ