ಮೂಡಲಗಿ : ರಾಮಾಯಣ ಗ್ರಂಥ ರಚನೆಯಲ್ಲಿ ಮಹರ್ಷಿ ವಾಲ್ಮೀಕಿ ಅಗ್ರಗಣ್ಯರಾಗಿದ್ದು ಒಬ್ಬ ದರೋಡೆಕೊರನಾಗಿದ್ದ ರತ್ನಾಕರ ಮಹರ್ಷಿ ವಾಲ್ಮೀಕಿಯಾಗಿ ನಾರದಮುನಿಗಳ ಸಂದೇಶದಂತೆ ಪರಿವರ್ತನೆಯಾಗಿ ಮಾನವ ಕುಲದಲ್ಲಿ ಶ್ರೇಷ್ಠತೆಯ ಮೌಲ್ಯಗಳನ್ನು ಹೊಂದಿರುವ ರಾಮನ ಜೀವನದ ಯಶೋಗಾಥೆಯನ್ನು ಪರಿಚಯಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ರಾಮನಾಮದಲ್ಲಿ ದೇವನಿದ್ದು ಸಾರ್ವಕಾಲಿಕ ಸಾಮಾಜಿಕ ಮೌಲ್ಯಗಳನ್ನು ರಾಮಾಯಣದ 24000 ಶ್ಲೋಕಗಳ ಮೂಲಕ ಪರಿಚಯಸುವಲ್ಲಿ ಮಹರ್ಷಿ ವಾಲ್ಮೀಕಿ ಮನುಕುಲದ ಮಹಾನ್ ವಿದ್ವಾಂಸರಾಗಿದ್ದಾರೆ ಎಂದು ಮೂಡಲಗಿಯ ಆರ್ಡಿಎಸ್ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಸಿದ್ದಾರೂಢ ಬೆಳವಿ ಹೇಳಿದರು.
ಪಟ್ಟಣದ ಆರ್.ಡಿ.ಎಸ್. ಕಲಾ,ವಾಣಿಜ್ಯ, ವಿಜ್ಞಾನ, ಸಮಾಜಕಾರ್ಯ ಪದವಿ ಮಹಾವಿದ್ಯಾಲಯ, ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯಗಳ ಎನ್.ಎಸ್.ಎಸ್. ಘಟಕಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಅತಿಥಿಗಳಾಗಿ ಮಾತನಾಡಿದರು.
ಉಪನ್ಯಾಸಕಿ ಪ್ರಸ್ಕೀಲಾ ಗಸ್ತಿ ಮಾತನಾಡಿ ಪಿತೃವಾಕ್ಯ ಪರಿಪಾಲಕನಾಗಿ ಸತ್ಯ ಮತ್ತು ಧರ್ಮದ ಮೂಲಕ ರಾಜ್ಯವನ್ನು ಆಳ್ವಿಕೆ ಮಾಡಿ ಮಾನವಕುಲದಲ್ಲಿ ಸರ್ವಶ್ರೇಷ್ಠತೆಯ ವಿಚಾರಗಳನ್ನು ಪ್ರತಿಪಾಧಿಸಿದ ರಾಮನ ಜೀವನದ ತಿರಳನ್ನು ಹೊಂದಿರುವ ರಾಮಾಯಣ ಎಂಬ ಗ್ರಂಥವನ್ನು ರಚಿಸಿ ಮಾನವಕುಲದ ಸೈದಾಂತಿಕ ವಿಚಾರಧಾರೆಗಳನ್ನು ಅರ್ಥೈಸಿಕೊಡುವಲ್ಲಿ ಮಹರ್ಷಿ ವಾಲ್ಮೀಕಿಯವರ ಜ್ಞಾನದ ಚಿಂತನೆಯನ್ನು ತಿಳಿಸಿಕೊಡುತ್ತದೆ ಎಂದರು.
ಪದವಿ ಕಾಲೇಜಿನ ಪ್ರಾಚಾರ್ಯ ಸತೀಶ ಗೋಟೂರೆ ಮಾತನಾಡುತ್ತಾ ಮಾನವನ ಜೀವನದಲ್ಲಿ ಯಾವುದು ಯೋಗ್ಯವಾದದ್ದು ಎಂದು ಮಹರ್ಷಿ ವಾಲ್ಮೀಕಿ ವಿಚಾರಧಾರೆಗಳಲ್ಲಿ ತಿಳಿದುಕೊಳ್ಳಬಹುದು ರಾಮಾಯಣ ಒಂದು ಗ್ರಂಥವಲ್ಲಾ ಅದು ಮನುಷ್ಯನಲ್ಲಿ ಇರುವ ಕಾಮ ಕ್ರೋಧ ಮದ ಮತ್ಸರಗಳನ್ನು ತ್ಯಜಿಸಿದಾಗ ಸನ್ಮಾರ್ಗಕ್ಕೆ ಓಯುವ ದಾರಿದೀಪವಾಗುವಂತೆ ಪರಿಚಯಸಿರುತ್ತಾರೆ ನಾವೆಲ್ಲರೂ ರಾಮನ ಜೀವನದ ಮಾರ್ಗಗಳನ್ನು ಅನುಸರಿಸಿ ರಾಮನಂತಹ ಜೀವನವನ್ನು ರೂಪಿಸಿಕೊಳ್ಳಲು ಪ್ರಯತ್ನಿಸೋಣ ಎಂದರು.
ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶಿವಾನಂದ ಸತ್ತಿಗೇರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡುತ್ತಾ ದರೋಡೆ ಮಾಡುವ ಸ್ವಭಾವ ಹೊಂದಿರುವ ಮೂಲ ವಾಲ್ಮೀಕಿ ನಂತರ ರಾಮಾಯಣ ಬರೆಯುವ ಜ್ಞಾನಾತ್ಮಕ ವ್ಯಕ್ತಿಯಾಗಿ ಪರಿವರ್ತನೆಯಾದ ಘಟನೆಗಳು ಇಂದಿಗೊ ನಮ್ಮ ಅರಿವೆಗೆ ಬರುತ್ತದೆ ನಾವುಗಳು ಕೆಟ್ಟ ಸ್ವಭಾವಗಳನ್ನು ಬಿಟ್ಟು ವಾಲ್ಮೀಕಿ ಮತ್ತು ರಾಮನ ಸದ್ಬಾವಣೆಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಗಮೇಶ ಕುಂಬಾರ, ಸಂತೋಷ ಲಟ್ಟಿ, ಸುಭಾಸ ಮಾಲೋಜಿ, ಗಂಗಾಧರ ಮನ್ನಾಪೂರ, ಎಸ್.ಬಿ.ಸಿದ್ನಾಳ, ಸಂಜೀವ ಮಂಟೂರ, ಮುತ್ತಣ್ಣ ಒಡೆಯರ, ಸುನೀಲ ಸತ್ತಿ, ರಾಜು ಪತ್ತಾರ, ಮತ್ತಿತರರು ಹಾಜರಿದ್ದರು.
ವೆಂಕಟೇಶ ಹೆಳವರ ನಿರೂಪಿಸಿದರು ಸವಿತಾ ಪಡದಲ್ಲಿ ಸ್ವಾಗತಿಸಿದರು. ರವಿ ಕಟಗೇರಿ ವಂದಿಸಿದರು.
