Breaking News
Home / Recent Posts / ಕನ್ನಡ ನಾಡು, ನುಡಿಗಾಗಿ ಯಾವತ್ತು ಮನಸ್ಸು ಕೊಟ್ಟು ಕೆಲಸ ಮಾಡಿ -ಶಾಸಕ ಬಾಲಚಂದ್ರ ಜಾರಕಿಹೊಳಿ

ಕನ್ನಡ ನಾಡು, ನುಡಿಗಾಗಿ ಯಾವತ್ತು ಮನಸ್ಸು ಕೊಟ್ಟು ಕೆಲಸ ಮಾಡಿ -ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

‘ಕನ್ನಡ ಕೆಲಸಗಳನ್ನು ಮನಸ್ಸು ಕೊಟ್ಟು ಮಾಡಬೇಕು’

ಮೂಡಲಗಿ: ‘ಕನ್ನಡ ನಾಡು, ನುಡಿಗಾಗಿ ಯಾವತ್ತು ಮನಸ್ಸು ಕೊಟ್ಟು ಕೆಲಸ ಮಾಡಿದರೆ, ಮಾಡುವ ಕೆಲಸಗಳೆಲ್ಲ ಯಶಸ್ಸು ಆಗುತ್ತವೆ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಮೂಡಲಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಪ್ರಥಮ ಸಾಹಿತ್ಯ ಸಮ್ಮೇಳನದ ಯಶಸ್ಸಿಗಾಗಿ ಶಾಸಕರಿಗೆ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಕನ್ನಡದ ಕೆಲಸ ಮತ್ತು ಸಾಹಿತ್ಯದ ಬೆಳವಣಿಗೆಗೆ ತಮ್ಮಿಂದ ನಿರಂತರ ಪ್ರೋತ್ಸಾಹ ಇರುತ್ತದೆ ಎಂದರು.
ಮೂಡಲಗಿಯ ತಾಲ್ಲೂಕಿನ ಎಲ್ಲ ಸಾಹಿತಿ, ಕಲಾವಿದರು ಒಗ್ಗಟ್ಟಿನ ಮೂಲಕ ತಾಲ್ಲೂಕುವನ್ನು ಸಾಂಸ್ಕøತಿಕವಾಗಿ ಬೆಳೆಸಬೇಕು. ಉತ್ತಮ ಕಾರ್ಯಗಳಿಗೆ ತಾವು ನಿರಂತರವಾದ ಪ್ರೋತ್ಸಾಹ, ಸಹಾಯ ಮಾಡುವುದಾಗಿ ತಿಳಿಸಿದರು.
ತಾಲ್ಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನವು ನಿರೀಕ್ಷೆ ಮೀರಿ ಯಶಸ್ಸು ಆಗಿದ್ದು ಪರಿಷತ್ತಿನ ಎಲ್ಲ ಪದಾಧಿಕಾರಿಗಳನ್ನು ಶಾಸಕರು ಅಭಿನಂದಿಸಿದರು.
ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ, ಬಾಲಶೇಖರ ಬಂದಿ, ಕಸಾಪ ಅಧ್ಯಕ್ಷ ಸಿದ್ರಾಮ್ ದ್ಯಾಗಾನಟ್ಟಿ ಸಮ್ಮೇಳನದ ಯಶಸ್ಸಿಗೆ ಶಾಸಕರ ಸಹಕಾರವನ್ನು ಪ್ರಶಂಸಿದರು.
ಕಸಾಪ ಪದಾಧಿಕಾರಿಗಳಾದ ಚಿದಾನಂದ ಹೂಗಾರ, ಸಾವಿತ್ರಿ ಕಮಲಾಪೂರ, ಮಹಾದೇವ ಮಲಗೌಡರ, ವೈ.ಬಿ. ಪಾಟೀಲ, ಮಹಾರಾಜ ಸಿದ್ದು, ಶಿವನಗೌಡ ಪಾಟೀಲ, ಪ್ರಕಾಶ ಮೇತ್ರಿ, ಯಲ್ಲಾಲಿಂಗ ವಾಳದ, ಸದಾಶಿವ ಯಕ್ಸಂಬಿ, ಢವಳೇಶ್ವರ ಇದ್ದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