Breaking News

Daily Archives: ಸೆಪ್ಟೆಂಬರ್ 22, 2025

ಸೆ.26 ರಂದು ಚೈತನ್ಯ ಐಟಿಐ ಕೇಂದ್ರ ಉದ್ಯೋಗ ಮೇಳ

ಮೂಡಲಗಿ: ಪಟ್ಟಣದ ಚೈತನ್ಯ ಸೋಶಿಯಲ್ ವೆಲ್ಪೇರ ಸೊಸಾಯಿಟಿಚೈತನ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ(ಐಟಿಐ) ಸಭಾ ಭವನದಲ್ಲಿ ನಿರುದ್ಯೋಗಿ ಯುವ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಅವಕಾಶಗಳನ್ನು ನೀಡುವ ಸಲುವಾಗಿ ನೇಮಕಾತಿಗಳನ್ನು ಮಾಡಿಕೊಳ್ಳಲು ಚೈತನ್ಯ ಐಟಿಐ ಮೂಡಲಗಿ ಹಾಗೂ 10 ಕ್ಕಿಂತ ಹೆಚ್ಚಿನ ನ್ಯಾಶನಲ್, ಮಲ್ಟಿ ನ್ಯಾಶನಲ್ ಕಂಪನಿಗಳ ಸಹಯೋಗದಲ್ಲಿ ಶುಕ್ರವಾರ ಸೆ. 26 ರಂದು ಬೆಳಿಗ್ಗೆ 9:00 ರಿಂದ ಸಾಯಂಕಾಲ 5.00 ಗಂಟೆಯವರೆಗೆ ಉದ್ಯೋಗ ಮೇಳ(ಕ್ಯಾಂಪಸ್ ಇಂಟವ್ರ್ಹಿವ್) ಆಯೋಜಿಸಲಾಗಿದೆ ಎಂದು ಚೈತನ್ಯ ಐಟಿಐ …

Read More »

ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿಗೆ 2.62 ಕೋಟಿ ರೂ ಲಾಭ-ತಡಸನವರ

ಮೂಡಲಗಿ: ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು 19 ಶಾಖೆಗಳನ್ನು ಹೊಂದಿ ಸಾಮಾಜಿಕ, ಶೈಕ್ಷಣಿ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆಸಲ್ಲಿಸಿ ಕಳೆದ ಆರ್ಥಿಕ ವರ್ಷದ ಅಂತ್ಯಕ್ಕೆ 2.62 ಕೋಟಿ ರೂ ಲಾಭಗಳಿಸಿ ಶೇರುದಾರರಿಗೆ ಶೇ.25 ರಷ್ಟು ಲಾಭಾಂಶ ವಿತರಿಸಿ ಪ್ರಗತಿಯತ್ತ ಸಾಗಿದೆ ಎಂದು ಸಂಘದ ಅಧ್ಯಕ್ಷ ಬಸವರಾಜ ಗೌಡಪ್ಪ ತಡಸನವರ ಹೇಳಿದರು. ತಾಲೂಕಿನ ನಾಗನೂರ ಪಟ್ಟಣದ ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 2024-25ನೇ ಸಾಲಿನ 31ನೇ ವಾರ್ಷಿಕ …

Read More »

ಪ್ರಸನ್ನಕುಮಾರ ಶಾಸ್ತ್ರೀಮಠ ಅವರಿಗೆ ಡಾಕ್ಟರೇಟ್ ಪದವಿ

ಮೂಡಲಗಿ: ಮೂಡಲಗಿಯ ಪ್ರಸನ್ನಕುಮಾರ ಆರ್. ಶಾಸ್ತ್ರೀಮಠ ಇವರು ಕಲಬುರ್ಗಿ ವಿಶ್ವವಿದ್ಯಾಲಯದಲ್ಲಿ ಪ್ರಾಣಿಶಾಸ್ತ್ರ ವಿಷಯದಲ್ಲಿ ಮಂಡಿಸಿದ್ದ ಪ್ರಬಂಧವನ್ನು ಮನ್ನಿಸಿ ವಿಶ್ವವಿದ್ಯಾಲಯವು ಪಿ.ಎಚ್‍ಡಿ ಪದವಿಯನ್ನು ಪ್ರಕಟ ಮಾಡಿದೆ. ಕಲಬುರ್ಗಿ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೆ. ವಿಜಕುಮಾರ ಅವರ ಮಾರ್ಗದರ್ಶನದಲ್ಲಿ ‘ಡೈವರ್‍ಸಿಟಿ ಆಪ್ ಬಟರ್‍ಪ್ಲಾಯಿಸ್ ಆಪ್ ಚಿಂಚೋಳಿ ವೈಡ್‍ಲೈಫ್ ಸ್ಯಾಂಕ್ಚೂಅರಿ’ ವಿಷಯದಲ್ಲಿ ಮಂಡಿಸಿದ್ದ ಪ್ರಬಂಧವು ‘ಎ’ ಶ್ರೇಣಿಯಲ್ಲಿ ಮಾನ್ಯಗೊಂಡಿದೆ ಎಂದು ವಿಶ್ವವಿದ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಡಾ. ಪ್ರಸನ್ನಕುಮಾರ ಅವರು ನಾಗನೂರದ …

Read More »