Breaking News
Home / ಬೆಳಗಾವಿ / ರಡ್ಡಿ ಸಹಕಾರ ಬ್ಯಾಂಕ್ ಮೂಡಲಗಿ ಶಾಖೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭ

ರಡ್ಡಿ ಸಹಕಾರ ಬ್ಯಾಂಕ್ ಮೂಡಲಗಿ ಶಾಖೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭ

Spread the love


ಮೂಡಲಗಿ: ‘ರಡ್ಡಿ ಸಹಕಾರ ಬ್ಯಾಂಕು ರಾಜಕೀಯೇತರವಾಗಿ ಮತ್ತು ಒಗ್ಗಟ್ಟಿನಿಂದ ಬೆಳೆಸಿದ್ದರಿಂದ 114 ವರ್ಷಗಳ ಇತಿಹಾಸದಲ್ಲಿ ಎಲ್ಲಿಯೂ ಕಪ್ಪು ಚುಕ್ಕೆ ಹೊಂದಿರುವುದಿಲ್ಲ’ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರು ಮತ್ತು ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕ್‍ಗಳ ಮಹಾಮಂಡಳದ ಅಧ್ಯಕ್ಷರೂ ಆಗಿರುವ ಎಚ್.ಕೆ. ಪಾಟೀಲ ಅವರು ಹೇಳಿದರು.
ಅವರು ಪಟ್ಟಣದಲ್ಲಿ ಭಾನುವಾರ ಧಾರವಾಡ ರಡ್ಡಿ ಸಹಕಾರ ಬ್ಯಾಂಕ್ ಮೂಡಲಗಿ ಶಾಖೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮತ್ತು ಸಂಘಟಕರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ, ದೇಶದ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ನಿಂತಿರುವಂತ ಸಹಕಾರಿ ಬ್ಯಾಂಕು ಎನ್ನುವ ಹೆಗ್ಗಳಿಕೆ ರಡ್ಡಿ ಬ್ಯಾಂಕ್ ಹೊಂದಿದೆ ಎಂದರು.
ರಿಜರ್ವ ಬ್ಯಾಂಕ್‍ವು ಸಹಕಾರಿ ಬ್ಯಾಂಕ್‍ಗಳಿಗೆ ಅನುತ್ಪಾದಕ ಸಾಲಗಳ (ಎನ್‍ಪಿಎ)ಗಳನ್ನು ಪ್ರತಿ ಮೂರು ತಿಂಗಳಿಗೆ ತಿಳಿಸುವಂತದ್ದು ರೈತಾಪಿ ಗ್ರಾಹಕರನ್ನು ಹೊಂದಿರುವಂತೆ ಬ್ಯಾಂಕ್‍ಗಳಿಗೆ ಕಷ್ಟದ ಕೆಲಸವಾಗಿದೆ. ರಡ್ಡಿ ಬ್ಯಾಂಕ್‍ವು ಆರ್‍ಬಿಐ ನಿರ್ದೇಶನವನ್ನು ಪಾಲಿಸಿಕೊಂಡು ಬಂದಿದ್ದು ಸದ್ಯ ರಡ್ಡಿ ಬ್ಯಾಂಕ್‍ವು ಅನುತ್ಪುದಾಕ ಸಾಲವನ್ನು ಶೂನ್ಯ ಕಾಯ್ದುಕೊಂಡು ಬಂದಿದೆ. ಕರ್ನಾಟಕದಲ್ಲಿ ರಡ್ಡಿ ಬ್ಯಾಂಕ್‍ದಂತ ಹಲವಾರು ಪಟ್ಟಣ ಸಹಕಾರ ಬ್ಯಾಂಕ್‍ಗಳು ಆರ್‍ಬಿಐ ನಿರ್ದೇಶನವನ್ನು ಪಾಲಿಸಿಕೊಂಡು ಗಟ್ಟಿಯಾಗಿ ನೆಲೆ ನಿಂತು ದೇಶಕ್ಕೆ ಮಾದರಿಯಾಗಿವೆ ಎಂದರು.
ವೇಗದ ಆರ್ಥಿಕ ಪ್ರಗತಿಯೊಂದಿಗೆ ಹೆಜ್ಜೆ ಹಾಕುವ ಸಲುವಾಗಿ ರಡ್ಡಿ ಕೇಂದ್ರ ಕಚೇರಿಯು ಈಗಿರುವ 700 ಕೋಟಿ ಠೇವಣಿ ಬರುವ ಜನವರಿ ಹೊತ್ತಿಗೆ ಒಂದು ಸಾವಿರ ಕೋಟಿ ಮತ್ತು ಮೂಡಲಗಿ ಶಾಖೆಯು ಈಗಿರುವ 66 ಕೋಟಿಯಿಂದ ಒಂದು ನೂರು ಕೋಟಿ ದಾಟಬೇಕು. ಅದನ್ನು ಸಾಧಿಸುತ್ತಿರುವ ವಿಶ್ವಾಸ ನನಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ ಜನಸಾಮಾನ್ಯರ ಆರ್ಥಿಕ ಪ್ರಗತಿಗೆ ಮತ್ತು ದೇಶದ ಅರ್ಥಿಕ ಬೆಳವಣಿಗೆಯಲ್ಲಿ ಸಹಕಾರ ಕ್ಷೇತ್ರವು ಪ್ರಮುಖ ಪಾತ್ರವಹಿಸಿವೆ. ಸಹಕಾರ ಕ್ಷೇತ್ರ ಅಗಾಧ ಬೆಳವಣಿಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಸಹಕಾ ಕ್ಷೇತ್ರಕ್ಕೆ ಸಚಿವಾಲಯ ನಿರ್ಮಿಸಿದ್ದು ಎಂದರು.

