ಕೊರೊನಾ ಸೋಂಕು ಹಿನ್ನೆಲೆ:
ಸಾವಳಗಿ ಪೀಠದಲ್ಲಿ ದಸರಾ ಉತ್ಸವ ರದ್ದು
ಗೋಕಾಕ: ಸರ್ಕಾರದ ನಿರ್ದೇಶನ ಹಾಗೂ ಕೊರೊನಾ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ತಾಲ್ಲೂಕಿನ ಸುಕ್ಷೇತ್ರ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಪೀಠದಲ್ಲಿ ಈ ವರ್ಷದ ‘ದಸರಾ ಉತ್ಸವ-2020’ವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ ಎಂದು ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ತಿಳಿಸಿದ್ದಾರೆ.
ವೇದಿಕೆ ಕಾರ್ಯಕ್ರಮಗಳು ಸೇರಿದಂತೆ, ಮೆರವಣಿಗೆ, ಸೀಮೋಲ್ಲಂಘನ ಇವು ಯಾವು ಇರುವುದಿಲ್ಲ ಎಂದು ತಿಳಿಸಿದ್ದಾರೆ. ಭಕ್ತರಿಗೂ ಸನ್ನಿಧಿಯವರ ದರ್ಶನವು ನಿಷೇಧಿಸಲಾಗಿದೆ, ನಾಡಿನ ಭಕ್ತರು ಸಹಕರಿಸಬೇಕು ಎಂದು ಪೀಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
IN MUDALGI Latest Kannada News