ಮೂಡಲಗಿ: ಕೋವಿಡ ಲಾಕಡೌನ ಸಂದರ್ಭವನ್ನು ಎಸ್.ಎಸ್.ಆರ್. ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ಸುಭಾಸ ಕುರಣಿ ದಿನಕೊಂದು ಮಹಾಮಾರಿ ಕೋರೊನ ರೋಗದ ಹಂತಗಳನ್ನು ಚಿತ್ರಗಳ ಮುಖಾಂತರ ರಚ್ಚಿದ್ದಾರೆ ಇಂತಹ ಸಂದಿಗ್ಧತೆಯಲ್ಲಿ ಅವರು ನಿತ್ಯ ಚಿತ್ರವೊಂದನ್ನು ಬಿಡಿಸಿ ಜನರಿಗೆ ಮನವರಿಕೆ ಮಾಡುತಿದ್ದಾರೆ ವ್ಯಾಟ್ಸಾಆಪ ಗ್ರುಫಗಳಲ್ಲಿ ಹಾಗು ಸಮಾಜಿಕ ಜಾಲತಾನದಲ್ಲಿ ಹಂಚಿಕೊಂಡು ಗಮನ ಸೆಳೆಯುತ್ತಿದ್ದಾರೆ.
ಬೆಟ್ಟ, ಗುಡ್ಡ, ನದಿ, ಕೆರೆ, ಪ್ರಾಣಿ, ಪಕ್ಷೀಸಂಕುಲ, ಗ್ರಾಮಿಣ ಪರಿಸರ ಈ ರೀತಿಯಾದ ಚಿತ್ರಗಳನ್ನು ಬಿಡಿಸುತ್ತ ಪಕೃತಿ ಉತ್ತಮವಾಗಿದ್ದರೆ ಜೀವ ಸಂಕುಲ ಉಳಿಯುತ್ತದೆ. ಪ್ರಕೃತಿಯ ವಿಕೋಪದಿಂದ ಕೋರೊನದಂತಹ ಸೊಂಕುಗಳು ಉದ್ಬವಿಸುತ್ತವೆ. ಪ್ರಕೃತಿಯನ್ನು ಆರಾಧಿಸಿರಿ ಎಂದು ತಮ್ಮ ಸಾಕಷ್ಟು ಚಿತ್ರಗಳಲ್ಲಿ ಚಿತ್ರಕಲೆ ಮುಖಾಂತರ ತೊರಿಸಿದ್ದಾರೆ.
ಸುಭಾಸ ಅವರು ನಿತ್ಯ ಚಿತ್ರಸುವ ಚಿತ್ರಗಳನ್ನು ನೋಡಿದಾಗ ಉತ್ಸಾಹ ಇಮ್ಮಡಿಯಾಗುತ್ತದೆ. ಕೋರೊನಾ ಭೀತಿ ಖಿನ್ನತೆಯಲ್ಲಿ ಪ್ರಕೃತಿಯ ಚಿತ್ರಗಳು ಮನಸಿಗೆ ಮೂದ ನೀಡುತ್ತವೆ ಎಂದು ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ವಾಯ್ ಅಡಿಹುಡಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಅವರು ಹೋದ ವರ್ಷದ ಲಾಕಡೌನ ವೇಳೆ ದಿನಕೊಂದು ಚಿತ್ರ ರಚಿಸಿದರು ಎಂದರು.
