Breaking News
Home / 2022 / ಮಾರ್ಚ್ (page 8)

Monthly Archives: ಮಾರ್ಚ್ 2022

ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ 71ನೇ ಅನ್ನದಾಸೋಹ, ಅನ್ನ ನೀಡುವುದು ಪುಣ್ಯದ ಕಾರ್ಯವಾಗಿದೆ

ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ 71ನೇ ಅನ್ನದಾಸೋಹ ಅನ್ನ ನೀಡುವುದು ಪುಣ್ಯದ ಕಾರ್ಯವಾಗಿದೆ ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಒಳ ಮತ್ತು ಹೊರ ರೋಗಿಗಳಿಗೆ 71ನೇ ಪಾಕ್ಷಿಕ ಅನ್ನದಾಸೋಹವನ್ನು ಏರ್ಪಡಿಸಿದ್ದರು. ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ ಅನ್ನದಾಸೋಹಕ್ಕೆ ಚಾಲನೆ ನೀಡಿ ಮಾತನಾಡಿ ‘ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕಾರ್ಯವಾಗಿದೆ. ಲಯನ್ಸ್ ಕ್ಲಬ್‍ವು ರೋಗಿಗಳಿಗೆ ಅನ್ನ ನೀಡುವ ಶ್ಲಾಘನೀಯ ಕೆಲಸ ಮಾಡುತ್ತಲಿದೆ’ ಎಂದು ಹೇಳಿದರು. …

Read More »

ಭಾಗ್ಯಶ್ರೀ ಮಹೇಶ ಪಟ್ಟಣಶೆಟ್ಟಿ ಕೌಜಲಗಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷೆಯಾಗಿ ಅವಿರೂಧ ಆಯ್ಕೆ

ಬೆಟಗೇರಿ:ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನ, ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಅವರ ನೇತೃತ್ವದ ಗುಂಪಿನ ಅಭ್ಯರ್ಥಿ ಭಾಗ್ಯಶ್ರೀ ಮಹೇಶ ಪಟ್ಟಣಶೆಟ್ಟಿ ಅವರು ಕೌಜಲಗಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷೆಯಾಗಿ ಅವಿರೂಧವಾಗಿ ಆಯ್ಕೆಯಾಗಿದ್ದಾರೆ. ಮಾ.3ರಂದು ಕೌಜಲಗಿ ಗ್ರಾಪಂ ಕಾರ್ಯಾಲಯದಲ್ಲಿ ಅಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಭಾಗ್ಯಶ್ರೀ ಮಹೇಶ ಪಟ್ಟಣಶೆಟ್ಟಿ ಅವರು ಗ್ರಾಪಂ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಗೋಕಾಕ ಜಿಆರ್‍ಬಿಸಿ ಉಪವಿಭಾಗ ನಂ-7ರ ಸಹಾಯಕ …

Read More »

ಮೇಳೆಪ್ಪ ಹಿರೇಮಠ ಅವರ ಸೇವಾ ನಿವೃತ್ತಿ ಸನ್ಮಾನ, ಬಿಳ್ಕೋಡುವ ಕಾರ್ಯಕ್ರಮ

ಬೆಟಗೇರಿ:ಕಂದಾಯ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಫೆ.28ರಂದು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಬೆಟಗೇರಿ ಗ್ರಾಮದ ತಾಲೂಕಾ ಶಿರಸ್ತದಾರ ಮೇಳೆಪ್ಪ ಹಿರೇಮಠ ಅವರ ಸೇವಾ ನಿವೃತ್ತಿ ಸನ್ಮಾನ, ಬಿಳ್ಕೋಡುವ ಕಾರ್ಯಕ್ರಮ ನಡೆಯಿತು. ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಗೋಕಾಕ ಕಂದಾಯ ಇಲಾಖೆ ವತಿಯಿಂದ ಸೇವಾ ನಿವೃತ್ತಿ ಹೊಂದಿದ ತಾಲೂಕಾ ಶಿರಸ್ತದಾರÀ ಮೇಳೆಪ್ಪ ಹಿರೇಮಠ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ನಿವೃತ್ತ ಶಿರಸ್ತದಾರ ಆರ್.ಎಂ.ನಕಾತಿ ಅವರು …

