ಮೂಡಲಗಿ: ಪಟ್ಟಣದಲ್ಲಿ ನೂತನವಾಗಿ ಆಸ್ತಿತ್ವಕ್ಕೆ ಬಂದ ಮೂಡಲಗಿ ತಾಲೂಕಾ ದ್ವಿ-ಚಕ್ರ ವಾಹನಗಳ ದುರಸ್ತಿಗಾರರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನಾ ರವಿವಾರ ಫೇ.1 ರಂದು ಬೆಳಗ್ಗೆ 9 ಗಂಟೆಗೆ ಗುರ್ಲಾಪುರ ರಸ್ತೆಯ ಅತ್ತಾರ ಮಂಗಲ ಕಾರ್ಯಲಯದಲ್ಲಿ ಜರುಗಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಶ್ರೀ ದತ್ತಾತ್ರಯಬೋಧ ಸ್ವಾಮೀಜಿ, ಶ್ರೀ ಶ್ರೀಧರಬೋಧ ಸ್ವಾಮೀಜ ಮತ್ತು ಸಾನಿಧ್ಯವನ್ನು ಶ್ರೀ ಮೌಲಾನಾ ಕೌಸರ ರಜಾ ವಹಿಸುವರು ಶಾಸಕ ಹಾಗೂ ಬೆಮೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಗೋಕಾಕ ಆರ್.ಟಿ.ಒ ಸದಾಶಿವ ಆರ್. ಮರಲಿಂಗನ್ನವರ, ಕಾರ್ಮಿಕ ನಿರೀಕ್ಷಕ ಪಿ. ಐ. ಮಾವರಕರ, ಸಿಪಿ ಐ ಶ್ರೀಶೈಲ್ ಬ್ಯಾಕೂಡ, ತಹಸೀಲ್ದಾರ್ ಶ್ರೀಶೈಲ ದುಡುಮೆ, ಮುಖ್ಯಾಧಿಕಾರಿ ತುಕಾರಾಮ ಮಾದರ, ಬೆಂಗಳೂರು ಮೆಕ್ಯಾನಿಕ ಮಿತ್ರ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಆರ್. ನಾದೇಶ, ಹುಬ್ಬಳ್ಳಿಯ ಉತ್ತರ ಕರ್ನಾಟಕ ಮೆಕ್ಯಾನಿಕ ಸಂಘದ ಅಧ್ಯಕ್ಷ ಮಂಜುನಾಥ ಕೋಟೇಶ್ವರ, ಗೋಕಾಕ ದ್ವಿಚಕ್ರ ವಾಹನಗಳ ದುರಸ್ತಿದಾರದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪರಶುರಾಮ ಗೋಕಾಂವಿ ಭಾಗವಹಿಸುವರು
IN MUDALGI Latest Kannada News