Breaking News
Home / ಬೆಳಗಾವಿ / ಒಳ್ಳೆಯದು ಕೆಟ್ಟದ್ದನ್ನು ಮನಸ್ಸಿನ ನಿರ್ಧಾರವಾಗಿದೆ-ಹುಲೆಪ್ಪನವರಮಠ

ಒಳ್ಳೆಯದು ಕೆಟ್ಟದ್ದನ್ನು ಮನಸ್ಸಿನ ನಿರ್ಧಾರವಾಗಿದೆ-ಹುಲೆಪ್ಪನವರಮಠ

Spread the love

ಒಳ್ಳೆಯದು ಕೆಟ್ಟದ್ದನ್ನು ಮನಸ್ಸಿನ ನಿರ್ಧಾರವಾಗಿದೆ-ಹುಲೆಪ್ಪನವರಮಠ

ಮೂಡಲಗಿ: ‘ಮನುಷ್ಯನ ಇಂದ್ರಿಯಗಳಿಗೂ ಮತ್ತು ಮನಸ್ಸಿಗೆ ನೇರ ಸಂಬಂಧವಿದ್ದು, ಒಳ್ಳೆಯದು ಮತ್ತುಕೆಟ್ಟದ್ದನ್ನು ಮಾಡವುದು ಮನಸ್ಸಿನ ನಿರ್ಧಾರವಾಗಿದೆ’ ಎಂದುಬೆಳಗಾವಿಯ ಸಾಹಿತಿಡಾ. ಗುರುದೇವಿ ಹುಲೆಪ್ಪನವರಮಠ ಹೇಳಿದರು.
ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಪುಣ್ಯಾರಣ್ಯ ಮಠದಲ್ಲಿಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ‘ಶರಣರದೃಷ್ಟಿಯಲ್ಲಿ ಮನಸ್ಸು’ ವಿಷಯ ಕುರಿತು ಮಾತನಾಡಿದ ಅವರು ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಆದರ್ಶ ವ್ಯಕ್ತಿಯಾಗಿ ಸಮಾಜಕ್ಕೆ ಭೂಷಣರಾಗಬೇಕು ಎಂದರು.
ಸಾನ್ನಿಧ್ಯವಹಿಸಿದ್ದ ಅರಭಾವಿಯ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮಿಗಳು ಮಾತನಾಡಿ ನಾಡಿನಲ್ಲಿ ಅನೇಕ ಶರಣರು ತಮ್ಮ ಮನಸ್ಸನ್ನು ನಿಯಂತ್ರಿಸಿ ಸಮಾಜವನ್ನು ಬೆಳಗುವ ಕಾರ್ಯ ಮಾಡಿದರು. ಮನ್ಸಿನ ನಿಯಂತ್ರಣದಿಂದ ಅವರೆಲ್ಲ ಸಂತರು, ಮಹಾತ್ಮರಾದರು ಎಂದರು.
ಮುಖ್ಯ ಅತಿಥಿಯಾಗಿ ಅರಭಾವಿಯ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ವಿನಾಯಕ ಬಬಲೇಶ್ವರ, ನಿವೃತ್ತ ಕಂದಾಯ ನಿರೀಕ್ಷಕ ದುಂಡಪ್ಪಾ ಸತ್ತಿಗೇರಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿದರು.
ಅಪ್ಪಾಸಾಹೇಬ ಕುರುಬರ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಿತು. ಸತ್ತಿಗೇರಿ ತೋಟದ ಭಕ್ತರು ಅನ್ನ ಪ್ರಸಾದ ಸೇವೆಯನ್ನು ಸಲ್ಲಿಸಿದರು. ಪ್ರೊ.ವಿ.ಕೆ.ನಾಯಿಕ ಕಾರ್ಯಕ್ರಮ ನಿರೂಪಿಸಿದರು.


Spread the love

About inmudalgi

Check Also

ಹಾಡುಗಬ್ದ ಧ್ವನಿ ಸುರುಳಿಯ ಮಹಾರಾಜ ಸಿದ್ದು ಹಳ್ಳೂರ

Spread the loveಹಾಡುಗಬ್ದ ಧ್ವನಿ ಸುರುಳಿಯ ಮಹಾರಾಜ ಸಿದ್ದು ಹಳ್ಳೂರ ‘ಸಿದ್ಧರೆಲ್ಲರೂ ಪ್ರಸಿದ್ಧರಾಗಿರುವುದಿಲ್ಲ! ಪ್ರಸಿದ್ಧರೆಲ್ಲರಿಗೂ ಸಿದ್ಧಿ ಇರುವುದಿಲ್ಲ. ಲೋಕವಿಚಿತ್ರ ಪ್ರಪಂಚದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