ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ಗಜಾನನ ಯುವಕ ಮಂಡಳದವರು ಸ್ಥಳೀಯ ಮಾರುಕಟ್ಟೆ ಕೇಂದ್ರ ಸ್ಥಳದಲ್ಲಿ ಪ್ರತಿಷ್ಠಾಪಿಸಿದ ಗಣಪತಿ ಮೂರ್ತಿ ಪ್ರಯುಕ್ತ ಸೆ.3ರಂದು ಸಾಯಂಕಾಲ 6ಗಂಟೆಗೆ ಸಕಲರಿಗೂ ಅನ್ನಪ್ರಸಾದ ಕಾರ್ಯಕ್ರಮ, ರಾತ್ರಿ 9 ಗಂಟೆಗೆ ಬಗರನಾಳದ ಸ್ನೇಹಜೀವಿ ಮೇಲೋಡಿಸ್ ಆರ್ಕೆಸ್ಟ್ರಾ ಇವರಿಂದ ರಸಮಂಜರಿ ಹಾಗೂ ಹಾಸ್ಯ ಕಾರ್ಯಕ್ರಮ ಇಲ್ಲಿಯ ಓಕಳಿ ಕೊಂಡದ ಶ್ರೀ ಗಜಾನನ ವೇದಿಕೆ ಮೇಲೆ ನಡೆಯಲಿದೆ.
ಆ.27ರಿಂದ ಸತತ 11 ದಿನಗಳ ಕಾಲ ಮುಂಜಾನೆ-ಸಂಜೆ ಸಮಯ ಪ್ರತಿಷ್ಠಾಪಿಸಿದ ಶ್ರೀ ಗಜಾನನ ಮೂರ್ತಿ, ಶ್ರೀಫಲಗಳು ಸಕಲ ಪೂಜೆ, ಪುನಸ್ಕಾರದಿಂದ ಪೂಜಿಸಲ್ಪಟ್ಟಿದ್ದು, ಸೆ.6ರಂದು ರಾತ್ರಿ 10ಗಂಟೆಗೆ ಗಣೇಶ ಮೂರ್ತಿ ವಿಸರ್ಜನೆ ಸಡಗರದಿಂದ ಜರುಗಲಿದೆ. ಸ್ಥಳೀಯರು ಸಂಗೀತ- ರಸಮಂಜರಿ ಮತ್ತು ಹಾಸ್ಯ ಕಾರ್ಯಕ್ರಮ ಹಾಗೂ ಗಣೇಶನ ವಿಸರ್ಜನೆ ಕಾರ್ಯಕ್ರಮದಲ್ಲಿ ಶಾಂತಿ-ಸೌಹಾರ್ದತೆಯಿಂದ ಸಹಕರಿಸಬೇಕು ಎಂದು ಇಲ್ಲಿಯ ಶ್ರೀ ಗಜಾನನ ಯುವಕ ಮಂಡಳ ತಿಳಿಸಿದೆ.