Breaking News
Home / inmudalgi (page 166)

inmudalgi

ಸಹಕಾರಿ ಸಂಸ್ಥೆಗಳು ರೈತರ ಆರ್ಥಿಕ ಅಭಿವೃದ್ದಿಗೆ ಪೂರಕವಾಗಲಿವೆ – ಸಂಸದ ಈರಣ್ಣ ಕಡಾಡಿ ಕರೆ.

  ಮೂಡಲಗಿ: ಸದೃಡ ಸಮಾಜ ನಿರ್ಮಾಣಕ್ಕೆ ಸಹಕಾರ ಸಂಸ್ಥೆಗಳ ಪಾತ್ರ ಅಮೂಲ್ಯವಾದದ್ದು. ಇಂತಹ ಸಹಕಾರಿ ತತ್ವದ ಮೂಲಕ ಸಂಘ, ಸಂಸ್ಥೆಗಳು ರೈತರ ಆರ್ಥಿಕ ಅಭಿವೃದ್ದಿಗೆ ಸಹಕಾರಿಯಾಗಿವೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ತಾಲೂಕಿನ ಕಲ್ಲೋಳಿಯ ಶಿವಾ ಕೋ ಆಫ್ ಕ್ರೇಡಿಟ್ ಸೋಸಾಯಿಟಿ ಲಿ ಕಲ್ಲೋಳಿ ಇದರ ಪ್ರಥಮ ಶಾಖೆಯನ್ನು ಲೋಳಸೂರ ಗ್ರಾಮದಲ್ಲಿ ಉದ್ಘಾಟಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಸಹಕಾರಿ ಕ್ಷೇತ್ರವನ್ನು ಅಭಿವೃದ್ದಿ ಪಡಿಸಲು ಕೇಂದ್ರ …

Read More »

2023-24 ರ ವೇಳೆಗೆ ವಾರ್ಷಿಕ 15 ಮಿಲಿಯನ್ ಟನ್‍ನಷ್ಟು ಬಯೋ ಗ್ಯಾಸ್ ಉತ್ಪಾದನೆ

ಮೂಡಲಗಿ: ಜೈವಿಕ ಇಂಧನಗಳ ರಾಷ್ಟ್ರೀಯ ನೀತಿ-2018ರ ಅನ್ವಯ ಆಮದು ಅವಲಂಬನೆಯನ್ನು ಕಡಿಮೆ ಮಾಡುವುದು, ಉದ್ಯೋಗವನ್ನು ಸೃಷ್ಟಿಸುವುದು, ತ್ಯಾಜ್ಯ ನಿರ್ವಹಣೆ ಸೇರಿದಂತೆ ರೈತರಿಗೆ ಉತ್ತಮ ಸಂಭಾವನೆ ಉದ್ದೇಶಗಳೊಂದಿಗೆ ಜೈವಿಕ ಇಂಧನವನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು 2025 ರ ವೇಳೆಗೆ ಶೇ 20% ರಷ್ಟು ಪೆಟ್ರೋಲ್‍ನಲ್ಲಿ ಎಥೆನಾಲ್ ಮಿಶ್ರಣ ಮತ್ತು ಡೀಸೆಲ್‍ನಲ್ಲಿ ಶೇ 5% ಜೈವಿಕ ಡೀಸೆಲ್ ಮಿಶ್ರಣ ಮಾಡುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ …

Read More »

