Breaking News
Home / inmudalgi (page 4)

inmudalgi

‘ರಕ್ತದಾನದಿಂದ ಜೀವ ಉಳಿಸಿದ ಸಾರ್ಥಕತೆ ಪ್ರಾಪ್ತಿ”- ರೇಖಾ ಅಕ್ಕನವರು

  ಮೂಡಲಗಿ: ರಕ್ತದಾನವು ಶ್ರೇಷ್ಠವಾಗಿದ್ದು, ರಕ್ತದಾನ ಮಾಡುವ ಮೂಲಕ ಜೀವ ಉಳಿಸಿದ ಸಾರ್ಥಕತೆ ಪ್ರಾಪ್ತವಾಗುತ್ತದೆ” ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಮೂಡಲಗಿ ಕೇಂದ್ರದ ರೇಖಾ ಅಕ್ಕನವರು ಹೇಳಿದರು. ಇಲ್ಲಿಯ ಪ್ರಜಾಪಿತ ಈಶ್ವರಿ ವಿಶ್ವವಿದ್ಯಾಲಯದ ಮೂಡಲಗಿ ಕೇಂದ್ರದಲ್ಲಿ ರಾಜಯೋಗಿನಿ ದಾದಿ ಪ್ರಕಾಶಮಣಿಜೀ ಅವರ ಸ್ಮರಣಾರ್ಥ ವಿಶ್ವ ಬಂದುತ್ವ ವಿಕಾಸ ಅಂಗವಾಗಿ ಮಹಾಲಿಂಗಪೂರದ ಡಾ. ವಿ.ಪಿ. ಕಣಕರಡ್ಡಿ ಮೆಮೊರಿಯಲ್ ಬ್ಲಡ್ ಸೆಂಟರ್ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಐಚ್ಚಿಕ ರಕ್ತದಾನ ಶಿಬಿರವನ್ನು ಉದ್ಘಾಟಿಸಿ …

Read More »

ಸಿ.ಎಸ್.ನಿಂಗೇಗೌಡ. ನಿಧನ

ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ಮಂಜುನಾಥ ನ್ಯೂ ಬೆಂಗಳೂರು ಅಯ್ಯಂಗಾರ ಬೇಕರಿ-ಸ್ವೀಟ್ಸ್ ಅಂಗಡಿ ಮಾಲೀಕ, ಹಾಸನ ಜಿಲ್ಲೆಯ ಚಿಕ್ಕಕಡಲೂರು ಮೂಲದ ಸಿ.ಎಸ್.ನಿಂಗೇಗೌಡ (74) ಇವರು ಶುಕ್ರವಾರ ಆ.22ರಂದು ನಿಧನರಾದರು. ಮೃತರು ಪತಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಮೊಮ್ಮಕ್ಕಳು, ಅಳಿಯಂದಿರು ಸೇರಿದಂತೆ ಅಪಾರ ಬಂದು-ಬಳಗವನ್ನಗಲಿದ್ದಾರೆ.  

Read More »

ಕನ್ನಡ ಸಾಹಿತ್ಯಕ್ಕೆ  ಪ್ರೋ. ಜಿ ವೆಂಕಟಸುಬ್ಬಯ್ಯನವರ ಕೊಡುಗೆ ಅಪಾರ-ಶಿವಲಿಂಗ ದಾನನ್ನವರ

ಮುಡಲಗಿ : ಪ್ರೋ .ಜಿ ವೆಂಕಟಸುಬ್ಬಯ್ಯನವರು ಕನ್ನಡ ನಾಡಿಗೆ ಅದರಲ್ಲೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತನ್ನದೆ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಯುವ ಲೇಖಕ ಶಿವಲಿಂಗ ದಾನನ್ನವರ ಹೇಳಿದರು. ಅವರು ತಾಲೂಕಿನ ಖಾನಟ್ಟಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯಲಯದಲ್ಲಿ ಸಿರಿ ಸಂಗಮ ಕನ್ನಡ ಸಾಹಿತ್ಯ ಬಳಗದಿಂದ ನಡೆದ ಪ್ರೋ .ಜಿ ವೆಂಕಟಸುಬ್ಬಯ್ಯನವರ ಜನ್ಮ ದಿನಾಚರಣೆ ಸ್ಮರಣಾರ್ಥ ಕನ್ನಡಕ್ಕಾಗಿ ದುಡಿದು ಮಡಿದವರ ಕಾರ್ಯಕ್ರದಲ್ಲಿ ಮಾತನಾಡಿ, ಪ್ರೋ. .ಜಿ ವೆಂಕಟಸುಬ್ಬಯ್ಯನವರು …

Read More »

