ಮೂಡಲಗಿ : ಸಮೀಪದ ಕೌಜಲಗಿಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಿವಿಧ ಬೇಡಿಕೆಗಲಿಗಾಗಿ ನಡೆಯುತ್ತಿರುವ ಧರಣಿಗೆ ಬೆಂಬಲವಾಗಿ ಮೂರಾರ್ಜಿ ವಸತಿ ಶಾಲೆಯಲ್ಲಿ ಸಂವಿಧಾನಾತ್ಮಕ ಸತ್ಯಾಗ್ರಹ ಸರ್ವಸಿಬ್ಬಂದಿ ಬಳಗ ಕಪ್ಪು ಪಟ್ಟಿ ಕಟ್ಟಿಕೊಂಡು ಸಾಂಕೇತಿಕ ಧರಣಿ ಸತ್ಯಾಗ್ರಹ ಕೈಗೊಂಡರು,
ನಮ್ಮ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಾವಿರಾರು ನೌಕರರು ಸಣ್ಣ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಂವಿಧಾನತ್ಮಕ ಹೋರಾಟಕ್ಕೆ ಕರೆ ಕೊಟ್ಟು ಗಾಳಿ, ಮಳೆ, ಚಳಿಯನ್ನು ಲೆಕ್ಕಿಸಸದೆ ಸರ್ವರ ಒಳತಿಗಾಗಿ ಹೋರಾಟವನ್ನು ಮಾಡಿದ್ದಾರೆ. ತಮ್ಮ ಸಂಪೂರ್ಣ ಜೀವನವನ್ನೇ ಮೂಡುಪಾಗಿಟ್ಟ ನಮಗೆ ಕೆಲವು ಕನಿಷ್ಠ ಸರಕಾರಿ ಸೌಲಭ್ಯಗಳು ದೊರೆಯದೆ ಇರೋದು ನಮ್ಮ ದೌರಭಾಗ್ಯವೇ ಸರಿ. ಇಲ್ಲಿ ನಮಗೆ ಕೆ.ಜಿ.ಆಯ್.ಡಿ, ಡಿ.ಸಿ.ಆರ್.ಜಿ ಹಾಗೂ ಇ.ಜಿ.ಆಯ್.ಎಸ್ ಜ್ಯೋತಿ ಸಂಜೀವಿನಿ, ಕುಮಾರ ನಾಯಕ್ ವಿಶೇಷ ಭತ್ಯೆ, ಹೆಚ್ಚುವರಿ ಕೆಲಸಕ್ಕೆ 10% ಹೆಚ್ಚುವರಿ ವೇತನ, ನಿವೃತ್ತಿ ಉಪಧಾನ ಮೊದಲಾದ ಸೌಲಭ್ಯಗಳು ಇಲ್ಲದೇ ನಾವು ಒಂದು ರೀತಿಯಲ್ಲಿ ದಿನಗೂಲಿ ನೌಕರರಂತೆ ಬದುಕಬೇಕಾದ ಅನಿವಾರ್ಯತೆ ಬಂದೋದಗಿದೆ. ನಾವು ಸರಕಾರಿ ನೌಕರರು ಅಲ್ಲವೇ ಎಂಬ ಚಿಂತೆ ದಿನನಿತ್ಯ ನಮ್ಮ ಸ್ವಾಭಿಮಾನವನ್ನು ಕೇರಳಿಸುತ್ತಿದೆ. ನಾವು ಕೇಳಿರುವ ಕೆಲವೇ ಕೆಲವು ಬೇಡಿಕೆಗಳಾದ ನಿರ್ದೇಶನಾಲಯ, ಉಚಿತ ವಸತಿ ಗೃಹ ಸೌಲಭ್ಯ, 10% ವಿಶೇಷ ಭತ್ಯೆ,ಡಿ.ಸಿ.ಆರ್.ಜಿ. ಆರೋಗ್ಯ ಸೌಲಭ್ಯ, ಮರಣ ಮತ್ತು ನಿವೃತ್ತಿ ಉಪಾದಾನ ಈ ಸೌಲಭ್ಯಗಳನ್ನು ನೀಡಿ ನಮ್ಮನ್ನು ಗೌರವದಿಂದ ಬದುಕುವಂತೆ ಮಾಡಿ.ಎಂದು ಬೇಡಿಕೆಗಳ ಮನವಿಯನ್ನು ಸರ್ಕಾರದ ಮುಂದೆ ಪ್ರಸ್ತುತ ಪಡಿಸಿದ್ದಾರೆ,ಈ ಸಮಯದಲ್ಲಿ ಕೌಜಲಗಿಯ ವಸತಿ ಶಾಲೆಯ ಸರ್ವ ಸಿಬ್ಬಂದಿ ಇದ್ದರೂ.