ರಾಜ್ಯಸಭಾ ಸಂಸದರ ಅನುದಾನದಲ್ಲಿ
ಬಸ್ ತಂಗುದಾನ,ಬಯಲು ರಂಗ ಮಂದಿರ ಉದ್ಘಾಟನೆ
ಕೌಜಲಗಿ: ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ನಾಳೆ ಶನಿವಾರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನದಲ್ಲಿ ಗೋಕಾಕ ತಾಲೂಕಿನ ಕೌಜಲಗಿ, ರಡೇರಟ್ಟಿ, ಮನ್ನಿಕೇರಿ, ಮೆಳವಂಕಿ ಗ್ರಾಮಗಳಲ್ಲಿ ನಿರ್ಮಾಣವಾದ ಬಸ್ ತಂಗುದಾನ ಮತ್ತು ಬಯಲು ರಂಗ ಮಂದಿರದ ಕಟ್ಟಡ ಉದ್ಘಾಟನೆ ನೇರವೇರಿಸಲಿದ್ದಾರೆ.
ಮೆಳವಂಕಿ-ಬೆಳಿಗ್ಗೆ 11-00, ಕೌಜಲಗಿ-ಮಧ್ಯಾಹ್ನ 3-00,ರಡ್ಡೇರಟ್ಡಿ-ಸಂಜೆ 4-00,ಮನ್ನಿಕೇರಿ- 5-00 ಗಂಟೆಗೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.