Breaking News
Home / ಬೆಳಗಾವಿ / ಸುಣಧೋಳಿ ಕಾಲೇಜುದಲ್ಲಿ ಸುಗ್ಗಿ ಹಬ್ಬದ ಸಂಭ್ರಮ

ಸುಣಧೋಳಿ ಕಾಲೇಜುದಲ್ಲಿ ಸುಗ್ಗಿ ಹಬ್ಬದ ಸಂಭ್ರಮ

Spread the love


ಮೂಡಲಗಿ ತಾಲ್ಲೂಕಿನ ಸುಣಧೋಳಿಯ ಜಡಿಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಸಂಕ್ರಮಣದ ಸುಗ್ಗಿ ಹಬ್ಬವನ್ನು ಶಿವಾನಂದ ಸ್ವಾಮಿಗಳು ಉದ್ಘಾಟಿಸಿದರು. ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಮತ್ತು ಸಿಬ್ಬಂದಿಯವರು ಚಿತ್ರದಲ್ಲಿರುವರು.

 ಮೂಡಲಗಿ: ‘ಹಳ್ಳಿಯ ಬದುಕಿನಲ್ಲಿ ವೈಶಿಷ್ಟ್ಯವಾಗಿರುವ ಬುತ್ತಿ ಊಟದಂತೆ ವಿದ್ಯಾರ್ಥಿಗಳು ಕಲಿಕಾ ಅವಧಿಯಲ್ಲಿ ಜ್ಞಾನದ ಬುತ್ತಿ ಕಟ್ಟಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.

