ಫೆ. 10 ರಂದು ಶಂಕರ ಶಿವಾಚಾರ್ಯ ಶ್ರೀಗಳ ಜಾತ್ರೆ
ತೊಂಡಿಕಟ್ಟಿ: ಸಮೀಪದ ಹೊಸಕೋಟಿ ಗ್ರಾಮದಲ್ಲಿ
1008 ಶ್ರೀ ಸೂರ್ಯ ಸಿ೦ಹಾಸನಾಧೀಶ ಶ್ರೀಮದ್ ಜಗದ್ಗುರು ಅಂಗೈಕ್ಯ ಶ್ರೀ ಶ್ರೀ ಶ್ರೀ ಶಂಕರ ಶಿವಾಚಾರ್ಯ ಮಹಾಸ್ವಾಮೀಜಿಗಳವರ ದ್ವಿತೀಯ ವರ್ಷದ
ಜಾತ್ರಾ ಮಹೋತ್ಸವ ಫೆ. 10 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಮಂಗಳವಾರ ಮುಂಜಾನೆ 06-00 ಘಂಟೆಗೆ
ಶ್ರೀಮದ್ ಜಗದ್ಗುರು ಅಂಗೈಕ್ಯ ಶ್ರೀ ಶ್ರೀ ಶ್ರೀ ಶಂಕರ ಶಿವಾಚಾರ್ಯ
ದೇವರ ಮೂರ್ತಿಗೆ ರುದ್ರಾಭಿಷೇಕ 8-00 ಘಂಟೆಗೆ ಗ್ರಾಮಗಳ ಪ್ರಮುಖ ಬೀದಿಗಳಲ್ಲ ಪಲ್ಲಕ್ಕಿ ಮೆರವಣಿಗೆ, 10-00 ಘಂಟೆಗೆ ಜರುಗುವ ಪಾರಮಾರ್ಥಿಕ ಚಿಂತನಗೋಷ್ಠಿಯ ದಿವ್ಯ ಸಾನಿಧ್ಯವನ್ನು ಹಳೇ ಹುಬ್ಬಳ್ಳಿಯ ಶ್ರೀ ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು, ಹರಳಕಟ್ಟಿಯ ಸದ್ಗುರು ನಿಜಗುಣ ಮಹಾಸ್ವಾಮಿಗಳು ವಹಿಸುವರು.
ಅಧ್ಯಕ್ಷತೆಯನ್ನು. ಲಕ್ಷಾನಟ್ಟಿಯ ಶ್ರೀ ಗುರು ಶಿವಾನಂದ ಮಹಾಸ್ವಾಮಿಗಳು, ಗು-ಹೊಸಕೋಟಿ ಶ್ರೀ ಅಭಿನವ ರೇವಯ್ಯ ಮಹಾಸ್ವಾಮಿಗಳು, ಕುಳ್ಳೂರುದ ಶ್ರೀ ಬಸವಾನಂದ ಭಾರತಿ ಮಹಾಸ್ವಾಮಿಗಳು, ತೊಂಡಿಕ ಟ್ಟಿಯ ಶ್ರೀ ಅಭಿನವ ವೆಂಕಟೇಶ ಮಹಾರಾಜರು, ದಾದಾನಟ್ಟಿಯ ಶ್ರೀ ಗುರು ನಿಜಾನಂದ ಮಹಾಸ್ವಾಮಿಗಳು ಬುದ್ನಿಖುರ್ದದ ಶ್ರೀ ಗುರು ರವೀಂದ್ರ ಮಹಾಸ್ವಾಮಿಗಳು, ಗು-ಹೊಸಕೋಟಿಯ ಶ್ರೀ ಗುರು ಇಂದುಧರ ಮಹಾಸ್ವಾಮಿಗಳು, ಕಾಮಕೇರಿಯ ಮಾತೋಶ್ರೀ ಮಹಾದೇವಿ ತಾಯಿಯವರು ವಹಿಸುವರು, ಮಧ್ಯಾಹ್ನ ಅನ್ನಸಂತರ್ಪಣೆ ಜರುಗಲಿದೆ
IN MUDALGI Latest Kannada News