ಸಾಮಾಜಿಕವಾಗಿ ಕಾನೂನಾತ್ಮಕವಾಗಿ ಸಾಕಷ್ಟು ನ್ಯಾಯ ಮಹಿಳೆಯರಿಗೆ ಸಿಗವಂತಾಗಬೇಕಾಗಿದೆ : ಮುಖ್ಯೋಪಾದ್ಯಾಯಿನಿ ಗೀತಾ ಕರಗಣ್ಣಿ

ಮೂಡಲಗಿ : ಮಹಿಳೆಯರು ಸಮಾಜದಲ್ಲಿವಿರುವ ಅವಕಾಶಗಳನ್ನು ಸದುಪಯೋಗಪಡೆದುಕೊಳ್ಳಬೇಕು ಮಹಿಳೆಯರ ಸಾಮಾಜಿಕ ಸ್ಥಾನಮಾನಗಳು ಹೆಚ್ಚಾಗಿದ್ದು ಅವುಗಳ ಅರಿವು ಹೊಂದಿ ಸಾಮಾಜಿಕ ನ್ಯಾಯವನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿ ಮಹಿಳಾ ಸಮಾಜ ಗುರ್ತಿಸಿಕೊಳ್ಳುವುದು ಅವಶ್ಯಕವಿದ್ದು ಇಂದು ಭಾರತೀಯ ಸಂವಿಧಾನದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ವಿಶೇಷ ಆಧ್ಯತೆಗಳನ್ನು ನೀಡಿದ್ದು ಅವುಗಳ ಸದುಪಯೋಗ ಇಂದಿನ ಯುವಸಮುದಾಯದ ಮಹಿಳೆಯರು ಪಡೆದುಕೊಳ್ಳುವುದು ಅವಶ್ಯಕವಿದೆ ಎಂದು ಗುರ್ಲಾಪೂರದ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಗೀತಾ ಕರಗಣ್ಣಿ ಹೇಳಿದರು. ಪಟ್ಟಣದ ಆರ್.ಡಿ.ಎಸ್. ಕಲಾ, ವಾಣಿಜ್ಯ, …

Read More »

ಆ.24 ರಂದು ಉಪನೋಂದಣಿ ಕಛೇರಿ ಕಾರ್ಯ ನಿರ್ವಹಿಸಲಿದೆ

ಮೂಡಲಗಿ : ರಾಜ್ಯ ಸರಕಾರದ ಹಾಗೂ ನೋಂದಣಿ ಮಹಾಪರಿವೀಕ್ಷಕರ ಆದೇಶದಂತೆ ರಾಜ್ಯದ ಪ್ರತಿಯೊಂದು ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿನ ಉಪನೋಂದಣಿ ಕಛೇರಿಗಳು ಸರದಿಧಿಯ ಆಧಾರದ ಮೇಲೆ ಈ ಭಾನುವಾರ ಆ.24 ರಂದು ಮೂಡಲಗಿ ಉಪನೋಂಣಿ ಕಛೇರಿ ಕಾರ್ಯ ನಿರ್ವಹಿಸಲಿದೆ. ಆ.26 ದಂದು ಮಂಗಳವಾರ ಕಛೇರಿಗೆ ರಜೆ ಇರುವದು ಎಂದು ಉಪನೋಂಣಿ ಅಧಿಕಾರಿ ಓ.ಹರಿಯಪ್ಪ ತಿಳಿಸಿದ್ದಾರೆ.  

Read More »

ಯಶಸ್ಸಿಗೆ ಕೊನೆ ಇಲ್ಲ – ಎಸ್. ಎಮ್ ಕುಂಬಾರ

ಮೂಡಲಗಿ : ನಾವು ಜೀವನದಲ್ಲಿ ಒಂದು ಗುರಿ ಇಟ್ಟುಕೊಂಡು ಅದನ್ನು ಮುಟ್ಟಿದ ತಕ್ಷಣ ಯಶಸ್ಸು ಅನ್ನಲಿಕ್ಕೆ ಆಗಲ್ಲಾ. ಯಶಸ್ಸಿಗೆ ಕೊನೆಯೆ ಇಲ್ಲಾ. ಜೀವನದ ಕೊನೆಯ ಘಟ್ಟದವರೆಗೂ ಸುಳ್ಳು ಸುದ್ದಿಗಳಿಗೆ ಕಿವಿ ಕೊಡದೇ ನಿಮ್ಮದಾರಿಯಲ್ಲಿ ನೀವು ಸಾಗಿದರೆ ಅದುವೆ ಯಶಸ್ಸು ಎಂದು ಜಮಖಂಡಿ ತಾಲೂಕಿನ ಮೈಗೂರ ಸರ್ಕಾರಿ ಪ.ಪೂ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಎಸ್. ಎಮ್ ಕುಂಬಾರ ಹೇಳಿದರು. ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ವಾಣಿಜ್ಯ ಹಾಗೂ ಬಿಸಿಎ ಮಹಾವಿದ್ಯಾಲಯದ ಸನ್ …

