ಫೆ. 4 ಮತ್ತು 5 ರಂದು ಬೆಟಗೇರಿ ಶ್ರೀಯಲ್ಲಮ್ಮದೇವಿ ಜಾತ್ರಾಮಹೋತ್ಸವ
ಬೆಟಗೇರಿ:ಗ್ರಾಮದ ಶ್ರೀರೇಣುಕಾದೇವಿ ದೇವಾಲಯದಲ್ಲಿ ಫೆ.4 ಮತ್ತು ಫೆ.5ರಂದು ಶ್ರೀ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಮತ್ತು ಶ್ರೀಯಲ್ಲಮ್ಮದೇವಿ ಬಾನೆ ನೂತನ ಕಟ್ಟೆ ಉದ್ಘಾಟನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಫೆ.4ರಂದು ಮುಂಜಾನೆ ಮತ್ತು ಸಂಜೆ 7 ಗಂಟೆಗೆ ಸ್ಥಳೀಯ ಶ್ರೀ ರೇಣುಕಾದೇವಿ ದೇವಾಲಯದ ಶ್ರೀ ಯಲ್ಲಮ್ಮದೇವಿಯ ಗದ್ಗುಗೆ ಮಹಾಪೂಜೆ, ನೈವೇಧ್ಯ ಸಮರ್ಪನೆ, ಸಾಯಂಕಾಲ 5 ಗಂಟೆಗೆ ಪುರದೇವರ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವ ಕಾರ್ಯಕ್ರಮಗಳು ನಡೆಯಲಿದೆ.
ರವಿವಾರ ಫೆ.5ರಂದು ಇಲ್ಲಿಯ ಶ್ರೀ ರೇಣುಕಾದೇವಿ ದೇವಾಲಯದಲ್ಲಿ ಶ್ರೀದೇವಿಯ ಗದಗುಗೆ ಮಹಾಪೂಜೆ, ಮಹಾಭಿಷೇಕ, ಉಡಿ ಮತ್ತು ಹಡಲಗಿ ತುಂಬುವದು, ನೈವೇಧ್ಯ ಸಮರ್ಪನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.
ಸ್ಥಳೀಯ ಶ್ರೀಯಲ್ಲಮ್ಮದೇವಿ ಬಾನೆ ನೂತನ ಕಟ್ಟೆ ಉದ್ಘಾಟನೆ ಹಾಗೂ ಧÀರ್ಮಸಭೆ ಮುಂಜಾನೆ 10 ಗಂಟೆಗೆ ನಡೆಯಲಿದ್ದು, ಸುಣಧೋಳಿ ಅಭಿನವ ಶಿವಾನಂದ ಸ್ವಾಮಿಜಿ ದಿವ್ಯ ಸಾನಿಧ್ಯ, ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ ಸಮ್ಮುಖ ವಹಿಸಲಿದ್ದು, ಸ್ಥಳೀಯ ಶ್ರೀ ರೇಣುಕಾದೇವಿ ಜಾತ್ರಾ ಸಮಿತಿ ಅಧ್ಯಕ್ಷ ಮುತ್ತೆಪ್ಪ ಮಾಕಾಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಅರಭಾಂವಿ ಶಾಸಕ, ಕೆಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶ್ರೀ ಯಲ್ಲಮ್ಮದೇವಿ ಬಾನೆ ನೂತನ ಕಟ್ಟೆ ಉದ್ಘಾಟನೆ ನೆರವೇರಿಸಲಿದ್ದಾರೆ.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ಹಾಲಿ ಮತ್ತು ಮಾಜಿ ಗ್ರಾಪಂ, ತಾಪಂ, ಜಿಪಂ ಸದಸ್ಯರು, ಗಣ್ಯರು, ರಾಜಕೀಯ ಮುಖಂಡರು ಮುಖ್ಯಅತಿಥಿಗಳಾಗಿ, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಶ್ರೀ ರೇಣುಕಾದೇವಿ ಜಾತ್ರಾ ಮಹೋತ್ಸವ ಸಮಿತಿ ಸದಸ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಸ್ಥಳೀಯ ಶ್ರೀ ರೇಣುಕಾದೇವಿ ಜಾತ್ರಾ ಮಹೋತ್ಸವ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.