Breaking News
Home / ಬೆಳಗಾವಿ / *ಓಂ ಸಂತಾ ಗೆ ಸಕಲ ಕಲಾ ವಲ್ಲಭ ಪ್ರಶಸ್ತಿ ಪ್ರಧಾನ*

*ಓಂ ಸಂತಾ ಗೆ ಸಕಲ ಕಲಾ ವಲ್ಲಭ ಪ್ರಶಸ್ತಿ ಪ್ರಧಾನ*

Spread the love

*ಓಂ ಸಂತಾ ಗೆ ಸಕಲ ಕಲಾ ವಲ್ಲಭ ಪ್ರಶಸ್ತಿ ಪ್ರಧಾನ*

ಮೂಡಲಗಿ : ಇತ್ತೀಚಿಗೆ ರಬಕವಿ-ಬನಹಟ್ಟಿ ತಾಲೂಕಿನ ಸೈದಾಪುರ ಗ್ರಾಮದ ಮಾದವಾನಂದ ಆಶ್ರಮದಲ್ಲಿ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಗಲಕೋಟ, ಮಹಾಕವಿ ರನ್ನ ಫೌಂಡೇಶನ್ ಮುಧೋಳ ಹಾಗೂ ವೀರ ರಾಣಿ ಕಿತ್ತೂರು ಚೆನ್ನಮ್ಮ ಸಾಂಸ್ಕೃತಿಕ ಕಲಾ ಸಂಘ ಇವುಗಳ ಆಶ್ರಯದಲ್ಲಿ ಜರುಗಿದ, ವಿವಿಧ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಮೂಡಲಗಿ ಪಟ್ಟಣದ ಕಲಾವಿದ ಓಂ ಸಂತಾ ಅವರಿಗೆ ಸಕಲ ಕಲಾ ವಲ್ಲಬ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈ ಸಂದರ್ಭದಲ್ಲಿ ರನ್ನ ಬೆಳಗಳಿಯ ಋಷಿ ಯೋಗಾಶ್ರಮದ ಸದಾಶಿವ ಗುರೂಜಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಣಜ ಡಾ. ಸಿದ್ದಪ್ಪ ಬಿದರಿ, ಸೈದಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾಲಿಂಗಪ್ಪ ಸಣದಿ, ಕನಾ೯ಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಶಶಿಕಾಂತ ಗೂರುಜಿ, ಕರ್ನಾಟಕ ರಾಜ್ಯ ಯುವ ಸಂಘದ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಸಿದ್ದಣ್ಣ ದುರದುಂಡಿ, ಮಹಾಕವಿ ಚಕ್ರವರ್ತಿ ರನ್ನ ಫೌಂಡೇಶನ್ ಅಧ್ಯಕ್ಷರು ಹಾಗೂ ಕಾರ್ಯಕ್ರಮದ ರೂವಾರಿ ಬಸವರಾಜ್ ಕೌಜಲಗಿ, ಯಮನಪ್ಪ ಉಪ್ಪಾರ, ಖುಷಿ ದವಳಿ, ಮಲಗೌಡ ಪಾಟೀಲ್, ಕಲಗೌಡ ಪಾಟೀಲ್ ಹಾಗೂ ಸಂಘಟಕರು ಮುಂತಾದವರು ಉಪಸ್ಥಿತರಿದ್ದರು.


Spread the love

About inmudalgi

Check Also

*ಜಿಲ್ಲಾ ಮಟ್ಟದ ಮಹಿಳಾ ಚುಟುಕುಗೋಷ್ಠಿ*

Spread the love*ಜಿಲ್ಲಾ ಮಟ್ಟದ ಮಹಿಳಾ ಚುಟುಕುಗೋಷ್ಠಿ* ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮೂಡಲಗಿಯಲ್ಲಿ ಚುಟುಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