ಸಾನ್ನಿಧ್ಯವಹಿಸಿದ್ದ ಎರೆಹೊಸಳ್ಳಿಯ ಮಹಾಯೋಗಿ ವೇಮನ ಸಂಸ್ಥಾನಮಠದ ವೇಮನಾನಂದ ಸ್ವಾಮೀಜಿ ಮತ್ತು ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿದರು.
ರಡ್ಡಿ ಬ್ಯಾಂಕ್ ಅಧ್ಯಕ್ಷ ಕೆ.ಎಲ್. ಪಾಟೀಲ ಪ್ರಾಸ್ತಾವಿಕ ಮಾತನಾಡಿ ಬ್ಯಾಂಕ್‍ನ ಪ್ರಗತಿ ಕುರಿತು ತಿಳಿಸಿದರು. ಸಲಹಾ ಸಮಿತಿ ಅಧ್ಯಕ್ಷ ಎಸ್.ಆರ್. ಫೆÇೀನವಾಲಕರ ಮೂಡಲಗಿ ರಡ್ಡಿ ಬ್ಯಾಂಕ್ ಪ್ರಗತಿ ಕುರಿತು ಮಾತನಾಡಿದರು.
`ಬಸವಪ್ರಭು ಸ್ವಾಮೀಜಿ, ಬ್ಯಾಂಕ್ ಉಪಾಧ್ಯಕ್ಷ ಎಸ್.ಎನ್. ನಾಡಗೌಡ ವೇದಿಕೆಯಲ್ಲಿದ್ದರು.

ಬ್ಯಾಂಕನ, ಮೂಡಲಗಿ ಶಾಖೆಯ ಸಲಹಾ ಸಮಿತಿ ಸದಸ್ಯರಾದ ಕೆ.ಬಿ. ಪಾಟೀಲ, ಬಿ.ಎಚ್. ರಡ್ಡಿ, ವೈ.ಪಿ. ಬಡಗಣ್ಣವರ, ಆ.ಆ. ಪ್ಯಾಟಿಗೌಡರ, ಸಂತೋಷ ಸೋನವಾಲಕರ, ವಿಜಯಕುಮಾರ ಸೋನವಾಲಕರ, ಎ.ವಿ. ಕುಲಗೋಡ, ಶಾಖಾ ವ್ಯವಸ್ಥಾಪಕ ಎಸ್.ವಿ. ಅಳವಂಡಿ ಪ್ರಧಾನ ಕಛೇರಿಯ ನಿರ್ದೆಶಕರು ಹಾಗೂ ವಿವಿಧ ಶಾಖೆಗಳ ಸಲಹಾ ಸಮಿತಿ ಸದಸ್ಯರು, ಸಿಬ್ಬಂದಿಯವರು ಇದ್ದರು.
ಪೆÇ್ರ. ಎ.ಪಿ. ರಡ್ಡಿ, ಸುರೇಶ ಲಂಕೆಪ್ಪನ್ನವರ ನಿರೂಪಿಸಿದರು, ಬ್ಯಾಂಕ್ ಕಾರ್ಯನಿರ್ವಾಹಣಾಧಿಕಾರಿ ಬಿ.ಎಂ. ಮುದರಡ್ಡಿ ವಂದಿಸಿದರು.

 


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