ಇಂದು ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮಕ್ಕೆ ಕೊರೋನಾ ಪ್ರವೇಶ, ಮೊದಲ ಬಲಿ ಪಡೆದ ಮಹಾಮಾರಿ.
ಮೂಡಲಗಿ : ಇಂದು ಹಳ್ಳೂರ ಗ್ರಾಮದ ಗಾಂಧಿನಗರ ತೋಟದ 33 ವಯಸ್ಸಿನ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಆದರೆ ಆ ವ್ಯಕ್ತಿ ನಿನ್ನೆ ತಾನೆ ಮೃತಪಟ್ಟಿದ್ದಾನೆ, ಹಾಗೆ ನೀನೆ ತಾನೇ ಆ ವ್ಯಕ್ತಿಯ ಅಂತ್ಯಸಂಸ್ಕಾರವು ಕೂಡಾ ನಡೆದು ಹೋಗಿದೆ.
ಕೆಲವು ದಿನಗಳ ಅನಾರೋಗ್ಯ ಹಿನ್ನೆಲೆ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು, ಮೊದಲ ನೆಗೆಟಿವ್ ವರದಿ ಬಂದ ಹಿನ್ನೆಲೆ ಆ ವ್ಯಕ್ತಿಯ ಮತ್ತೊಮ್ಮೆ ಗಂಟಲು ಧ್ರುವ ಪರೀಕ್ಷೆ ತೆಗೆದುಕೊಂಡು. ವರದಿ ಬರುವವರೆಗೂ ಹೋಂ ಕ್ವಾರೆಂಟೈನ್ ಇರಬೇಕು ಎಂಬ ಮೆಸೇಜ್ ಸಹ ಅವರಿಗೆ ಬಂದಿದೆ.
ಆದರೆ ಇಂದು ಬೆಳಗ್ಗೆ ತಾಲೂಕಾ ಆರೋಗ್ಯ ಇಲಾಖೆಯ ಬಲ್ಲ ಮೂಲಗಳ ಪ್ರಕಾರ ಆ ವ್ಯಕ್ತಿಗೆ ಪಾಸಿಟಿವ್ ಇದೆ ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆಯಿಂದ ಆ ವ್ಯಕ್ತಿಯ ಮನೆಗೆ ನೂರಾರು ಜನ ಹೋಗಿಬರುವುದು ಮಾಡುತ್ತಿದ್ದಾರೆ, ಇದರಿಂದ ಮತ್ತಷ್ಟು ಜನರಿಗೆ ಆತಂಕ ಹೆಚ್ಚಾಗಿದೆ.
ಆ ವ್ಯಕ್ತಿಯ ಸಹೋದರ ಹೇಳುವ ಪ್ರಕಾರ ನಿನ್ನೆ ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ನೆಗೆಟಿವ್ ಇರುವ ಕಾರಣದಿಂದ ಆ ಶವವನ್ನು ನಮಗೆ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ.
ಆ ವ್ಯಕ್ತಿಯ ಮನೆಯ ಸುತ್ತಮುತ್ತ ಸೀಲ್ ಡೌನ್ ಮಾಡಲಾಗಿದೆ
ಆದರೆ ರಿಪೋರ್ಟ್ ಬರುವ ಮೊದಲೇ ಆ ಶವವನ್ನು ಪ್ಯಾಕ್ ಮಾಡಿ ಹೊರಗೆ ಬಿಡಲು ಸಾಧ್ಯವೇ ಹಾಗೂ ತಾಲೂಕಾ ಆಸ್ಪತ್ರೆಗೆ ಮಾಹಿತಿ ನೀಡದೆ ಶವವನ್ನು ಬಿಡುಗಡೆ ಮಾಡಬಹುದಾ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದರ ಬಗ್ಗೆ ಸತ್ಯಾಸತ್ಯತೆಗಳು ತಿಳಿಯಬೇಕಾದರೆ ಸೂಕ್ತವಾದ ತನಿಖೆ ನಡೆಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
IN MUDALGI Latest Kannada News