ಮೂಡಲಗಿ ಕೋಆಪರೇಟಿವ ಬ್ಯಾಂಕ್‍ವು ರೂ.1.64 ಕೋಟಿ ಲಾಭ ಗಳಿಕೆ

  ಮೂಡಲಗಿ: ಇಲ್ಲಿಯ ಪ್ರತಿಷ್ಠಿತ ದಿ. ಮೂಡಲಗಿ ಕೋಆಪರೇಟಿವ್ ಬ್ಯಾಂಕ್‍ವು 2022ರ ಮಾರ್ಚ ಅಂತ್ಯಕ್ಕೆ ರೂ. 1.64 ಕೋಟಿ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗುತ್ತಿದೆ ಎಂದು ಬ್ಯಾಂಕ್ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಜಿ. ಢವಳೇಶ್ವರ ತಿಳಿಸಿದ್ದಾರೆ. ಬ್ಯಾಂಕ್ ಪ್ರಗತಿ ಕುರಿತು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಅವರು ವಿವಿಧ ತೆರನಾದ ನಿಧಿಗಳ ಕ್ರೋಢಿಕರಣಗೊಳಿಸಿ ಹಾಗೂ ಆದಾಯ ತೆರಿಗೆ ತೆಗೆದು ನಿವ್ವಳ ರೂ. 61.20 ಲಕ್ಷ ಲಾಭ ಬಂದಿದೆ ಎಂದು …

Read More »

   ‘ದು:ಖಿತರಿಗೆ ಹೇಳುವ ಸಾಂತ್ವನವು ಬಹುದೊಡ್ಡ ಮೌಲ್ಯವಾಗಿದೆ’ ಡಾ. ವಿ.ಎಸ್. ಮಾಳಿ

   ‘ದು:ಖಿತರಿಗೆ ಹೇಳುವ ಸಾಂತ್ವನವು ಬಹುದೊಡ್ಡ ಮೌಲ್ಯವಾಗಿದೆ’ ಡಾ. ವಿ.ಎಸ್. ಮಾಳಿ ಮೂಡಲಗಿ: ‘ದು:ಖಿತರಿಗೆ ಹೇಳುವ ಸಾಂತ್ವನವು ಸಮಾಜದಲ್ಲಿ ಬಹುದೊಡ್ಡ ಮೌಲ್ಯವಾಗಿದೆ’ ಎಂದು ಹಾರೂಗೇರಿಯ ಎಸ್‍ವಿಎಸ್ ಕಾಲೇಜು ಪ್ರಾಚಾರ್ಯ, ಸಾಹಿತಿ ಡಾ. ವಿ.ಎಸ್. ಮಾಳಿ ಹೇಳಿದರು. ಸಮೀಪದ ಇಟ್ನಾಳ ಗ್ರಾಮದಲ್ಲಿ ಕಳೆದ ವರ್ಷ ಕೋವಿಡ್‍ದಿಂದ ಅಕಾಲಿಕ ನಿಧನರಾದ ಡಾ. ಮಲ್ಲಪ್ಪ ಕುರಿ ಅವರ ಕುಟಂಬಕ್ಕೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರ ಪರಿಷತ್‍ದಿಂದ ರೂ. 75 ಸಾವಿರ ಸಹಾಯ …

Read More »

ಮೂಡಲಗಿ: ಕಂದಾಯ ಇಲಾಖೆ ಪತ್ರಿ ತಿಂಗಳ ಮೂರನೇ ಶನಿವಾರ ಆರಂಭಿಸಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಹಳ್ಳಿಯ ಜನರ ಕುಂದು ಕೊರತೆ ಆಲಿಸಿ ಅಲ್ಲಿಯೇ ಪರಿಹಾರ ಸೂಚಿಸುವ ಕಾರ್ಯಕ್ರಮವಾಗಿದ್ದು, ಮೂಡಲಗಿ ತಾಲೂಕಿನಲ್ಲಿ ಹೆಸರಿಗೆ ಮಾತ್ರ ಕಾರ್ಯಕ್ರಮ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚುನಾಪ್ಪ ಪೂಜೇರಿ ಆರೋಪಿಸಿದರು. ರವಿವಾರದಂದು ಗುರ್ಲಾಪೂರ ಐಬಿಯಲ್ಲಿ ಜರುಗಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಳ ನಡೆ-ಹಳ್ಳಿ …

Read More »

