ಜಿ.ಪಂ ಸದಸ್ಯ ಗೋವಿಂದ ಕೊಪ್ಪದ ಇವರಿಂದ ನೀರಿನ ಕ್ಯಾನ್ ಕೊಡುಗೆ,
ಕುಲಗೋಡ:ಅನ್ನ ಇಲ್ಲದೇ ತಿಂಗಳು ಕಳೆಯಬಹುದು ನೀರು ಇಲ್ಲದೇ ಕ್ಷಣ ಕಳೆಯಲಾಗದು ನೀರಿನಿಂದ ಶರೀರ ಶುದ್ದ ರೋಗ ದೂರ. ಹೈಬ್ರೀಡ ಕಾಲದ ಎಲ್ಲವೂ ಕಲುಸಿತವಾಗಿದ್ದು ಗ್ರಾಮದ ಜನರ ಹಿತ್ತಕ್ಕಾಗಿ ಶುದ್ದ ನೀರು ಕುಡಿಯಲ್ಲಿ ಎನ್ನೂವ ಉದ್ದೇಶದಿಂದ ಶುದ್ದ ನೀರಿನಘಟP,À ಪ್ರತಿ ಮನೆಗೆ ನೀರಿನ ಕ್ಯಾನ್ ಕೊಡುಗೆ ಅಪಾರ ಎಂದು ಶ್ರೀ ಶಿವಾನಂದ ಮಹಾಸ್ವಾಮಿಗಳು ಮಾತನಾಡಿದರು.
ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಬಸ್ ನಿಲ್ದಾಣದ ಆವರಣದಲ್ಲಿ ಜಿ.ಪಂ ಸದಸ್ಯ ಗೋವಿಂದ ಕೊಪ್ಪದ ಇವರು ಉಚಿತವಾಗಿ ಗ್ರಾಮದ ಪ್ರತಿ ಮನೆಗೆ 20 ಲಿಟರ್ ನೀರಿನ ಕ್ಯಾನ್ ವಿತರಣೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ ಅರಭಾವಿ ಕ್ಷೇತ್ರದಲ್ಲಿ ಶಾಸಕರ ಮಾರ್ಗದರ್ಶನದಲ್ಲಿ 15 ವರ್ಷಗಳಲ್ಲಿ ವಿವಿಧ ಬಗ್ಗೆಯ ಜನ ಹಿತ ಕಾರ್ಯ,ಯೋಜನೆಗಳ ಮಾಡುತ್ತಾ ಬಂದಿದ್ದು ಜನರ ಸಂಕಷ್ಟಕ್ಕೆ ಸ್ಪಂದಿಸುವ ಗಜಪಡೆ ಪ್ರತಿ ಗ್ರಾಮಗಳಲ್ಲಿವೆ ಅದರಿಂದ ಗ್ರಾಮದ ಜನತೆ ಸರ್ವತೋಮೂಖ ಅಭಿವೃದ್ದಿವಾಗುತ್ತಿದೆ ಎಂದರು.
ಜಿ.ಪಂ ಸದಸ್ಯ ಗೊವಿಂದ ಕೊಪ್ಪದ ಮಾತನಾಡಿ ಗ್ರಾಮದಲ್ಲಿ ಕ್ಯಾಲ್ಸಿಯಂಯುಕ್ತ ನೀರಿನಿಂದ ಆರೋಗ್ಯದ ಮೇಲೆ ಪರಿಣಾಮವಾಗಿತ್ತು. ಮಾನ್ಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಇವರ ಮಾರ್ಗದರ್ಶನದಲ್ಲಿ ಜನರ ಹಿತ್ತಕ್ಕಾಗಿ 3 ವರ್ಷಗಳ ಹಿಂದೆ ಸ್ವಂತ ಹಣದಲ್ಲಿ ಶುದ್ದ ನೀರಿನ ಘಟಕ ನಿರ್ಮಿಸಿದ್ದೆ. ಇಂದು ಪ್ರತಿ ಮನೆಗೆ ಒಂದರಂತೆ 1500 ಕ್ಕೂ ಹೆಚ್ಚು 20 ಲಿಟರ್ ನೀರಿನ ಕ್ಯಾನ್ ವಿತರಣೆ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗ್ರಾಮಸ್ಥರಿಗೆ ಸತ್ಕಾರ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಬಸನಗೌಡ ಪಾಟೀಲ. ಶಾಸಕರ ಆಪ್ತಕಾರ್ಯದರ್ಶಿ ಚನ್ನಮಲ್ಲಿಕಾರ್ಜುನ ಯಕ್ಸಂಬಿ. ಆಯ್.ಎಫ್ ಧಪೇದಾರ. ಭೀಮಶಿ ಪೂಜೇರಿ. ಗಿರೀಶ ಹಳ್ಳೂರ.ರಾಜು ಯಕ್ಸಂಬಿ. ಬಸವಣ್ಣೇಪ್ಪ ತಿಪ್ಪಿಮನಿ. ಶ್ರೀಪತಿ ಗಣಿ.ತಮ್ಮಣ್ಣಾ ದೇವರ. ಸದಾಶಿವ ದೇವರ. ರಾಮಣ್ಣಾ ಕುರಬಚನ್ನಾಳ. ಮುಶೆಪ್ಪ ಕೆಂದಿ. ಜಗದೀಶ ಗಿಡ್ಡಾಳಿ. ಸೋಮಲಿಂಗ ಮಿಕಲಿ. ಬಸವಣ್ಣಿ ಸಸಾಲಟ್ಟಿ. ರಾಜು ಬೋಸಲೆ. ಅಪ್ಪಾಜಿ ನಾಯ್ಕ. ಬಸು ಯರಗಟ್ಟಿ. ಪಾಂಡು ದಾಸರ. ಬಸು ಬಿಲಕುಂದಿ ಹಾಗೂ ಗ್ರಾಮದ ಮೂಖಂಡರು ಜನಪ್ರತಿನಿಧಿಗಳು ಗಾಮಸ್ಥರು ಇದ್ದರು.
ಬಸವರಾಜ ಬಿಲಕುಂದಿ ಸ್ವಾಗತಿಸಿ ಬಸವರಾಜ ಕೋಟಿ ನಿರೂಪಿಸಿದರು.