Breaking News
Home / Recent Posts / ‘ಆತ್ಮವಿಶ್ವಾಸ, ಧೈರ್ಯವಿದ್ದರೆ ಕೊರೊನಾದಿಂದ ಕಂಡಿತ ಜಯ’ – ಸಂಗಪ್ಪ ಸೂರಣ್ಣವರ

‘ಆತ್ಮವಿಶ್ವಾಸ, ಧೈರ್ಯವಿದ್ದರೆ ಕೊರೊನಾದಿಂದ ಕಂಡಿತ ಜಯ’ – ಸಂಗಪ್ಪ ಸೂರಣ್ಣವರ

Spread the love

ಮೂಡಲಗಿ ಸಮೀಪದ ಮುನ್ಯಾಳದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ‘ಮನೆ, ಮನೆಗೆ ಆಧ್ಯಾತ್ಮಿಕ ಪ್ರವಚನ’ ದ 14ನೇ ದಿನದ ಕಾರ್ಯಕ್ರಮದಲ್ಲಿ ಸಂಗಪ್ಪ ಸೂರಣ್ಣವರ ಮಾತನಾಡಿದರು

ಅಧಿಕ ಮಾಸದ 14ದಿನದ ಆಧ್ಯಾತ್ಮಿಕ ಪ್ರವಚನ
‘ಆತ್ಮವಿಶ್ವಾಸ, ಧೈರ್ಯವಿದ್ದರೆ ಕೊರೊನಾದಿಂದ ಕಂಡಿತ ಜಯ’

