ಪಟ್ಟಣದ ಗಂಗಾನಗರದ ಅಂಬೇಡ್ಕರ್ ಭವನದಲ್ಲಿ ಜರುಗಿದ, ಮಹಾನಾಯಕ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕುಂದಾನಗರಿ ಸೇವಾ ಸಂಘಟನೆಯ ಮಹಿಳಾ ಘಟಕಕ್ಕೆ ಆಯ್ಕೆಯಾದ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಿಸುವ ಕಾರ್ಯಕ್ರಮ ಜರುಗಿತು.
ಮೂಡಲಗಿ: ದಲಿತ ಸಮುದಾಯದ ಮಹಿಳೆಯರಿಗೆ ಆಗುವ ಕಷ್ಟಗಳಿಗೆ ತಕ್ಷಣ ಸ್ಪಂದಿಸುವುದು ಹಾಗೂ ಅದಕ್ಕೆ ಕಾನೂನಾತ್ಮಕ ಪರಿಹಾರ ಒದಗಿಸುವುದು ಸಂಘಟನೆಯ ಮುಖ್ಯ ಉದ್ದೇಶವಾಗಿದೆ. ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರನ್ನು ಒಳಗೊಂಡು ಬೇಡಿಕೆ ಈಡೇರಿಕೆಗೆ ಹೋರಾಟ ಮಾಡಲಾಗುವುದು ಎಂದು ಮಹಾನಾಯಕ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕುಂದಾನಗರಿ ಸೇವಾ ಸಂಘಟನೆಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಯಮನವ್ವ ತಳವಾರ ಹೇಳಿದರು.
ರವಿವಾರದಂದು ಪಟ್ಟಣದ ಗಂಗಾನಗರದ ಅಂಬೇಡ್ಕರ್ ಭವನದಲ್ಲಿ ಜರುಗಿದ, ಮಹಾನಾಯಕ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕುಂದಾನಗರಿ ಸೇವಾ ಸಂಘಟನೆಯ ಮಹಿಳಾ ಘಟಕಕ್ಕೆ ಆಯ್ಕೆಯಾದ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶೋಷಣೆಗೊಳಪಟ್ಟಿರುವ ಮಹಿಳೆಯರ ಪರವಾಗಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು. ಅಲ್ಲದೇ ಜಿಲ್ಲೆಯ ಪ್ರತಿಯೊಂದು ಹಳ್ಳಿಗಳಲ್ಲಿ ನಮ್ಮ ಸಂಘಟನೆಯನ್ನು ಕಟ್ಟುವಂತ ಕಾರ್ಯ ಮಾಡಲಾಗುವುದು. ಇದಕ್ಕಾಗಿ ರೂಪುರೇμÉ ಸಿದ್ಧಪಡಿಸಲಾಗುತ್ತಿದೆ. ಸಾಮಾಜಿಕ ಸೇವೆ ಮೂಲಕ ಸಂಘಟನೆಯು ದಲಿತ ಮಹಿಳೆರಿಗೆ ಮತ್ತಷ್ಟು ಹತ್ತಿರವಾಗಲಿದೆ ಎಂದು ಹೇಳಿದರು.
ದಲಿತ ಪ್ಯಾಂಥ್ರ್ಸ್ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಈರಪ್ಪ ಢವಳೇಶ್ವರ ಹಾಗೂ ಸಂಗೀತ ಪಾಟೀಲ ಮಾತನಾಡಿ, ಮಹಿಳೆಯರಿಗಾಗಿ ಸಂಘಟನೆಯು ಹೊಸ ಜವಾಬ್ದಾರಿ ನೀಡಿದ್ದು, ಅಂಬೇಡ್ಕರ್ ಅವರ ಮಾರ್ಗದರ್ಶನದಲ್ಲಿ ಸಂಘಟನೆಯನ್ನು ಮುನ್ನಡೆಸಲಾಗುವುದು. ಹೋರಾಟದ ಜೊತೆಗೆ ಸರ್ಕಾರದಿಂದ ಮಹಿಳೆಯರಿಗೆ ಸಿಗುವ ಯೋಜನೆಗಳನ್ನು ತಲುಪಿಸುವಂತ ಕಾರ್ಯ ಮಾಡಿದರೆ ಮಾತ್ರ ಸಂಘಟನೆಯ ಉದ್ದೇಶ ಈಡೇರುತ್ತದೆ. ಸಂಘಟನೆಯು ಅದಕ್ಕೆ ತಕ್ಕಂತೆ ನಡೆಸಲಿದೆ ಎಂದರು.
ಇದೇ ವೇಳೆ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆಯಾಗಿ ಜ್ಯೋತಿ ದೊಡಮನಿ, ಪ್ರಧಾನ ಕಾರ್ಯದರ್ಶಿಯಾಗಿ ಡೇಜಿ ಇಟ್ನಾಳ, ಜಿಲ್ಲಾಧ್ಯಕ್ಷಯಾಗಿ ಕವಿತಾ ಸಣ್ಣಕ್ಕಿ, ತಾಲೂಕಾಧ್ಯಕ್ಷೆ ಸುವರ್ಣ ಕಾಶವಗೋಳ, ಉಪಾಧ್ಯಕ್ಷರಾಗಿ ಆಶಾ ಸಣ್ಣಕ್ಕಿ, ಶೋಭಾ ಬಂಗೇನವರ ಅವರಿಗೆ ಆದೇಶ ಪತ್ರ ವಿತರಿಸುವ ಮೂಲಕ ಸತ್ಕರಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ ಕಂಗರಾಳ್ಕರ್, ರಾಜ್ಯ ಸಂಚಾಲಕ ಸುರೇಶ ರಿಜಕನ್ನವರ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಮುರಗೋಡ, ಕಾರ್ಯದರ್ಶಿ ಪ್ರವೀಣ ಕಾಂಬಳೆ, ಸದಸ್ಯರಾದ ಎ ವಾಯ್ ಬಮ್ಮನ್ನವರ, ರಮೇಶ ರಿಜಕನ್ನವರ, ವಿಜಯಲಕ್ಷ್ಮಿ ಪಾಟೀಲ, ಮಂಜುಳಾ ತಳವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.