ಮೂಡಲಗಿಯ ಲಯನ್ಸ್ ಕ್ಲಬ್ ಪರಿವಾರದಿಂದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪಾಕ್ಷಿಕ 72ನೇ ಅನ್ನದಾಸೋಹ

  ‘ಅನ್ನದಾನವು ಶ್ರೇಷ್ಠ ದಾನವಾಗಿದೆ’ ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಒಳ ಮತ್ತು ಹೊರ ರೋಗಿಗಳಿಗೆ 72ನೇ ಪಾಕ್ಷಿಕ ಅನ್ನದಾಸೋಹವನ್ನು ಏರ್ಪಡಿಸಿದ್ದರು. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್.ಎ. ಶಾಸ್ತ್ರೀಮಠ ಅವರು ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ‘ಅನ್ನದಾನವು ಶ್ರೇಷ್ಠದಾನವಾಗಿದೆ, ಹಸಿದರವರಿಗೆ ಅನ್ನ ನೀಡುವುದು ಮಾನವೀಯತೆಯ ಪ್ರತೀಕವಾಗಿದೆ’ ಎಂದರು. ಲಯನ್ಸ್ ಕ್ಲಬ್‍ವು ಪ್ರತಿ ತಿಂಗಳದಲ್ಲಿ ಎರಡು ಬಾರಿ ರೋಗಿಗಳಿಗೆ …

Read More »

ಮೂಡಲಗಿ: ಆತ್ಮನಿರ್ಭರ್ ಭಾರತ್ ಉಪಕ್ರಮದ ಭಾಗವಾಗಿ ಕೇಂದ್ರ ಪ್ರಾಯೋಜಿತ ಪ್ರಧಾನ ಮಂತ್ರಿ ಔಪಚಾರಿಕ ಮೈಕ್ರೋ ಫುಡ್ ಪೆÇ್ರಸೆಸಿಂಗ್ ಎಂಟರ್‍ಪ್ರೈಸಸ್ ಯೋಜನೆಯಡಿ ಕರ್ನಾಟಕ ರಾಜ್ಯಕ್ಕೆ ಒಟ್ಟು 11,910 ಸೂಕ್ಷ್ಮ ಆಹಾರ ಸಂಸ್ಕರಣಾ ಘಟಕಗಳನ್ನು ಹಂಚಿಕೆ ಮಾಡಲಾಗಿದ್ದು, ಈ ಯೋಜನೆಗೆ ಒಟ್ಟು 51.43 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ ಎಂದು …

Read More »

ನಿವೃತ್ತ ಸೈನಿಕ ಚಂದ್ರಪ್ಪ ನಾಯ್ಕರಗೆ ಸ್ವಾಗತ ಕಾರ್ಯಕ್ರಮ

  ಬೆಟಗೇರಿ:ದೇಶದ ರಕ್ಷಣೆಯಲ್ಲಿ 17 ವರ್ಷಗಳ ಕಾಲ ಸೈನಿಕ ಸೇವೆ ಸಲ್ಲಿಸಿ, ಈಗ ಸೈನಿಕ ವೃತ್ತಿಯಿಂದ ನಿವೃತ್ತಿ ಹೊಂದಿ ಅಕ್ಕಿಸಾಗರ ಸ್ವಗ್ರಾಮಕ್ಕೆ ಆಗಮಿಸುತ್ತಿರುವ ನಿವೃತ್ತ ಯೋಧ ಚಂದ್ರಪ್ಪ ಮಾರುತಿ ನಾಯ್ಕರಗೆ ಸ್ಥಳೀಯ ಹಾಲಿ ಮತ್ತು ಮಾಜಿ ಸೈನಿಕರ ಬಳಗ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಭವ್ಯ ಸ್ವಾಗತ ಮೆರವಣಿಗೆ, ಸನ್ಮಾನ ಕಾರ್ಯಕ್ರಮ ಏ.2ರಂದು ಮುಂಜಾನೆ 9 ಗಂಟೆಗೆ ನಡೆಯಲಿದೆ. ಸ್ಥಳೀಯ ಸಿದ್ಧಾರೂಢ ಮಠದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಸ್ವಾಗತ ಮೆರವಣಿಗೆ, …