ಮೂಡಲಗಿ: ‘ಕೆಮ್ಮು, ನೆಗಡಿ ಜೊತೆಗೆ ಒಂದಿಷ್ಟು ಜ್ವರ ಬಂದಿದ್ದರಿಂದ ಕೂಡಲೇ ವೈದ್ಯಕೀಯ ಚಿಕಿತ್ಸೆ ಮಾಡಿಕೊಂಡಿದ್ದರಿಂದ ಕೊರೊನಾ ಸೋಂಕಿನ ತೀವ್ರತೆ ಮತ್ತು ಅಪಯಾದಿಂದ ತಪ್ಪಿಸಿಕೊಂಡಿರುವೆನು’ ಎಂದು ಕೊರೊನಾ ಸೋಂಕಿನಿಂದ ಪಾರಾಗಿ ಬಂದಿರುವ ಮುನ್ಯಾಳದ ಸಂಗಪ್ಪ ಸೂರಣ್ಣವರ ತಮ್ಮ ಅನುಭವನ್ನು ಹಂಚಿಕೊಂಡರು.
ತಾಲ್ಲೂಕಿನ ಮುನ್ಯಾಳ ಗ್ರಾಮದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ಹಮ್ಮಿಕೊಂಡಿರುವ ‘ಮನೆ, ಮನೆಗೆ ಅರುಹಿನ ಅರಮನೆ ಪ್ರವಚನ ಮತ್ತು ಕೋವಿಡ್ ಅರಿವು’ ಅಭಿಯಾನದ ಸಂಗಯ್ಯ ಹಿರೇಮಠ ಕುಟುಂಬದವರ ಆತಿಥ್ಯದಲ್ಲಿ ನಡೆದ 14ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಿರ್ಲಕ್ಷತೆಯಿಂದ ಅನಾಹುತ ಸಂಭವಿಸುತ್ತವೆ. ಜ್ವರ ಕಾಣಿಸಿಕೊಂಡರೆ ಕೂಡಲೇ ಚಿಕಿತ್ಸೆಗಾಗಿ ಜಾಗೃತರಾಗಬೇಕು ಎಂದು ಸಲಹೆ ನೀಡಿದರು.
ಕೊರೊನಾ ನೆಗೆಟಿವ್ ಬಂದ ನಂತರವೂ ಸಹ 15ದಿನ ಮನೆಯಲ್ಲಿ ಪ್ರತ್ಯೇಕ ಕ್ವಾರಂಟೈನ್ ಆಗಿ ಪೌಷ್ಠಿಕ ಆಹಾರ, ಬಿಸಿನೀರು, ದೇಸಿ ಕಷಾಯ ಸೇವಿಸಿರುವೆನು. ಇದರಿಂದ ಕುಟುಂಬದ ಸದಸ್ಯರು ಸಹ ಆರೋಗ್ಯದಿಂದ ಇದ್ದಾರೆ ಎಂದರು.
ಕೊರೊನಾ ಸೋಂಕು ಬಾರದಂತೆ ಎಚ್ಚರಿಕೆವಹಿಸಬೇಕು, ಆಕಸ್ಮಿಕವಾಗಿ ಸೋಂಕು ದೃಢಪಟ್ಟರೆ ಆತ್ಮವಿಶ್ವಾಸ ಮತ್ತು ಧೈರ್ಯ ಕಳೆದುಕೊಳ್ಳದಿದ್ದರೆ ಕೊರೊನಾದಿಂದ ಕಂಡಿತ ಜಯ ದೊರೆಯುತ್ತದೆ. ಇದು ನನ್ನ ಅನುಭವದ ಮಾತು ಎಂದು ಜನರಲ್ಲಿ ಧೈರ್ಯ ತುಂಬಿದರು.
ಪ್ರವಚನಕಾರ ಶರಣ ಲಕ್ಷ್ಮಣ ದೇವರು ಆಧ್ಯಾತ್ಮಿಕ ಪ್ರವಚನ ನೀಡಿದರು.
ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಸದಾಶಿವಯೋಗೀಶ್ವರ ಮಠದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ ಸ್ವಚ್ಛ ಪರಿಸರ ಮತ್ತು ಸ್ವಚ್ಛ ಮನಸ್ಸು ಇದ್ದರೆ ಯಾವ ಸೋಂಕು ಆವರಿಸುವುದಿಲ್ಲ ಎಂದರು.
ಅತಿಥಿ ಆನಂದರಾವ ನಾಯ್ಕ್, ಹಣಮಂತ ಗೋಡಿಗೌಡರ, ಎ.ಎಚ್. ವಂಟಗೋಡಿ ಮಾತನಾಡಿದರು.
ಪ್ರಾರಂಭದಲ್ಲಿ ಕಾರ್ತಿಕಶಾಸ್ತ್ರೀ, ವೀರಯ್ಯಶಾಸ್ತ್ರೀಗಳು ಮಂತ್ರಘೋಷ ಪಠಣ ಮಾಡಿದರು. ಐಶ್ವರ್ಯ ತಳವಾರ ಪ್ರಾರ್ಥಿಸಿದರು.
ಡಾ. ಕೆ.ಎಚ್. ನಾಗರಾಳ ಪ್ರಾಸ್ತಾವಿಕ ಮಾತನಾಡಿ ನಿರೂಪಿಸಿದರು, ಬಸಯ್ಯ ಹಿರೇಮಠ ವಂದಿಸಿದರು.


Spread the love

About inmudalgi

Check Also

ಮುಂದಿನ ದಿನಗಳಲ್ಲಿ ಕುರುಬ ಸಮಾಜದವರನ್ನು ಅಪೆಕ್ಸ್ ಬ್ಯಾಂಕಿನಿಂದ ನಾಮ ನಿರ್ದೇಶನ ಮಾಡಿಕೊಳ್ಳಲಾಗುತ್ತಿದೆ – ಬಾಲಚಂದ್ರ ಜಾರಕಿಹೊಳಿ

Spread the love ಬೆಳಗಾವಿ- ಹಾಲು ಮತ ಸಮಾಜಕ್ಕೆ ಕೊಟ್ಟ ಮಾತಿನಂತೆ ನಡೆಯುತ್ತೇವೆ. ಅಪೆಕ್ಸ್ ಬ್ಯಾಂಕಿನ ಆಡಳಿತ ಮಂಡಳಿಗೆ ಹಾಲುಮತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