ತೋಟದ ರಸ್ತೆಗಳು ರೈತರಿಗೆ ಅತ್ಯಂತ ಅವಶ್ಯಕ:ಸರ್ವೋತ್ತಮ ಜಾರಕಿಹೊಳಿ
ಬೆಟಗೇರಿ:ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಅರಭಾಂವಿ ಮತಕ್ಷೇತ್ರ ವ್ಯಾಪ್ತಿಯ ಬೆಟಗೇರಿ ಗ್ರಾಮದಲ್ಲಿ ಈಗಾಗಲೇ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ತೋಟದ ರಸ್ತೆಗಳು ರೈತರಿಗೆ ಅತ್ಯಂತ ಅವಶ್ಯಕವಾಗಿವೆ. ಬೆಟಗೇರಿ ಗ್ರಾಮಸ್ಥರ ಅವಶ್ಯಕ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಬೆಟಗೇರಿ ಗ್ರಾಮ ಪಂಚಾಯತಿ ಸಹಯೋಗದ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ವಿವಿಧ ತೋಟಗಳ ರಸ್ತೆಗಳ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ ನ.5ರಂದು ನೆರವೇರಿಸಿ ಮಾತನಾಡಿದ ಅವರು, ಬೆಟಗೇರಿ ಗ್ರಾಮದಲ್ಲಿ ಇಂದು ವಿವಿಧ ತೋಟಗಳ ನೂತನ ರಸ್ತೆಗಳ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ ಇಲ್ಲಿಯ ರೈತರು ಸಹಕರಿಸಿ, ತೋಟದ ರಸ್ತೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಗ್ರಾಪಂ ಪಿಡಿಒ ಎಚ್.ಎನ್.ಬಾವಿಕಟ್ಟಿ ಅವರು ಮಾತನಾಡಿ, ಬೆಟಗೇರಿ ಗ್ರಾಪಂ ಸಹಯೋಗದಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯ ಸುಮಾರು 7 ಲಕ್ಷ ರೂ.ಗಳ ವೆಚ್ಚದಲ್ಲಿ ಗುರಪ್ಪ ದೇಯಣ್ಣವರ ಮನೆಯಿಂದ ಗುದಗನ್ನವರ ತೋಟದವರೆಗೆ(ಯರವಂಕಿ) ತೋಟದ ರಸ್ತೆ, ಸುಮಾರು 7 ಲಕ್ಷ ರೂ.ಗಳ ವೆಚ್ಚದಲ್ಲಿ ಬಗರನಾಳ ಮುಖ್ಯ ರಸ್ತೆಯಿಂದ ಹಾಲಪ್ಪ ಪರಮಾನಟ್ಟಿ ಹೊಲದ ತನಕ ತೋಟದ ರಸ್ತೆ, ಗೋಕಾಕ ಮುಖ್ಯ ರಸ್ತೆಯಿಂದ ಮಲ್ಲಪ್ಪ ಗಾನೂರ ಹೊಲದ ತನಕ ಸುಮಾರು 6 ಲಕ್ಷ ರೂ.ಗಳ ವೆಚ್ಚದಲ್ಲಿ (ಕಿನಾಲ್) ರಸ್ತೆ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಗೋಕಾಕ ಎನ್ಎಸ್ಎಫ್ ಪ್ರತಿನಿಧಿ ಅಬ್ದುಲ್ ಮಿರ್ಜಾನಾಯ್ಕ, ಗ್ರಾಪಂ ಮಾಜಿ ಅಧ್ಯಕ್ಷ ಬಸವಂತ ಕೋಣಿ, ಶಿವನಪ್ಪ ಮಾಳೇದ, ವಿಜಯ ಹಿರೇಮಠ, ಲಕ್ಷ್ಮಣ ಸೋಮಗೌಡ್ರ, ಶ್ರೀಧರ ದೇಯಣ್ಣವರ, ಸದಾಶಿವ ಕುರಿ, ಸುಭಾಷ ಕರೆಣ್ಣವರ, ಪುಂಡಲೀಕ ಹಾಲಣ್ಣವರ, ರಾಮಣ್ಣ ನೀಲಣ್ಣವರ, ಸುಭಾಷ ಜಂಬಗಿ, ಈರಣ್ಣ ಬಳಿಗಾರ, ಹನುಮಂತ ವಗ್ಗರ, ರಾಮಣ್ಣ ಕತ್ತಿ, ರಾಮಣ್ಣ ಬಳಿಗಾರ, ಧರೆಪ್ಪ ಚಂದರಗಿ, ಬಸವರಾಜ ದೇಯಣ್ಣವರ, ಹನುಮಂತ ಚಂದರಗಿ, ಮಾರುತಿ ಬಣಜಿಗೇರ, ಭೀರಪ್ಪ ಕುರಬೇಟ, ಗೌಡಪ್ಪ ಮಾಳೇದ, ಸುರೇಶ ಬಾಣಸಿ, ವಿಠಲ ಚಂದರಗಿ, ಪ್ರಕಾಶ ಗುಡದಾರ, ಭೀಮಶೆಪ್ಪ ಹೊಂಗಲ, ಗುರಪ್ಪ ಮಾಕಾಳಿ, ಗ್ರಾಪಂ ಸದಸ್ಯರು, ಸಿಬ್ಬಂದಿ, ಗಣ್ಯರು, ರೈತರು, ಗ್ರಾಮಸ್ಥರು ಇದ್ದರು.