Read More »

ನಿವೃತ್ತ ಸೈನಿಕ ರವಿ ದೇಯಣ್ಣವರಗೆ ಹುಟ್ಟೂರಲ್ಲಿ ಅದ್ದೂರಿ ಸ್ವಾಗತ

ನಿವೃತ್ತ ಸೈನಿಕ ರವಿ ದೇಯಣ್ಣವರಗೆ ಹುಟ್ಟೂರಲ್ಲಿ ಅದ್ದೂರಿ ಸ್ವಾಗತ ಬೆಟಗೇರಿ:ನಿವೃತ್ತಿ ಹೊಂದಿದ ಯೋಧ ರವಿ ಈರಸಂಗಪ್ಪ ದೇಯಣ್ಣವರ ಮಾ.3ರಂದು ಹುಟ್ಟೂರು ಬೆಟಗೇರಿ ಗ್ರಾಮಕ್ಕೆ ಆಗಮಿಸಿದ ಪ್ರಯುಕ್ತ ಸ್ಥಳೀಯ ಹಾಲಿ ಮತ್ತು ಮಾಜಿ ಸೈನಿಕರ ಬಳಗ, ಗ್ರಾಮಸ್ಥರು ಮೆರವಣಿಗೆ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು. ಗ್ರಾಮದ ಅಶ್ವಾರೂಢ ಬಸವೇಶ್ವರ ವೃತ್ತದಿಂದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿರುವ ಭಾರತಾಂಬೆಯ ಮೂರ್ತಿ ತನಕ ಸಕಲ ವಾದ್ಯಮೇಳಗಳೊಂದಿಗೆ ನಿವೃತ್ತಿ ಹೊಂದಿದ ಯೋಧ ರವಿ ದೇಯಣ್ಣವರ ಭವ್ಯ ಸ್ವಾಗತ …

Read More »

ಬೆಟಗೇರಿ ಗ್ರಾಮದಲ್ಲಿ ಸಡಗರದಿಂದ ನಡೆದ ಶಿವನಾಮಸ್ಮರಣೆ ಕಾರ್ಯಕ್ರಮ

ಬೆಟಗೇರಿ ಗ್ರಾಮದಲ್ಲಿ ಸಡಗರದಿಂದ ನಡೆದ ಶಿವನಾಮಸ್ಮರಣೆ ಕಾರ್ಯಕ್ರಮ ಬೆಟಗೇರಿ:ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮಾ.1ರಂದು ಬೆಟಗೇರಿ ಗ್ರಾಮದ ವಿವಿಧ ದೇವಾಲಯಗಳಲ್ಲಿ ಹಾಗೂ ಮನೆಗಳಲ್ಲಿಯೂ ಶಿವನ ಆರಾಧನೆ, ಶಿವ ನಾಮಸ್ಮರಣೆ, ಶಿವ ಭಜನೆ, ಜಾಗರಣೆ, ಮಹಾಪ್ರಸಾದ ಕಾರ್ಯಕ್ರಮಗಳು ಜರುಗಿದವು. ಸ್ಥಳೀಯ ಈಶ್ವರ ಭಜನಾ ಮಂಡಳಿಯವರ ಸಹಯೋಗದಲ್ಲಿ ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿ ಗದ್ಗುಗೆಗೆ ಅಭಿಷೇಕ, ಮಹಾಪೂಜೆ, ನೈವೇಧ್ಯ ಸಮರ್ಪನೆ, ಶಿವ ಭಜನೆ, ಜಾಗರಣೆ, ಈಶ್ವರಲಿಂಗಕ್ಕೆ ಅಲಂಕಾರ ಮಾಡುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಡಗರದಿಂದ …

Read More »