Read More »

ವಿದ್ಯಾರ್ಥಿಗಳಿಗೆ ಅಕ್ಷರಕ್ಕಿಂತ ಸಂಸ್ಕಾರ ಮುಖ್ಯ – ಅಜಿತ ಮನ್ನಿಕೇರಿ

ವಿದ್ಯಾರ್ಥಿಗಳಿಗೆ ಅಕ್ಷರಕ್ಕಿಂತ ಸಂಸ್ಕಾರ ಮುಖ್ಯ – ಅಜಿತ ಮನ್ನಿಕೇರಿ ಮೂಡಲಗಿ : ವಿದ್ಯಾರ್ಥಿಗಳು ನಮ್ಮ ನಾಡಿನ ಹಬ್ಬ-ಹರಿದಿನಗಳು, ಸಂಸ್ಕøತಿ, ಸಂಸ್ಕಾರಗಳನ್ನು ಅರಿತುಕೊಂಡು ಅಕ್ಷರಭ್ಯಾಸ ಮಾಡಿದಲ್ಲಿ ಆ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಂಸ್ಕಾರವಂತ ವ್ಯಕ್ತಿಗಳಾಗಿ ಬಾಳುತ್ತಾರೆ. ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು. ಅವರು ತುಕ್ಕಾನಟ್ಟಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಚಂದ್ರಮಾನ ಯುಗಾದಿ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಅಕ್ಷರ ದಾಸೋಹದ ವಿಶೇಷ …

Read More »

ಮದುವೆ ಜೋಡಿಯಿಂದ ಆಧಾರ್ ಜಾಗೃತಿ.! *ಮದುವೆಗೆ ತಪ್ಪದೇ ಬನ್ನೀ, ಆಧಾರ್ ನೋಂದಣಿ ತಪ್ಪದೇ ಮಾಡಿಸಿ *ವೈರಲ್ ಆಯ್ತು ಆಧಾರ್ ಕಾರ್ಡ್ ಮದುವೆ ಆಮಂತ್ರಣ ಪತ್ರಿಕೆ

ಮದುವೆಗೆ ತಪ್ಪದೇ ಬನ್ನೀ, ಆಧಾರ್ ನೋಂದಣಿ ತಪ್ಪದೇ ಮಾಡಿಸಿ ವರದಿ: ಅಡಿವೇಶ ಮುಧೋಳ. ಬೆಟಗೇರಿ: ದೇಶದ್ಯಾಂತ ಎಲ್ಲಾ ದಾಖಲೆಗಳಿಗೆ ಆಧಾರ್ ಕಡ್ಡಾಯವಾಗಿದೆ. ಪ್ರತಿಯೊಬ್ಬರೂ ಆಧಾರ್ ಕಾರ್ಡ್‍ನ್ನು ನಿತ್ಯ ಹತ್ತು ಹಲವಾರು ಸೌಲಭ್ಯಗಳಿಗೆ ಬಳಸುತ್ತಾರೆ. ಆದರೆ… ಇಲ್ಲೊಂದು ಜೋಡಿ ಮದುವೆ ಆಮಂತ್ರಣ ಪತ್ರಿಕೆಯನ್ನೇ ಆಧಾರ್ ಕಾರ್ಡ್ ಮಾದರಿಯಲ್ಲಿ ಮುದ್ರಣ ಮಾಡಿಸಿದ ಕುರಿತು ಭಾರಿ ವೈರಲ್ ಆಗಿದೆ. ಯುಡಿಐ ಆಯೋಗ ಆಧಾರ್ ನೋಂದಣಿ ಕುರಿತು ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದಕ್ಕೆ …

Read More »