ತಾಲ್ಲೂಕಿನ ಸುಣಧೋಳಿಯ ಜಡಿಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲಿ ಏರ್ಪಡಿಸಿದ್ದ ಸಂಕ್ರಮಣದ ಸುಗ್ಗಿ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾಡಿನ ಜಾನಪದ ಉಳಿದರೆ ನಾಡಿನ ಸಂಸ್ಕøತಿ ಉಳಿಯುತ್ತದೆ, ಜಾನಪದ ಕಲೆ, ಸಾಹಿತ್ಯ, ಆಚರಣೆ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವುದು ಇಂದಿನ ಅವಶ್ಯಕತೆ ಇದ್ದು, ಅದು ಯುವ ಪೀಳಿಗೆಯ ಮೇಲೆ ಜವಾಬ್ದಾರಿ ಇದೆ ಎಂದರು.
ಸಾನ್ನಿಧ್ಯವಹಿಸಿದ್ದ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಶಿವಾನಂದ ಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರಾಚಾರ್ಯ ಸುರೇಶ ಲಂಕೆಪ್ಪನ್ನವರ ಮಾತನಾಡಿ ವಿದ್ಯಾರ್ಥಿಗಳಲ್ಲಿ ಜಾನಪದ ಸಂಸ್ಕøತಿ ಮತ್ತು ನಾಡು, ನುಡಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾಲೇಜುದಲ್ಲಿ ಸುಗ್ಗಿ ಹಬ್ಬವನ್ನು ಆಚರಿಸುತ್ತಿರುವೆವು ಎಂದರು. ಗರತಿ ಹಾಡು, ಗಂಡ ಹೆಂಡಿರ ಜಗಳ ಗಂಧ ತೀಡಿದಂಗ ಜಾನಪದ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳಿಗೆ ಜಾನಪದ ಸಿಹಿ ಉಣಬಸಿದರು.
ಹಳ್ಳೂರ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ವೈ.ಬಿ. ಕಳ್ಳಿಗುದ್ದಿ ಮಾತನಾಡಿ ‘ಶ್ರೀಕೃಷ್ಣ ಪಾರಿಜಾತ, ಸಂಗ್ಯಾಬಾಳ್ಯಾ ಬಯಲಾಟಗಳು ಮನರಂಜನೆಯ ಜೊತೆಗೆ ಬದುಕಿಗೆ ಸಂದೇಶಗಳನ್ನು ನೀಡುತ್ತಿದ್ದವು. ಅಂಥ ಜಾನಪದ ಕಲೆಗಳನ್ನು ಬೆಳೆಸುವುದು ಅವಶ್ಯವಿದೆ’ ಎಂದರು.
ಉಪನ್ಯಾಸಕ ಎಸ್.ಡಿ. ವಾಲಿ ಮಾತನಾಡಿ ‘ಭಾರತೀಯ ಸಂಸ್ಕøತಿಯು ವಿಶ್ವದಲ್ಲಿಯೇ ಗಮನಸೆಳೆದಿದೆ. ಭಾರತೀಯರ ಕಲೆ, ಸಾಹಿತ್ಯ, ಆಚರಣೆಗಳಿಗೆ ಅನೇಕ ವಿದೇಶಿಗರು ಆಕರ್ಷಿತರಾಗಿದ್ದು, ನಮ್ಮ ಸಂಸ್ಕøತಿ ಪರಂಪರೆಯು ಸರ್ವಶ್ರೇಷ್ಠವಾಗಿದೆ’ ಎಂದರು.
ಉಪನ್ಯಾಸಕರಾದ ವಿ.ಪಿ. ಉದ್ದನ್ನವರ, ಎ.ಕೆ. ಬಡಿಗೇರ ವೇದಿಕೆಯಲ್ಲಿದ್ದರು.
ಕಾರ್ಯಕ್ರಮವನ್ನು ಸಂಯೋಜನೆ ಮಾಡಿದ್ದ ಎಚ್.ಎಂ. ಹತ್ತರಕಿ ನಿರೂಪಿಸಿದರು.
ಸುಗ್ಗಿ ಸಂಭ್ರಮ: ವಿದ್ಯಾರ್ಥಿನಿಯರೆಲ್ಲ ಇಲಕಲ್ ಸೀರೆ ತೊಟ್ಟು, ಮೈಮೇಲೆ ಬೊರಮಾಳ, ಬೆಂಡವಲಿ, ಝುಮಕಿ, ನಡಪಟ್ಟಿಯಂತ ಮರೆಯಾಗುತ್ತಿರುವ ಸಂಪ್ರದಾಯ ಆಭರಣಗಳಲ್ಲಿ ಗಮನಸೆಳೆದರು. ವೇದಿಕೆಯನ್ನು ಜೋಳದ ರಾಶಿಯೊಂದಿಗೆ ಹಳ್ಳಿ ಕಟ್ಟೆ ಮಾಡಿದ್ದರು. ಡೊಳ್ಳು ಕುಣಿತ, ಸುಗ್ಗಿ ಹಾಡುಗಳು ಮೆರಗು ನೀಡಿದವು. ವಿದ್ಯಾರ್ಥಿನಿ ರಾಧಿಕಾ ದೇವನಗಳ ಕೊರವಂಜಿ ವೇಷದಲ್ಲಿ ಅತಿಥಿಗಳ ಖಣಿ ಹೇಳುವ ಮೂಲಕ ಎಲ್ಲರ ಮೊಗದಲ್ಲಿ ನಗೆ ತೇಲಿಸಿದರು. ಮನೆಗಳಿಂದ ಕಟ್ಟಿಕೊಂಡು ಬಂದಿದ್ದ ವಿದ್ಯಾರ್ಥಿಗಳು ಬುತ್ತಿಯ ಗಂಟು ಬಿಚ್ಚಿ ಸಹಭೋಜನ ಮಾಡಿದರು. ಸಜ್ಜಿ ರೊಟ್ಟಿ, ಜುನಕದ ವಡೆ, ಬದನೆಕಾಯಿ, ವಿವಿಧ ಚಟ್ನಿ, ಬೆಳ್ಳುಳ್ಳಿ ಖಾರ, ಖಾರದ ವಡೆ, ಬಾನ, ಮಾದೆಲಿ, ಶೇಂಗಾ ಹೋಳಿಗೆ ವೈವಿದ್ಯಮಯವಾದ ಹಳ್ಳಿ ಖಾದ್ಯಗಳ ಘಮಲು ಕ್ಯಾಂಪಸ್‍ದಲ್ಲಿ ತುಂಬಿಕೊಂಡಿತ್ತು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