Breaking News
Home / ಬೆಳಗಾವಿ / ಆಕಸ್ಮಿಕ ಗುಂಡು ತಗುಲಿ ನೇವಿ ಸೈನಿಕ ಪ್ರವೀಣ್ ಖಾನಗೌಡ್ರ ನಿಧನ

ಆಕಸ್ಮಿಕ ಗುಂಡು ತಗುಲಿ ನೇವಿ ಸೈನಿಕ ಪ್ರವೀಣ್ ಖಾನಗೌಡ್ರ ನಿಧನ

Spread the love

ಆಕಸ್ಮಿಕ ಗುಂಡು ತಗುಲಿ ನೇವಿ ಸೈನಿಕ ಪ್ರವೀಣ್ ಖಾನಗೌಡ್ರ ನಿಧನ

ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ಯುವಕ ಚೆನೈನ ಭಾರತೀಯ ನೌಕಾ ಪಡೆಯಲ್ಲಿ ಬುಧವಾರದಂದು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಆಕಸ್ಮಿಕ ಗುಂಡು ತಗುಲಿ ವೀರ ಮರಣ ಹೊಂದಿದ್ದಾನೆ.
ವೀರ ಮರಣ ಹೊಂದಿದ ಕಲ್ಲೋಳಿ ಮಟ್ಟಣದ ಯುವಕ ಕುಮಾರ ಪ್ರವೀಣ್ ಸುಭಾಸ್ ಖಾನಗೌಡ್ರ (24) ಅವರು ಕಲ್ಲೋಳಿ ಪಟ್ಟಣದಲ್ಲಿ 2000 ನೇ ಇಸ್ವಿಯಲ್ಲಿ ಜನಿಸಿ ಪ್ರಾಥವಿ ಕುಮಾರ ಪ್ರವೀಣ್ ಸುಭಾಸ್ ಖಾನಗೌಡ್ರ ುಕ, ಪ್ರೌಢ ಶಿಕ್ಷಣವನ್ನು ಕಲ್ಲೋಳಿ ಮತ್ತು ಖನಗಾಂವ ಗ್ರಾಮದಲ್ಲಿ ಮುಗಿಸಿ, ಪಿಯುಸಿ,ಪದವಿ ಶಿಕ್ಷಣವನ್ನು ಗೋಕಾಕದಲ್ಲಿ ಮುಗಿಸಿದರು. ಫೆಬ್ರುವಾರಿ 2020 ರಲ್ಲಿ ಭಾರತೀಯ ನೌಕಾಪಡೆಗೆ ಆಯ್ಕೆಯಾಗಿ ಕರ್ತವ್ಯಕ್ಕೆ ಸೇರಿ ಕೇರಳದ ಕೊಚ್ಚಿಯಲ್ಲಿ 1 ವರ್ಷ ತರಬೇತಿ ಮುಗಿಸಿ ಅಂಡಮಾನ 3 ವರ್ಷ ಹಾಗೂ ಚೆನೈನಲ್ಲಿ 1 ವರ್ಷ ಒಟ್ಟು ಐದು ವರ್ಷ ಸೇವೆ ಸಲ್ಲಿಸಿದ್ದಾನೆ
ಅಗಲಿದ ವೀರಯೋಧ ಪ್ರವೀಣ ಅವರು ತಂದೆ, ತಾಯಿ, ಸಹೋದರ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ
ಶುಕ್ರವಾರ ಅಂತ್ಯಕ್ರಿಯೆ: ವೀರ ಮರಣ ಹೊಂದಿದ ಕುಮಾರ ಪ್ರವೀಣ್ ಸುಭಾಸ್ ಖಾನಗೌಡ್ರ ಅಂತ್ಯಕ್ರಿಯೇ ಕಲ್ಲೋಳಿ ಪಟ್ಟಣದ ಪಂಚಾಯತ ಆವರಣದ ಹತ್ತಿರ ಸಕಲ ಸರ್ಕಾರಿ ಗೌರವಗಳೊಂದಿಗೆ ಶುಕ್ರವಾರ ಬೆಳಿಗ್ಗೆ 11-00 ಅಂತ್ಯಕ್ರಿಯೆ ನಡೆಯಲಿದ್ದು. ಸಂಗನಕೇರಿ ಗ್ರಾಮದಿಂದ ಕಲ್ಲೋಳಿ ಪಟ್ಟಣದವರೆಗೆ ಯೋಧನ ಗೌರವ ನಮನ ಯಾತ್ರೆ ನಡೆಯಲಿದೆ.

ಗಣ್ಯರ ಸಂತಾಪ: ಅಗಲಿದ ವೀರ ಯೋಧ ಪ್ರವೀಣ ಖಾನಗೌಡ್ರ ನಿಧನಕ್ಕೆ ರಾಜ್ಯ ಸಭಾ ಸಂಸದ ಈರಣ್ಣ ಕಡಾಡಿ, ಜಿ.ಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಸಹಕಾರಿ ಧುರೀಣ ಬಿ.ಬಿ.ಬೆಳಕೂಡ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಬಾಲಚಂದ್ರ ಜಾರಕಿಹೊಳಿ ಸಂತಾಪ:

ಭಾರತೀಯ ನೌಕಾ ಪಡೆಯಲ್ಲಿ ಸೇವೆಸಲ್ಲಿಸುತ್ತಿ ಮೂಡಲಗಿ ತಾಲೂಕಿನ ಕಲ್ಲೋಳಿಯ ಸೈನಿಕ ಪ್ರವೀಣ ಖಾನಗೌಡ್ರ ಅವರ ಅಗಲಿಕ್ಕೆಯಿಂದ ಸುದ್ದಿ ತಿಳಿದು ದುಃಖವಾಯಿತು. ನಮ್ಮ ಹೆಮ್ಮೆಯ ವೀರ ಯೋಧ ದೇಶದ ರಕ್ಷಣೆಗಾಗಿ ಅವರು ಸಲ್ಲಿಸಿದ ಸೇವೆ ಎಂದೆಮದಿಗೂ ಅಮರ.

ವೀರ ಯೋಧನ ಆತ್ಮಕ್ಕೆ ಸದ್ಗತಿ ದೊರೆಯಲಿ ಅವರ ಕುಟಂಬಕ್ಕೆ ಭಗವಂತ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಬಾಲಚಂದ್ರ ಲ. ಜಾರಕಿಹೊಳಿ
ಶಾಸಕರು ಅರಭಾವಿ


Spread the love

About inmudalgi

Check Also

ಅರಳಮಟ್ಟಿಯಲ್ಲಿ ಭಜನಾ ಕಾರ್ಯಕ್ರಮ

Spread the loveಮೂಡಲಗಿ: ತಾಲೂಕಿನ ಅರಳಿಮಟ್ಟಿ ಗ್ರಾಮದ ಚಕ್ರವರ್ತಿ ಶ್ರೀ ಸದಾಶಿವ ಮುತ್ಯಾನ ಭಜನಾ ಕಾರ್ಯಕ್ರಮ ಹಾಗೂ ಸಮುದಾಯ ಭವನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