ದಿ: 3 ರಂದು ವಿದ್ಯುತ್ ವ್ಯತ್ಯಯ

ದಿ: 3 ರಂದು ವಿದ್ಯುತ್ ವ್ಯತ್ಯಯ ಮೂಡಲಗಿ: 110 ಕೆವಿ ಮೂಡಲಗಿ ಹಾಗೂ ಕುಲಗೋಡದಲ್ಲಿ ವಿದ್ಯುತ್ ವಿತರಣಾ ಕಾಮಗಾರಿ ಕಾರ್ಯ ಹಾಗೂ ಎರಡೂ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ 4ನೇ ತ್ರೈಮಾಸಿಕ ನಿರ್ವಹಣೆ ಕಾರ್ಯ ಕೈಗೊಂಡಿರುವುದರಿಂದ ಮೂಡಲಗಿ, ಕುಲಗೋಡ ಹಾಗೂ 33ಕೆವಿ ತಿಗಡಿ, ಅರಳಿಮಟ್ಟಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲ 11 ಕೆವಿ ಮಾರ್ಗಗಳಲ್ಲಿ ಮಾರ್ಚ 3ರಂದು ಬೆ. 9 ರಿಂದ ಸಾಯಂಕಾಲ 3 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ …

Read More »

ಶ್ರೀನಿವಾಸ ಸಿಬಿಎಸ್‍ಇ ಶಾಲೆಯಲ್ಲಿ  ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನ ಉಪಕರಣ ಮತ್ತು ವಸ್ತು ಪ್ರದರ್ಶನ

  ಮೂಡಲಗಿ: ಫೆ.28 ಅನ್ನೋದು ರಾಮನ್ ಎಫೆಕ್ಟ್ ಪ್ರಕಟವಾದ ದಿನ. ಬೆಳಕಿನ ಪ್ರತಿಫಲನದ ಕುರಿತು ಬೆಂಗಳೂರಿನ ಪ್ರೊ.ಸಿ.ವಿ. ರಾಮನ್ ನಡೆಸಿದ ಆ ಸಂಶೋಧನೆಗೆ ರಾಮನ್ ಎಫೆಕ್ಟ್ ಎಂತಲೇ ಜಾಗತಿಕ ಖ್ಯಾತಿ ಬಂದಿದೆ ಅಷ್ಟೇ ಅಲ್ಲ, ದೇಶದ ಪ್ರಗತಿಯಲ್ಲಿ ವಿಜ್ಞಾನದ ಪಾತ್ರ ಮಹತ್ವದಾಗಿದ್ದು, ವಿಜ್ಞಾನದ ಮೊದಲ ನೊಬೆಲ್ ಪ್ರಶಸ್ತಿಯನ್ನೂ ತಂದು ಕೊಟ್ಟ ಸರ್ ಸಿ.ವಿ.ರಾಮನ್ ಅವರ ಸ್ಮರಣೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗಿತ್ತಿದೆ ಎಂದು ಮೂಡಲಗಿ ಶ್ರೀನಿವಾಸ ಶಾಲೆಯ ಪ್ರಾಚಾರ್ಯ ಮನೋಜ …

Read More »

ಒಳ್ಳೆಯ ಶಿಕ್ಷಣ ಪಡೆದು ತಮ್ಮ ಜೀವನ ರೂಪಿಸಿಕೊಂಡು ಸಮಾಜದ ಆಸ್ತಿಯಾಗಿ- ಶ್ರೀ ತ್ರಿವಿಕ್ರಮತೀರ್ಥ ಶ್ರೀಪಾದಂಗಳ

  ಮೂಡಲಗಿ: ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡುವುದು ಬಹಳ ಮುಖ್ಯ ಪಾತ್ರ, ಒಳ್ಳೆಯ ಶಿಕ್ಷಣ ಪಡೆದು ತಮ್ಮ ಜೀವನ ರೂಪಿಸಿಕೊಂಡು ಸಮಾಜದ ಆಸ್ತಿಯಾಗಿ ತಂದೆ ತಾಯಿಯ ಪ್ರೀತಿಗೆ ಪಾತ್ರರಾಗಬೇಕೆಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಶ್ರೀ ತ್ರಿವಿಕ್ರಮತೀರ್ಥ ಶ್ರೀಪಾದಂಗಳ ಹೇಳಿದರು. ತಾಲೂಕಿನ ನಾಗನೂನ ಪಟ್ಟಣದ ಪ್ರಣಮ್ಯ ಏಜ್ಯುಕೇಶನ್ ಪೌಂಡೇಶನದ ಅಥರ್ವ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಆವರಣದಲ್ಲಿ ಜರುಗಿದ, ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ …

