*ಪಾಪು ನಿಧನ ಶೃಧಾಂಜಲಿ ಭಾವಚಿತ್ರಕ್ಕೆ ಪುಷ್ಪ ನಮನ ಮೌನಾಚರಣೆ*
ನಾಡಿನ ಖ್ಯಾತ ಪತ್ರಕರ್ತ ಸಾಹಿತಿ ಮತ್ತು ಹೋರಾಟಗಾರ ಶತಾಯುಷಿ
ಪಾಟೀಲ್ ಪುಟಪ್ಪ ನಿಧನಕ್ಕೆ ಮೂಡಲಗಿ ಕಸಾಪ ಬಳಗದ ವತಿಯಿಂದ ಸಂತಾಪ ಸೂಚಿಸಿದರು. ಪಾಪು ನಿಧನ ಹಿನ್ನೆಲೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಒಂದು ನಿಮಿಷ ಮೌನಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಸಂಗಮೇಶ ಗುಜಗೊಂಡ ಮಾತನಾಡಿ ಕರ್ನಾಟಕ ಏಕೀಕರಣ ಮತ್ತು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದೆ ಕನ್ನಡದ ಹಿರಿಯ ಪತ್ರಕರ್ತ ಸಾಹಿತಿ ಹಾಗೂ ಪಾಟೀಲ್ ಪುಟ್ಟಪ್ಪ ನಿಧನದಿಂದ ಕನ್ನಡನಾಡು ಬಡವಾಗಿದೆ ಕನ್ನಡ ಭಾಷೆಗಾಗಿ ದುಡಿದ ಅವರ ಜೀವನವನ್ನು ಒಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಥದು ನಾಡಿನ ಜನರು ಅವರನ್ನು ಪಾಪು ಎಂದು ಕರೆಯುತ್ತಿದ್ದರು ಅವರಂಥ ಸಾಹಿತಿಗಳು ನಾಳೆಗೆ ಇನ್ನೂ ಹುಟ್ಟಿಬರಲಿ ಅವರ ನಿಧನದಿಂದ ಆಗಿರುವ ನೋವನ್ನು ಬರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ವರ್ಗದವರಿಗೆ ನೀಡಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿ ಪಿ ಬಂದಿ, ಶಿವರಡ್ಡಿ ಹುಚ್ಚರಡ್ಡಿ, ಸಚೀನ ಲಂಕೆನ್ನವರ , ಸಿದ್ದು ಮಹಾರಾಜ, ಸಾವಿತ್ರಿ ಕಮಲಾಪೂರ ಸುಭಾಸ ಕಡಾಡಿ, ಇನ್ನಿತರರು ಉಪಸ್ಥಿತರಿದ್ದರು.
ಮಹಾದೇವ ಜಿಡ್ಡಿಮನಿ, ಬಿ.ಪಿ. ಬಂದಿ ಯವರು ಮಾತನಾಡಿದರು.
ಹೂಗಾರ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.
ವರದಿ : ಈಶ್ವರ ಢವಳೇಶ್ವರ
ಮೂಡಲಗಿ