Read More »

ಗುರುಪುಷ್ಯಾಮೃತ ದಿನ ನಡೆದ ಕುಂಕುಮಾರ್ಚನೆ

ಮೂಡಲಗಿ ಪಟ್ಟಣದ ಢವಳೇಶ್ವರ ಕಾಲನಿಯಲ್ಲಿಯ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಅರ್ಚಕ ರಾಘವೇಂದ್ರ ತೆಗ್ಗಿ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್‍ದ ಮಾತೃಶಕ್ತಿ ವತಿಯಿಂದ ಗುರುಪುಷ್ಯಾಮೃತ ದಿನ ಗುರುವಾರದಂದು ನಡೆದ ಕುಂಕುಮಾರ್ಚನೆಯಲ್ಲಿ ಭಾಗವಹಿಸಿದ ಮಹಿಳೆಯರು.

Read More »

ಆ.24ರಿಂದ ಬೆಟಗೇರಿಯಲ್ಲಿ 41ನೇ ಸತ್ಸಂಗ ಸಮ್ಮೇಳನ *ಐದು ದಿನ ಸಂಜೆ 7:30ಗಂಟೆಗೆ ಸಕಲ ಮಹಾತ್ಮರಿಂದ ಪ್ರವಚನ* ದಾನಿಗಳಿಗೆ ಸತ್ಕಾರ* ಮಹಾಪ್ರಸಾದ

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿ 41ನೇ ಸತ್ಸಂಗ ಸಮ್ಮೇಳನ ಆ.24ರಿಂದ ಆ.28ತನಕ ನಡೆಯಲಿದ್ದು, ಇಲ್ಲಿಯ ಈಶ್ವರ ದೇವರ ದೇವಸ್ಥಾನದಲ್ಲಿರುವ ಈಶ್ವರ ದೇವರ ಗದ್ದುಗೆ ಐದು ದಿನ ಮುಂಜಾನೆ 6 ಗಂಟೆಗೆ ಮಹಾಪೂಜೆ, ನೈವೇದ್ಯ ಸಮರ್ಪನೆ ಜರುಗಲಿದೆ. ಆ.24ರಂದು ಸ್ಥಳೀಯ ಶ್ರೀ ಗಜಾನನ ವೇದಿಕೆ ಮೇಲೆ ಸಾಯಂಕಾಲ 7:30ಗಂಟೆಗೆ ಸುಣಧೋಳಿ ಅಭಿನವ ಶಿವಾನಂದ ಸ್ವಾಮಿಜಿ, ಭಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ, ಇಟ್ನಾಳದ ಸಿದ್ದೇಶ್ವರ ಸ್ವಾಮಿಜಿ, ಬಿಲಕುಂದಿ …

Read More »

ಸಾರ್ವಜನಿಕರ ಬಹು ದಿನಗಳ ಬೇಡಿಕೆಯಾದ *ಪ್ರಜಾ ಸೌಧ* ನಿರ್ಮಾಣಕ್ಕೆ 8.60 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ – ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಮೂಡಲಗಿ ತಾಲ್ಲೂಕಿನ ಸಾರ್ವಜನಿಕರ ಬಹು ದಿನಗಳ ಬೇಡಿಕೆಯಾದ *ಪ್ರಜಾ ಸೌಧ* ಆಡಳಿತ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ 8.60 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ. ಈ ಬಗ್ಗೆ ಗುರುವಾರದಂದು ಮಾಧ್ಯಮಗಳಿಗೆ ಪ್ರಕಟಣೆ ನೀಡಿರುವ ಅವರು, ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದವರು ತಿಳಿಸಿದ್ದಾರೆ. ಮೂಡಲಗಿ ಪಟ್ಟಣದ ಈಗಿರುವ ತಹಶೀಲ್ದಾರ ಕಛೇರಿಉ ಮುಂಭಾಗದಲ್ಲಿ ಸುಮಾರು 2 …

Read More »

ಶಾಲಾ ಕಾಲೇಜುಗಳಿಗೆ ಬುಧವಾರ ರಜೆ ಘೋಷಣೆ

ಮೂಡಲಗಿ: ವ್ಯಾಪಕ ಮಳೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಬೆಳಗಾವಿ ಜಿಲ್ಲಾ ಶಾಲಾ ಕಾಲೇಜುಗಳಿಗೆ ಬುಧವಾರ ರಜೆ ಘೋಷಣೆ ಮಾಡಲಾಗಿದೆ. ಬೆಳಗಾವಿ ಜಿಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ನಾಳೆ ಬುಧವಾರ ರಜೆ ಇರಲಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಆದೇಶಿಸಿದ್ದಾರೆ.

Read More »