Read More »

ಬೆಟಗೇರಿ ನಿವೃತ್ತ ಸೈನಿಕ ರವಿ ದೇಯಣ್ಣವರ ಸ್ವಾಗತ ಮೆರವಣಿಗೆ ಕಾರ್ಯಕ್ರಮ

ಬೆಟಗೇರಿ ನಿವೃತ್ತ ಸೈನಿಕ ರವಿ ದೇಯಣ್ಣವರ ಸ್ವಾಗತ ಮೆರವಣಿಗೆ ಕಾರ್ಯಕ್ರಮ ಬೆಟಗೇರಿ:ದೇಶ ರಕ್ಷಣೆಯ ಸೈನಿಕ ಸೇವೆಯಿಂದ ನಿವೃತ್ತಿ ಹೊಂದಿ ಹುಟ್ಟೂರು ಬೆಟಗೇರಿ ಗ್ರಾಮಕ್ಕೆ ಆಗಮಿಸುತ್ತಿರುವ ನಿವೃತ್ತ ಯೋಧ ರವಿ ಈರಸಂಗಪ್ಪ ದೇಯಣ್ಣವರ ಅವರಿಗೆ ಸ್ಥಳೀಯ ಹಾಲಿ ಮತ್ತು ಮಾಜಿ ಸೈನಿಕರ ಬಳಗ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಭವ್ಯ ಸ್ವಾಗತ ಮೆರವಣಿಗೆ, ಸನ್ಮಾನ ಕಾರ್ಯಕ್ರಮ ಮಾ.3ರಂದು ಮುಂಜಾನೆ 9 ಗಂಟೆಗೆ ನಡೆಯಲಿದೆ. ಇಲ್ಲಿಯ ಅಶ್ವಾರೂಢ ಶ್ರೀ ಬಸವೇಶ್ವರ ವೃತ್ತದಿಂದ ವಿವಿಡಿ ಸರ್ಕಾರಿ …

Read More »

ಮೂಡಲಯಲ್ಲಿ ದಲಿತ ವಚನಕಾರರ ಜಯಂತಿ ಆಚರಣೆ ದಲಿತ ವಚನಕಾರ ಕುರಿತು ಚಿಂತನ, ಮಂಥನಗಳು ನಡೆಯಬೇಕು

  ಮೂಡಲಯಲ್ಲಿ ದಲಿತ ವಚನಕಾರರ ಜಯಂತಿ ಆಚರಣೆ ದಲಿತ ವಚನಕಾರ ಕುರಿತು ಚಿಂತನ, ಮಂಥನಗಳು ನಡೆಯಬೇಕು ಮೂಡಲಗಿ: ‘ದಲಿತ ವಚನಕಾರರ ಸಾಧನೆ, ಸಂದೇಶಗಳ ಬಗ್ಗೆ ಯುವ ಪೀಳಿಗೆಗೆ ಗೊತ್ತಾಗುವ ರೀತಿಯಲ್ಲಿ ನಿರಂತರವಾಗಿ ಚಿಂತನ, ಮಂಥನಗಳು ನಡೆಯಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು. ಇಲ್ಲಿಯ ತಹಶೀಲ್ದಾರ್ ಕಚೇರಿಯ ಸಭಾಭವನದಲ್ಲಿ ಮಂಗಳವಾರ ದಲಿತ ವಚನಕಾರರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು 12ನೇ ಶತಮಾನದ ಶರಣರಲ್ಲಿ ದಲಿತ ವಚನಕಾರರು ಮುಖ್ಯವಾಗಿ …

Read More »