Breaking News
Home / Recent Posts / ಎ.25ರಂದು ಅವರಾದಿಯಲ್ಲಿ ಹನುಮಾನ ಮೂರ್ತಿ ಪ್ರತಿಷ್ಠಾಪಣೆ

ಎ.25ರಂದು ಅವರಾದಿಯಲ್ಲಿ ಹನುಮಾನ ಮೂರ್ತಿ ಪ್ರತಿಷ್ಠಾಪಣೆ

Spread the love

 

ಮೂಡಲಗಿ: ತಾಲೂಕಿನ ಅವರಾದಿ ಗ್ರಾಮದಲ್ಲಿ ಶ್ರೀ ಹನುಮಾನ ಸೇವಾ ಸಮೀತಿ ಆಶ್ರಯದಲ್ಲಿ ಶ್ರೀ ಹನುಮಾನ ಮೂತಿ ಪ್ರತಿಷ್ಠಪನೆ ಕಾರ್ಯಕ್ರಮ ಎ.25ರಂದು ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಜರುಗಲಿದೆ.
ಎ.25 ರಂದು ಬೆಳ್ಳಿಗೆ 5-05ಕ್ಕೆ ಶ್ರೀ ಹನುಮಂತ ದೇವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಹೊಮ ಹವನ, ರುದ್ರಾಭಿಷೇಕ ಜರುಗುವುದು. 10 ಗಂಟೆಗೆ ಜರುಗುವ ಸಮಾರಂಭದ ಸಾನಿಧ್ಯವನ್ನು ಮರೆಗುದ್ದಿಯ ಡಾ.ನಿರುಪಾದೇಶ್ವರ ಮಹಾಸ್ವಾಮಿಗಳು ವಹಿಸುವರು, ಕಲಬುರ್ಗಿ ಜಿಲ್ಲೆ ಕುಂದಗೊಳದ ಶ್ರೀ ಸಿದ್ಧರಾಮ ಮಹಾಸ್ವಾಮಿಗಳು ಜ್ಯೋತಿ ಬೆಳಗಿಸುವರು, ಶ್ರೀ ಗಂಗಾಧರ ಹಿರೇಮಠ ಶ್ರೀಗಳು ಮತ್ತು ಸೋಮಯ್ಯ ಹಿರೇಮಠ ಶ್ರೀಗಳು, ಮಹಾಂತಯ್ಯಾಬ ಹಿರೇಮಠ ಶ್ರೀಗಳ ಉಪಸ್ಥಿತರಿರುವರು, ಕಹಾಮಾ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಸಂಸದರು ಹಾಗೂ ಶಾಸಕರು, ರಾಜಕೀಯ ಮುಖಂಡರು, ಅಧಿಕಾರಿಗಳು, ಹಿರಿಯರು ಭಾಗವಹಿಸುವರು.


Spread the love

About inmudalgi

Check Also

ಅರಳಮಟ್ಟಿಯಲ್ಲಿ ಭಜನಾ ಕಾರ್ಯಕ್ರಮ

Spread the loveಮೂಡಲಗಿ: ತಾಲೂಕಿನ ಅರಳಿಮಟ್ಟಿ ಗ್ರಾಮದ ಚಕ್ರವರ್ತಿ ಶ್ರೀ ಸದಾಶಿವ ಮುತ್ಯಾನ ಭಜನಾ ಕಾರ್ಯಕ್ರಮ ಹಾಗೂ ಸಮುದಾಯ ಭವನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